<p><strong>ಮೈಸೂರು:</strong> ದಸರಾ ಮಹೋತ್ಸವಕ್ಕೆ ಗಜಪಯಣದ ಸಿದ್ಧತೆಗಳು ಅಂತಿಮ ಘಟ್ಟದಲ್ಲಿದ್ದು, ದಿನಾಂಕ ನಿಗದಿಯಷ್ಟೇ ಬಾಕಿ ಉಳಿದಿದೆ. ಆ. 15, 21 ಹಾಗೂ 22 ಈ ಮೂರು ದಿನಾಂಕಗಳನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ. ಆ. 9ರಂದು ಇಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ನೇತೃತ್ವ ದಲ್ಲಿ ನಡೆಯುವ ದಸರಾ ಪೂರ್ವಭಾವಿ ಸಭೆಯಲ್ಲಿ ದಿನಾಂಕ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಜೆ. ಹೊಸಮಠ ಅವರು ಒಟ್ಟು 15 ಆನೆಗಳಿಗೆ ದಸರೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ. ಇದರಲ್ಲಿ 12 ಆನೆಗಳು ಒಟ್ಟು ಎರಡು ಹಂತದಲ್ಲಿ ನಗರಕ್ಕೆ ಬರುವ ನಿರೀಕ್ಷೆ ಇದೆ.<br /> <br /> ಕಾವೇರಿ, ಚೈತ್ರಾ, ವಿಜಯಾ, ಸರಳ, ಅರ್ಜುನ, ಅಭಿಮನ್ಯು, ಬಲರಾಮ, ಗಜೇಂದ್ರ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಭೀಮಾ ಹಾಗೂ ಮೈಥಿಲಿ ಆನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಇಂದಿನಿಂದ ಕಾಮಗಾರಿಗೆ ಚಾಲನೆ: ಇಲ್ಲಿನ ಅರಮನೆ ಆವರಣದಲ್ಲಿ ಆನೆಗಳು ತಂಗುವುದಕ್ಕೆ ತಾತ್ಕಾಲಿಕ ಶಿಬಿರಗಳು, ಮಾವುತರು, ಕಾವಾಡಿಗಳಿಗೆ ತಾತ್ಕಾಲಿಕ ಶೆಡ್ಗಳ ನಿರ್ಮಾಣ ಕಾರ್ಯ ಸೋಮವಾರದಿಂದ ಆರಂಭವಾಗಲಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿ ಶೆಡ್ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.<br /> <br /> <strong>ಆನೆಗಳ ನಿರ್ವಹಣೆ ಖರ್ಚು ಭರಿಸಲು ಪ್ರಸ್ತಾವ:</strong> ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ನಿರ್ವಹಣಾ ವೆಚ್ಚವನ್ನು ಶೇ 100ರಷ್ಟು ದಸರಾ ಉನ್ನತಮಟ್ಟದ ಸಮಿತಿಯೇ ಭರಿಸಬೇಕು ಎಂದು ಅರಣ್ಯ ಇಲಾಖೆ ಹೊಸ ಪ್ರಸ್ತಾವ ವೊಂದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.<br /> <br /> ಇದುವರೆಗೂ ದಸರಾ ಉನ್ನತಮಟ್ಟದ ಸಮಿತಿಯಲ್ಲಿ ತೀರ್ಮಾನವಾದಂತೆ ಶೇಕಡಾವಾರು ಪ್ರಮಾಣದಲ್ಲಿ ಅರಣ್ಯ ಇಲಾಖೆ ಹಾಗೂ ಸಮಿತಿ ವೆಚ್ಚವನ್ನು ಭರಿಸುತ್ತಿದ್ದವು. ಕಳೆದ ಬಾರಿ ₹ 44 ಲಕ್ಷ ವೆಚ್ಚವಾಗಿತ್ತು. ಇದರಲ್ಲಿ ಶೇ 60ರಷ್ಟನ್ನು ಇಲಾಖೆ ಹಾಗೂ ಶೇ 40ರಷ್ಟನ್ನು ಸಮಿತಿ ಭರಿಸಿತ್ತು. ಇದು ಅರಣ್ಯ ಇಲಾಖೆಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಆ. 9ರಂದು ನಡೆಯುವ ದಸರಾ ಕುರಿತ ಉನ್ನತಮಟ್ಟದ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದಸರಾ ಮಹೋತ್ಸವಕ್ಕೆ ಗಜಪಯಣದ ಸಿದ್ಧತೆಗಳು ಅಂತಿಮ ಘಟ್ಟದಲ್ಲಿದ್ದು, ದಿನಾಂಕ ನಿಗದಿಯಷ್ಟೇ ಬಾಕಿ ಉಳಿದಿದೆ. ಆ. 15, 21 ಹಾಗೂ 22 ಈ ಮೂರು ದಿನಾಂಕಗಳನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ. ಆ. 9ರಂದು ಇಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ನೇತೃತ್ವ ದಲ್ಲಿ ನಡೆಯುವ ದಸರಾ ಪೂರ್ವಭಾವಿ ಸಭೆಯಲ್ಲಿ ದಿನಾಂಕ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಜೆ. ಹೊಸಮಠ ಅವರು ಒಟ್ಟು 15 ಆನೆಗಳಿಗೆ ದಸರೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ. ಇದರಲ್ಲಿ 12 ಆನೆಗಳು ಒಟ್ಟು ಎರಡು ಹಂತದಲ್ಲಿ ನಗರಕ್ಕೆ ಬರುವ ನಿರೀಕ್ಷೆ ಇದೆ.<br /> <br /> ಕಾವೇರಿ, ಚೈತ್ರಾ, ವಿಜಯಾ, ಸರಳ, ಅರ್ಜುನ, ಅಭಿಮನ್ಯು, ಬಲರಾಮ, ಗಜೇಂದ್ರ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಭೀಮಾ ಹಾಗೂ ಮೈಥಿಲಿ ಆನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಇಂದಿನಿಂದ ಕಾಮಗಾರಿಗೆ ಚಾಲನೆ: ಇಲ್ಲಿನ ಅರಮನೆ ಆವರಣದಲ್ಲಿ ಆನೆಗಳು ತಂಗುವುದಕ್ಕೆ ತಾತ್ಕಾಲಿಕ ಶಿಬಿರಗಳು, ಮಾವುತರು, ಕಾವಾಡಿಗಳಿಗೆ ತಾತ್ಕಾಲಿಕ ಶೆಡ್ಗಳ ನಿರ್ಮಾಣ ಕಾರ್ಯ ಸೋಮವಾರದಿಂದ ಆರಂಭವಾಗಲಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿ ಶೆಡ್ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.<br /> <br /> <strong>ಆನೆಗಳ ನಿರ್ವಹಣೆ ಖರ್ಚು ಭರಿಸಲು ಪ್ರಸ್ತಾವ:</strong> ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ನಿರ್ವಹಣಾ ವೆಚ್ಚವನ್ನು ಶೇ 100ರಷ್ಟು ದಸರಾ ಉನ್ನತಮಟ್ಟದ ಸಮಿತಿಯೇ ಭರಿಸಬೇಕು ಎಂದು ಅರಣ್ಯ ಇಲಾಖೆ ಹೊಸ ಪ್ರಸ್ತಾವ ವೊಂದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.<br /> <br /> ಇದುವರೆಗೂ ದಸರಾ ಉನ್ನತಮಟ್ಟದ ಸಮಿತಿಯಲ್ಲಿ ತೀರ್ಮಾನವಾದಂತೆ ಶೇಕಡಾವಾರು ಪ್ರಮಾಣದಲ್ಲಿ ಅರಣ್ಯ ಇಲಾಖೆ ಹಾಗೂ ಸಮಿತಿ ವೆಚ್ಚವನ್ನು ಭರಿಸುತ್ತಿದ್ದವು. ಕಳೆದ ಬಾರಿ ₹ 44 ಲಕ್ಷ ವೆಚ್ಚವಾಗಿತ್ತು. ಇದರಲ್ಲಿ ಶೇ 60ರಷ್ಟನ್ನು ಇಲಾಖೆ ಹಾಗೂ ಶೇ 40ರಷ್ಟನ್ನು ಸಮಿತಿ ಭರಿಸಿತ್ತು. ಇದು ಅರಣ್ಯ ಇಲಾಖೆಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಆ. 9ರಂದು ನಡೆಯುವ ದಸರಾ ಕುರಿತ ಉನ್ನತಮಟ್ಟದ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>