<p>ಕಾಶ್ಮೀರ ಕಣಿವೆಯಲ್ಲಿ ಜನಮತ ಸಂಗ್ರಹಿಸುವ ಧೋರಣೆಗೆ ಬೆಂಬಲಿಸಿದ ಹಿರಿಯ ವಕೀಲ ಪ್ರಶಾಂತ್ಭೂಷಣ್ ವಿರುದ್ಧ ಪ್ರತಿಕ್ರಿಯಿಸುತ್ತ ಅಣ್ಣಾ ಹಜಾರೆ `ಈಗೇನಾದರೂ ಪಾಕ್ ವಿರುದ್ಧ ಯುದ್ಧ ನಡೆದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ಧ~ (ಪ್ರ.ವಾ. ಅ.6) ಎಂದು ಘೋಷಿಸಿಕೊಳ್ಳುವ ಮೂಲಕ ಹಿಂದುತ್ವವಾದಿಯಂತೆ ಮುಸಲ್ಮಾನರ ವಿರುದ್ಧ ತಮ್ಮ ಎದೆಯ ನಂಜನ್ನೆಲ್ಲಾ ಹೊರಹಾಕಿದ್ದಾರೆ.<br /> <br /> ಗಾಂಧೀಜಿ ಈಗೇನಾದರೂ ಬದುಕಿದ್ದು ಪಾಕ್ ವಿರುದ್ಧ ಯುದ್ಧ ಸಂಭವಿಸಿದ್ದರೆ ಏನು ಮಾಡುತ್ತಿದ್ದರು? ಎಂದರೆ ನೇರವಾಗಿ ಯುದ್ಧಭೂಮಿಗೆ ತೆರಳಿ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ಉಪವಾಸ ಸತ್ಯಾಗ್ರಹ ಹೂಡುತ್ತಿದ್ದರು. ಗಾಂಧೀಜಿ ಕೋಮು ಸೌಹಾರ್ದಕ್ಕಾಗಿ ತಮ್ಮನ್ನು ತಾವೇ ಗಂಧ ತೇದಂತೆ ತೇದುಕೊಂಡು, ಕೊನೆಗೆ ಆ ಕಾರಣವಾಗಿಯೇ ಬಲಿದಾನವಾದರು ಕೂಡ.<br /> <br /> ಇಂಥ ಮಹಾತ್ಮನೊಂದಿಗೆ ರಾಜಕೀಯ ಪಕ್ಷವೊಂದನ್ನು ಟೀಕಿಸುವ, ಇನ್ನೊಂದನ್ನು ಜಾಣ ಕಿವುಡನಂತೆ ಬೆಂಬಲಿಸುವ, ಕಟ್ಟಾ ಹಿಂದುತ್ವವಾದಿಯಂತೆ ಯುವ ಜನಾಂಗವನ್ನು ಪಾಕ್ ವಿರುದ್ಧ ಪ್ರಚೋದಿಸುವ ಅಣ್ಣಾ ಹಜಾರೆಯನ್ನು ಹೋಲಿಸುವುದಾದರೂ ಹೇಗೆ? <br /> <br /> ಗಾಂಧಿ ಟೋಪಿ ಧರಿಸಿದವರೆಲ್ಲಾ, ಉಪವಾಸ ಕುಳಿತವರೆಲ್ಲಾ ಗಾಂಧೀಜಿ ಆಗಲಾರರು. ಇಂಥವರನ್ನು ಗಾಂಧಿ ಎಂದು ಬಿಂಬಿಸುವುದೇ ಅಹಿಂಸಾವಾದಿ ಗಾಂಧೀ ಮೌಲ್ಯಗಳಿಗೆ ನಾವು ಮಾಡುವ ಅಪಚಾರವಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಶ್ಮೀರ ಕಣಿವೆಯಲ್ಲಿ ಜನಮತ ಸಂಗ್ರಹಿಸುವ ಧೋರಣೆಗೆ ಬೆಂಬಲಿಸಿದ ಹಿರಿಯ ವಕೀಲ ಪ್ರಶಾಂತ್ಭೂಷಣ್ ವಿರುದ್ಧ ಪ್ರತಿಕ್ರಿಯಿಸುತ್ತ ಅಣ್ಣಾ ಹಜಾರೆ `ಈಗೇನಾದರೂ ಪಾಕ್ ವಿರುದ್ಧ ಯುದ್ಧ ನಡೆದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ಧ~ (ಪ್ರ.ವಾ. ಅ.6) ಎಂದು ಘೋಷಿಸಿಕೊಳ್ಳುವ ಮೂಲಕ ಹಿಂದುತ್ವವಾದಿಯಂತೆ ಮುಸಲ್ಮಾನರ ವಿರುದ್ಧ ತಮ್ಮ ಎದೆಯ ನಂಜನ್ನೆಲ್ಲಾ ಹೊರಹಾಕಿದ್ದಾರೆ.<br /> <br /> ಗಾಂಧೀಜಿ ಈಗೇನಾದರೂ ಬದುಕಿದ್ದು ಪಾಕ್ ವಿರುದ್ಧ ಯುದ್ಧ ಸಂಭವಿಸಿದ್ದರೆ ಏನು ಮಾಡುತ್ತಿದ್ದರು? ಎಂದರೆ ನೇರವಾಗಿ ಯುದ್ಧಭೂಮಿಗೆ ತೆರಳಿ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ಉಪವಾಸ ಸತ್ಯಾಗ್ರಹ ಹೂಡುತ್ತಿದ್ದರು. ಗಾಂಧೀಜಿ ಕೋಮು ಸೌಹಾರ್ದಕ್ಕಾಗಿ ತಮ್ಮನ್ನು ತಾವೇ ಗಂಧ ತೇದಂತೆ ತೇದುಕೊಂಡು, ಕೊನೆಗೆ ಆ ಕಾರಣವಾಗಿಯೇ ಬಲಿದಾನವಾದರು ಕೂಡ.<br /> <br /> ಇಂಥ ಮಹಾತ್ಮನೊಂದಿಗೆ ರಾಜಕೀಯ ಪಕ್ಷವೊಂದನ್ನು ಟೀಕಿಸುವ, ಇನ್ನೊಂದನ್ನು ಜಾಣ ಕಿವುಡನಂತೆ ಬೆಂಬಲಿಸುವ, ಕಟ್ಟಾ ಹಿಂದುತ್ವವಾದಿಯಂತೆ ಯುವ ಜನಾಂಗವನ್ನು ಪಾಕ್ ವಿರುದ್ಧ ಪ್ರಚೋದಿಸುವ ಅಣ್ಣಾ ಹಜಾರೆಯನ್ನು ಹೋಲಿಸುವುದಾದರೂ ಹೇಗೆ? <br /> <br /> ಗಾಂಧಿ ಟೋಪಿ ಧರಿಸಿದವರೆಲ್ಲಾ, ಉಪವಾಸ ಕುಳಿತವರೆಲ್ಲಾ ಗಾಂಧೀಜಿ ಆಗಲಾರರು. ಇಂಥವರನ್ನು ಗಾಂಧಿ ಎಂದು ಬಿಂಬಿಸುವುದೇ ಅಹಿಂಸಾವಾದಿ ಗಾಂಧೀ ಮೌಲ್ಯಗಳಿಗೆ ನಾವು ಮಾಡುವ ಅಪಚಾರವಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>