ಕಪ್ಪು ಹಣ, ನಕಲಿ ನೋಟು ಪತ್ತೆ ಹಚ್ಚುವುದು, ಹಣದ ಅಕ್ರಮ ಚಲಾವಣೆ ಹಾಗೂ ಭಯೋತ್ಪಾದನೆಗೆ ಹಣದ ನೆರವು ತಡೆಯುವುದಷ್ಟೇ ನೋಟು ರದ್ದತಿಯ ಮೂಲ ಉದ್ದೇಶವಾಗಿರಲಿಲ್ಲ. ಜನರ ಮನೆಯಲ್ಲಿ ಸಂಗ್ರಹವಾಗಿ ಪರ್ಯಾಯ ಆರ್ಥಿಕ ವ್ಯವಸ್ಥೆಯಾಗಿ ರೂಪುಗೊಂಡಿದ್ದ ಹಣವನ್ನು ಪುನಃ ಬ್ಯಾಂಕಿಗೆ ತಂದು, ಹೂಡಿಕೆ ಮಾಡುವುದು ಕೂಡ ಪ್ರಮುಖ ಉದ್ದೇಶವಾಗಿತ್ತು. ನಮ್ಮ ದೃಷ್ಟಿಯಲ್ಲಿ ನೋಟು ರದ್ದತಿಯ ಉದ್ದೇಶ ಯಶಸ್ವಿಯಾಗಿದೆ ಎಂದರು.