<p><strong>ನವದೆಹಲಿ (ಪಿಟಿಐ):</strong> ಅಮೆರಿಕದೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಲ್ಲಿ ತೋರಿದಂಥ ಬದ್ಧತೆಯನ್ನು ಪ್ರಧಾನಿ ಮನಮೋಹನ್ ಸಿಂಗ್, ಲೋಕಪಾಲ್ ಮಸೂದೆ ವಿಷಯದಲ್ಲಿಯೂ ಪ್ರದರ್ಶಿಸಬೇಕು ಎಂದು ಬುಧವಾರ ಅಣ್ಣಾ ಹಜಾರೆ ತಂಡ ಹೇಳಿದೆ.<br /> <br /> ಪ್ರಧಾನಿ ಕಚೇರಿಯನ್ನೂ ಮಸೂದೆ ವ್ಯಾಪ್ತಿಗೆ ತರಲು ಹಿಂಜರಿಯುವುದಿಲ್ಲ ಎಂದು ಸಿಂಗ್, ಪ್ರಧಾನ ಸಂಪಾದಕರೊಂದಿಗಿನ ಸಂವಾದದಲ್ಲಿ ಸ್ಪಷ್ಟಪಡಿಸಿದ ಬೆನ್ನಲ್ಲಿಯೇ ಹಜಾರೆ ತಂಡವು ಈ ಸಲಹೆ ನೀಡಿದೆ.<br /> <br /> `ಸರ್ಕಾರವು, ಈ ವಿಷಯದಲ್ಲಿ ನಾಗರಿಕ ಸಮಾಜದ ಜತೆ ಹೆಜ್ಜೆ ಹಾಕಲಿದೆ. ಆದರೆ ಯಾವುದೇ ತಂಡವೂ ತಮ್ಮ ಅನಿಸಿಕೆಯೇ ಅಂತಿಮ ಎಂದು ಒತ್ತಡ ಹೇರಲು ಸಾಧ್ಯವಿಲ್ಲ~ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಡಿ, ` ನಾವು ಈ ವಿಷಯದಲ್ಲಿ ಬಹಿರಂಗ ಚರ್ಚೆಗೆ ಮುಂದಾಗಿದ್ದು, ಸರ್ಕಾರವನ್ನು ಸಂಪರ್ಕಿಸ್ದ್ದಿದೆವು~ ಎಂದರು.<br /> </p>.<table align="right" border="2" cellpadding="2" cellspacing="2" width="300"> <tbody> <tr> <td><strong>ಅಣ್ಣಾ-ಸೋನಿಯಾ ಭೇಟಿ ಇಂದು<br /> </strong><span style="font-size: small">ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿಯಾಗುತ್ತಿರುವ ಅಣ್ಣಾ ಹಜಾರೆ, ಲೋಕಪಾಲ್ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಬೇಕೆಂದು ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.<br /> <br /> ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರಂಥ ಪ್ರಾಮಾಣಿಕ ವ್ಯಕ್ತಿ ಸಲಹೆ ನೀಡಿರುವಾಗ, ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಲು ಇರುವ ಅಡ್ಡಿಯಾದರೂ ಏನು ಎಂದು ಹಜಾರೆ, ಸೋನಿಯಾ ಅವರನ್ನು ಪ್ರಶ್ನಿಸಲಿದ್ದಾರೆ.<br /> <br /> ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸೋನಿಯಾ ಅವರಿಗೆ ತಿಳಿಸುವುದಾಗಿ ಹಜಾರೆ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. <br /> <br /> <strong>ಕಾರಟ್ ಭೇಟಿ</strong>: ಲೋಕಪಾಲ್ ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸ್ಪಷ್ಟಪಡಿಸಲು ಬುಧವಾರ ಅಣ್ಣಾ ಹಜಾರೆ ತಂಡವು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿ ಮಾಡಿತು.</span></td> </tr> <tr> <td> </td> </tr> </tbody> </table>.<p><br /> ಪ್ರತಿಯೊಂದು ಅಭಿಪ್ರಾಯಕ್ಕೂ ಸಮರ್ಥನೆ ಇರಬೇಕಾಗುತ್ತದೆ. ಹಾಗಾಗಿಯೇ ಹಜಾರೆ ತಂಡವು ಈ ಸಂಬಂಧ ಬಹಿರಂಗ ಚರ್ಚೆಗೆ ಅವಕಾಶ ನೀಡಬೇಕು ಅಥವಾ ಈ ವಿಷಯದಲ್ಲಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಲು ಜನರ ಅನಿಸಿಕೆ ಆಲಿಸಬೇಕೆಂದು ಸರ್ಕಾರವನ್ನು ಸತತವಾಗಿ ಒತ್ತಾಯಿಸುತ್ತಲೇ ಇದೆ.<br /> <br /> `ದೇಶದಾದ್ಯಂತ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ಬಗ್ಗೆ ಜನರ ಅಭಿಪ್ರಾಯಗಳನ್ನು ವರದಿಗಳು, ಸಮೀಕ್ಷೆ ಹಾಗೂ ಅಧ್ಯಯನಗಳ ಮೂಲಕ ಪ್ರಕಟಿಸಲಾಗುತ್ತಿದೆ. ಇವನ್ನೆಲ್ಲ ಕಡೆಗಣಿಸಲಾಗದು~ ಎಂದು ಬೇಡಿ ಅವರು ತಿಳಿಸಿದರು.<br /> <br /> ಈ ವಿಷಯದಲ್ಲಿ ತಾವು ರಾಜಕೀಯ ಪಕ್ಷಗಳ ಮಾರ್ಗದರ್ಶನ ಪಡೆಯಬಯಸುವುದಾಗಿ ಸಿಂಗ್ ಹೇಳಿದ್ದಾರೆ. ಪ್ರಧಾನಿ ಕಚೇರಿಯನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಅಮೆರಿಕದೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಲ್ಲಿ ತೋರಿದಂಥ ಬದ್ಧತೆಯನ್ನು ಪ್ರಧಾನಿ ಮನಮೋಹನ್ ಸಿಂಗ್, ಲೋಕಪಾಲ್ ಮಸೂದೆ ವಿಷಯದಲ್ಲಿಯೂ ಪ್ರದರ್ಶಿಸಬೇಕು ಎಂದು ಬುಧವಾರ ಅಣ್ಣಾ ಹಜಾರೆ ತಂಡ ಹೇಳಿದೆ.<br /> <br /> ಪ್ರಧಾನಿ ಕಚೇರಿಯನ್ನೂ ಮಸೂದೆ ವ್ಯಾಪ್ತಿಗೆ ತರಲು ಹಿಂಜರಿಯುವುದಿಲ್ಲ ಎಂದು ಸಿಂಗ್, ಪ್ರಧಾನ ಸಂಪಾದಕರೊಂದಿಗಿನ ಸಂವಾದದಲ್ಲಿ ಸ್ಪಷ್ಟಪಡಿಸಿದ ಬೆನ್ನಲ್ಲಿಯೇ ಹಜಾರೆ ತಂಡವು ಈ ಸಲಹೆ ನೀಡಿದೆ.<br /> <br /> `ಸರ್ಕಾರವು, ಈ ವಿಷಯದಲ್ಲಿ ನಾಗರಿಕ ಸಮಾಜದ ಜತೆ ಹೆಜ್ಜೆ ಹಾಕಲಿದೆ. ಆದರೆ ಯಾವುದೇ ತಂಡವೂ ತಮ್ಮ ಅನಿಸಿಕೆಯೇ ಅಂತಿಮ ಎಂದು ಒತ್ತಡ ಹೇರಲು ಸಾಧ್ಯವಿಲ್ಲ~ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಡಿ, ` ನಾವು ಈ ವಿಷಯದಲ್ಲಿ ಬಹಿರಂಗ ಚರ್ಚೆಗೆ ಮುಂದಾಗಿದ್ದು, ಸರ್ಕಾರವನ್ನು ಸಂಪರ್ಕಿಸ್ದ್ದಿದೆವು~ ಎಂದರು.<br /> </p>.<table align="right" border="2" cellpadding="2" cellspacing="2" width="300"> <tbody> <tr> <td><strong>ಅಣ್ಣಾ-ಸೋನಿಯಾ ಭೇಟಿ ಇಂದು<br /> </strong><span style="font-size: small">ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿಯಾಗುತ್ತಿರುವ ಅಣ್ಣಾ ಹಜಾರೆ, ಲೋಕಪಾಲ್ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಬೇಕೆಂದು ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.<br /> <br /> ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರಂಥ ಪ್ರಾಮಾಣಿಕ ವ್ಯಕ್ತಿ ಸಲಹೆ ನೀಡಿರುವಾಗ, ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಲು ಇರುವ ಅಡ್ಡಿಯಾದರೂ ಏನು ಎಂದು ಹಜಾರೆ, ಸೋನಿಯಾ ಅವರನ್ನು ಪ್ರಶ್ನಿಸಲಿದ್ದಾರೆ.<br /> <br /> ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸೋನಿಯಾ ಅವರಿಗೆ ತಿಳಿಸುವುದಾಗಿ ಹಜಾರೆ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. <br /> <br /> <strong>ಕಾರಟ್ ಭೇಟಿ</strong>: ಲೋಕಪಾಲ್ ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸ್ಪಷ್ಟಪಡಿಸಲು ಬುಧವಾರ ಅಣ್ಣಾ ಹಜಾರೆ ತಂಡವು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿ ಮಾಡಿತು.</span></td> </tr> <tr> <td> </td> </tr> </tbody> </table>.<p><br /> ಪ್ರತಿಯೊಂದು ಅಭಿಪ್ರಾಯಕ್ಕೂ ಸಮರ್ಥನೆ ಇರಬೇಕಾಗುತ್ತದೆ. ಹಾಗಾಗಿಯೇ ಹಜಾರೆ ತಂಡವು ಈ ಸಂಬಂಧ ಬಹಿರಂಗ ಚರ್ಚೆಗೆ ಅವಕಾಶ ನೀಡಬೇಕು ಅಥವಾ ಈ ವಿಷಯದಲ್ಲಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಲು ಜನರ ಅನಿಸಿಕೆ ಆಲಿಸಬೇಕೆಂದು ಸರ್ಕಾರವನ್ನು ಸತತವಾಗಿ ಒತ್ತಾಯಿಸುತ್ತಲೇ ಇದೆ.<br /> <br /> `ದೇಶದಾದ್ಯಂತ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ಬಗ್ಗೆ ಜನರ ಅಭಿಪ್ರಾಯಗಳನ್ನು ವರದಿಗಳು, ಸಮೀಕ್ಷೆ ಹಾಗೂ ಅಧ್ಯಯನಗಳ ಮೂಲಕ ಪ್ರಕಟಿಸಲಾಗುತ್ತಿದೆ. ಇವನ್ನೆಲ್ಲ ಕಡೆಗಣಿಸಲಾಗದು~ ಎಂದು ಬೇಡಿ ಅವರು ತಿಳಿಸಿದರು.<br /> <br /> ಈ ವಿಷಯದಲ್ಲಿ ತಾವು ರಾಜಕೀಯ ಪಕ್ಷಗಳ ಮಾರ್ಗದರ್ಶನ ಪಡೆಯಬಯಸುವುದಾಗಿ ಸಿಂಗ್ ಹೇಳಿದ್ದಾರೆ. ಪ್ರಧಾನಿ ಕಚೇರಿಯನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>