<p><strong><span style="font-size: medium">ಅಜ್ಮೇರ್ (ಪಿಟಿಐ): </span></strong><span style="font-size: medium">ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ 799ನೇ ಉರುಸ್ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ~ಚಾದರ~ ಸಮರ್ಪಿಸಿದರು. </span></p>.<p><span style="font-size: medium">ರಾಷ್ಟ್ರದಲ್ಲಿ ಜಾತ್ಯಾತೀತ ಮೌಲ್ಯಗಳ್ನನು ಉಜ್ವಲಗೊಳಿಸಿದ ಸೂಫಿ ಸಂತ ಎಂದು ಬಣ್ಣಿಸಿರುವ ಸೋನಿಯಾ ಅವರ ಪರವಾಗಿ ರಾಜಾಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ದರ್ಗಾಕ್ಕೆ ಚಾದರವನ್ನು ಸಮರ್ಪಿಸಿದರು. ಚಾದರದೊಂದಿಗೆ ಪತ್ರವನ್ನೂ ರವಾನಿಸಿರುವ ಸೋನಿಯಾ ~ಖ್ವಾಜಾ ಸಾಹೇಬ್ ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿರಲಿ. <span style="font-size: medium">ಭಾರತೀಯ ಸಂಸ್ಕೃತಿಯ ಸಂಕೇತದಂತಿರುವ ಖ್ವಾಜಾ ಅವರ ಜಾತ್ಯಾತೀಯ ಮೌಲ್ಯಗಳು ಇಂದು ನಮ್ಮ ಸಮಾಜದಲ್ಲಿ ಕಾಣಬಹುದಾಗಿದೆ. ಶತಕಗಳೇ ಉರುಳಿದರೂ ಅವರ ಸಂದೇಶ ಇಂದಿಗೂ ಪ್ರಸ್ತುತ </span>~ ಎಂದು ತಮ್ಮ ಶುಭಹಾರೈಕೆ ಪತ್ರದಲ್ಲಿ ತಿಳಿಸಿದ್ದಾರೆ. </span></p>.<p><span style="font-size: medium">ಪತ್ರವನ್ನು ಕೇಂದ್ರ ಮಂತ್ರಿ ಮುಕುಲ್ ವಾಸ್ನಿಕ್ ದರ್ಗಾದ ಮೆಹ್ಫಿಲ್ ಖಾನಾದಲ್ಲಿ ಓದಿ ಹೇಳಿದರು. ಗಾಂಧಿ ಕುಟುಂಬದ ಖಾದೀಮ್ ಆದ ಸಯೆದ್ ಗಾನಿ ಗುರ್ದೇಜಿ ಅವರು ಯುಪಿಎ ಅಧ್ಯಕ್ಷೆ ಅವರಿಗೆ ಚುನಾರಿಯನ್ನು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಮಂತ್ರಿಗಳಾದ ಮುಕುಲ್ ವಾಸ್ನಿಕ್, ಡಾ. ಸಿ.ಪಿ. ಜೋಷಿ, ಮಹಾದೇವ್ ಸಿಂಗ್ ಖಾಂಡೇಲಾ, ಸಚಿನ್ ಪೈಲೆಟ್ ಹಾಗೂ ಇತರ ಪಿಸಿಸಿ ನಾಯಕರು ಉಪಸ್ಥಿತರಿದ್ದರು. </span></p>.<p><span style="font-size: medium">ಖ್ವಾಜಾ ಸಾಹೇಬ್ ಅವರ 799ನೇ ಉರುಸ್ ಜೂನ್ 3ರಂದು ಆರಂಭವಾಗಿ ಜೂನ್ 9ರವರೆಗೂ ನಡೆಯಲಿದೆ. ಇದು ಅಜ್ಮೇರ್ ನ ವಾರ್ಷಿಕ ಹಬ್ಬವಾಗಿದೆ. ಸೂಫಿ ಸಂತರ ಪುಣ್ಯ ತಿಥಿಯನ್ನು ರಾಜಾಸ್ತಾನ ಆಯೋಜಿಸಲಿದೆ. ಇಸ್ಲಾಂ ಚಂದ್ರಮಾನದ ಪ್ರಕಾರ ಏಳನೇ ತಿಂಗಳಲ್ಲಿ ಆಚರಿಸಲಾಗುವುದು. ಪ್ರತಿ ವರ್ಷ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span style="font-size: medium">ಅಜ್ಮೇರ್ (ಪಿಟಿಐ): </span></strong><span style="font-size: medium">ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ 799ನೇ ಉರುಸ್ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ~ಚಾದರ~ ಸಮರ್ಪಿಸಿದರು. </span></p>.<p><span style="font-size: medium">ರಾಷ್ಟ್ರದಲ್ಲಿ ಜಾತ್ಯಾತೀತ ಮೌಲ್ಯಗಳ್ನನು ಉಜ್ವಲಗೊಳಿಸಿದ ಸೂಫಿ ಸಂತ ಎಂದು ಬಣ್ಣಿಸಿರುವ ಸೋನಿಯಾ ಅವರ ಪರವಾಗಿ ರಾಜಾಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ದರ್ಗಾಕ್ಕೆ ಚಾದರವನ್ನು ಸಮರ್ಪಿಸಿದರು. ಚಾದರದೊಂದಿಗೆ ಪತ್ರವನ್ನೂ ರವಾನಿಸಿರುವ ಸೋನಿಯಾ ~ಖ್ವಾಜಾ ಸಾಹೇಬ್ ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿರಲಿ. <span style="font-size: medium">ಭಾರತೀಯ ಸಂಸ್ಕೃತಿಯ ಸಂಕೇತದಂತಿರುವ ಖ್ವಾಜಾ ಅವರ ಜಾತ್ಯಾತೀಯ ಮೌಲ್ಯಗಳು ಇಂದು ನಮ್ಮ ಸಮಾಜದಲ್ಲಿ ಕಾಣಬಹುದಾಗಿದೆ. ಶತಕಗಳೇ ಉರುಳಿದರೂ ಅವರ ಸಂದೇಶ ಇಂದಿಗೂ ಪ್ರಸ್ತುತ </span>~ ಎಂದು ತಮ್ಮ ಶುಭಹಾರೈಕೆ ಪತ್ರದಲ್ಲಿ ತಿಳಿಸಿದ್ದಾರೆ. </span></p>.<p><span style="font-size: medium">ಪತ್ರವನ್ನು ಕೇಂದ್ರ ಮಂತ್ರಿ ಮುಕುಲ್ ವಾಸ್ನಿಕ್ ದರ್ಗಾದ ಮೆಹ್ಫಿಲ್ ಖಾನಾದಲ್ಲಿ ಓದಿ ಹೇಳಿದರು. ಗಾಂಧಿ ಕುಟುಂಬದ ಖಾದೀಮ್ ಆದ ಸಯೆದ್ ಗಾನಿ ಗುರ್ದೇಜಿ ಅವರು ಯುಪಿಎ ಅಧ್ಯಕ್ಷೆ ಅವರಿಗೆ ಚುನಾರಿಯನ್ನು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಮಂತ್ರಿಗಳಾದ ಮುಕುಲ್ ವಾಸ್ನಿಕ್, ಡಾ. ಸಿ.ಪಿ. ಜೋಷಿ, ಮಹಾದೇವ್ ಸಿಂಗ್ ಖಾಂಡೇಲಾ, ಸಚಿನ್ ಪೈಲೆಟ್ ಹಾಗೂ ಇತರ ಪಿಸಿಸಿ ನಾಯಕರು ಉಪಸ್ಥಿತರಿದ್ದರು. </span></p>.<p><span style="font-size: medium">ಖ್ವಾಜಾ ಸಾಹೇಬ್ ಅವರ 799ನೇ ಉರುಸ್ ಜೂನ್ 3ರಂದು ಆರಂಭವಾಗಿ ಜೂನ್ 9ರವರೆಗೂ ನಡೆಯಲಿದೆ. ಇದು ಅಜ್ಮೇರ್ ನ ವಾರ್ಷಿಕ ಹಬ್ಬವಾಗಿದೆ. ಸೂಫಿ ಸಂತರ ಪುಣ್ಯ ತಿಥಿಯನ್ನು ರಾಜಾಸ್ತಾನ ಆಯೋಜಿಸಲಿದೆ. ಇಸ್ಲಾಂ ಚಂದ್ರಮಾನದ ಪ್ರಕಾರ ಏಳನೇ ತಿಂಗಳಲ್ಲಿ ಆಚರಿಸಲಾಗುವುದು. ಪ್ರತಿ ವರ್ಷ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>