<p><strong>ಕಾರವಾರ: </strong>ಆಕಸ್ಮಿಕ ಬೆಂಕಿ ತಗುಲಿ ನಗರದ ಹೂವಿನ ಚೌಕ್ನಲ್ಲಿರುವ ಕಿರಾಣಿ ಅಂಗಡಿಯೊಂದರ ಸ್ಟೋರ್ನಲ್ಲಿದ್ದ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಮಧ್ಯರಾತ್ರಿ 2.30ಗಂಟೆ ಸುಮಾರಿಗೆ ಸಂಭವಿಸಿದೆ.</p>.<p>ಕಿರಾಣಿ ಅಂಗಡಿ ಗೋವರ್ಧನ ಮಹಾಲದಾರ್, ಮಂಗೇಶ ಮಹಾಲದಾರ್ ಎನ್ನುವವರಿಗೆ ಸೇರಿದ್ದು ಅಂದಾಜು ಆರು ಲಕ್ಷ ರೂಪಾಯಿ ಮೌಲ್ಯದ ಕಿರಾಣಿ ಸಾಮಾನುಗಳು ಸುಟ್ಟುಹೋಗಿವೆ. ಸ್ಟೋರ್ ರೂಮ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿರುವುದು ಮೊದಲು ಗೊತ್ತಾಗಿರಲಿಲ್ಲ.</p>.<p>ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಗಳು ಎಚ್ಚರಗೊಂಡು ಬೆಂಕಿಯನ್ನು ಕಂಡು ಅಂಗಡಿಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ ನಂತರ ಅಗ್ನಿಶಾಮಕ ದಳದವರು ಬಂದು ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸತತ ಐದು ಗಂಟೆಗಳ ಪ್ರಯತ್ನದ ನಂತರ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.</p>.<p>ಸ್ಟೋರ್ನಲ್ಲಿ ಬಹುತೇಕ ಕಿರಾಣಿ ಸಾಮಾನುಗಳಿದ್ದು ಅವುಗಳೆಲ್ಲ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆ ಎಷ್ಟಿತ್ತೆಂದರೆ ಸಾಮಾನು ಇಡುವ ಕಬ್ಬಿಣದ ರ್ಯಾಕ್ಗಳು ಸುಟ್ಟು ಕರಕಲಾಗಿವೆ. ಪ್ಲಾಸ್ಟಿಕ್ ವಸ್ತುಗಳು ಅಂಟಿನಂತಾಗಿವೆ.</p>.<p>ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜಿ.ತಿಪ್ಪೆಸ್ವಾಮಿ, ಠಾಣಾಧಿಕಾರಿ ವಿನಾಯಕ ಹಟ್ಟೆಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಆಕಸ್ಮಿಕ ಬೆಂಕಿ ತಗುಲಿ ನಗರದ ಹೂವಿನ ಚೌಕ್ನಲ್ಲಿರುವ ಕಿರಾಣಿ ಅಂಗಡಿಯೊಂದರ ಸ್ಟೋರ್ನಲ್ಲಿದ್ದ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಮಧ್ಯರಾತ್ರಿ 2.30ಗಂಟೆ ಸುಮಾರಿಗೆ ಸಂಭವಿಸಿದೆ.</p>.<p>ಕಿರಾಣಿ ಅಂಗಡಿ ಗೋವರ್ಧನ ಮಹಾಲದಾರ್, ಮಂಗೇಶ ಮಹಾಲದಾರ್ ಎನ್ನುವವರಿಗೆ ಸೇರಿದ್ದು ಅಂದಾಜು ಆರು ಲಕ್ಷ ರೂಪಾಯಿ ಮೌಲ್ಯದ ಕಿರಾಣಿ ಸಾಮಾನುಗಳು ಸುಟ್ಟುಹೋಗಿವೆ. ಸ್ಟೋರ್ ರೂಮ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿರುವುದು ಮೊದಲು ಗೊತ್ತಾಗಿರಲಿಲ್ಲ.</p>.<p>ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಗಳು ಎಚ್ಚರಗೊಂಡು ಬೆಂಕಿಯನ್ನು ಕಂಡು ಅಂಗಡಿಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ ನಂತರ ಅಗ್ನಿಶಾಮಕ ದಳದವರು ಬಂದು ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸತತ ಐದು ಗಂಟೆಗಳ ಪ್ರಯತ್ನದ ನಂತರ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.</p>.<p>ಸ್ಟೋರ್ನಲ್ಲಿ ಬಹುತೇಕ ಕಿರಾಣಿ ಸಾಮಾನುಗಳಿದ್ದು ಅವುಗಳೆಲ್ಲ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆ ಎಷ್ಟಿತ್ತೆಂದರೆ ಸಾಮಾನು ಇಡುವ ಕಬ್ಬಿಣದ ರ್ಯಾಕ್ಗಳು ಸುಟ್ಟು ಕರಕಲಾಗಿವೆ. ಪ್ಲಾಸ್ಟಿಕ್ ವಸ್ತುಗಳು ಅಂಟಿನಂತಾಗಿವೆ.</p>.<p>ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜಿ.ತಿಪ್ಪೆಸ್ವಾಮಿ, ಠಾಣಾಧಿಕಾರಿ ವಿನಾಯಕ ಹಟ್ಟೆಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>