ಸಮಾಜದಲ್ಲಿ ಅಸಮಾನತೆ, ಮಾನವೀಯತೆ, ಸಮುದಾಯಕ್ಕೆ ಸಿಗದ ಸ್ಪಂದನೆ, ಬಡತನ ಸೇರಿದಂತೆ ಹಲವು ವಿಷಯಗಳ ಕುರಿತು ಚೆನ್ನಣ್ಣ ಅವರು ಕವನಗಳನ್ನು ಮತ್ತು ದೀರ್ಘ ಬರಹಗಳನ್ನು ಬರೆದಿದ್ದಾರೆ. ಎಲ್ಲವನ್ನೂ ಒಟ್ಟುಗೂಡಿಸಿ ಕೃತಿಗಳನ್ನು ತಂದರೆ, 10ಕ್ಕೂ ಹೆಚ್ಚು ಸಂಪುಟಗಳನ್ನು ಹೊರತರಬಹುದು. ಪ್ರಕಾಶನ ಸಂಸ್ಥೆಯವರು ಆಸಕ್ತಿ ತೋರಬೇಕು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.