<p>ಕೈರೊ (ಪಿಟಿಐ): ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಚಳವಳಿಗಾರರು ಶುಕ್ರವಾರದವರೆಗೆ ನೀಡಿದ್ದ ಗಡುವನ್ನು ಲೆಕ್ಕಿಸಿದ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್, ತಾವು ಈ ಕೂಡಲೇ ಅಧಿಕಾರ ತ್ಯಜಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಮುಬಾರಕ್ ವಿರುದ್ಧ ನಡೆಯುತ್ತಿರುವ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.<br /> <br /> ಕಳೆದ ಮೂರು ದಿನಗಳಿಂದ ಸರ್ಕಾರದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆದ ಸಂಘರ್ಷದಿಂದ ಚಿಂತಾಕ್ರಾಂತವಾಗಿರುವ ಸೇನೆಪಡೆಯು ಹೇಗಾದರೂ ಮಾಡಿ ಈ ಚಳವಳಿಯನ್ನು ಶಮನ ಮಾಡಬೇಕು ಎಂದು ಕಂಕಣ ಕಟ್ಟಿ ನಿಂತಿದೆ. ಆದರೆ ಚಳವಳಿಗಾರರು ಶುಕ್ರವಾರವನ್ನು ‘ನಿರ್ಗಮನದ ದಿನ’ ಎಂದು ಹೇಳಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಶುಕ್ರವಾರ ತಹ್ರೀರ್ ಚೌಕದಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.<br /> <br /> ಈ ಮಧ್ಯೆ ’ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮುಬಾರಕ್, ‘ದೇಶದಲ್ಲಿ ಈಗ ಉಂಟಾಗಿರುವ ಪರಿಸ್ಥಿತಿ ತಲೆಚಿಟ್ಟು ಹಿಡಿಸಿದ್ದು ಅತ್ಯಂತ ಬೇಸರ ತಂದಿದೆ. ಅಧಿಕಾರ ಸಾಕಾಗಿದೆ. ಆದರೆ, ನಾನು ಕೂಡಲೇ ಅಧಿಕಾರ ತ್ಯಜಿಸಿದರೆ ದೇಶ ಅರಾಜಕತೆಯಿಂದ ತತ್ತರಿಸುತ್ತದೆ’ ಎಂದಿದ್ದಾರೆ.<br /> <br /> ‘ನನ್ನನ್ನು ಟೀಕಿಸುವ ಜನರನ್ನು ನಾನು ಲೆಕ್ಕಿಸುವುದಿಲ್ಲ. ನನಗೆ ದೇಶವೇ ಮುಖ್ಯ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ’ ಎಂದು ಅಂಗರಕ್ಷರ ಬೆಂಗಾವಲಿನಲ್ಲಿರುವ ಮುಬಾರಕ್ ಎರಡು ಟಿವಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ.<br /> <br /> ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈಜಿಪ್ಟ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಬಾರಕ್, ‘ನಿಮಗೆ (ಒಬಾಮ) ಈಜಿಪ್ಟ್ನ ಸಂಸ್ಕೃತಿ ಗೊತ್ತಿಲ್ಲ. ನಾನು ಅಧಿಕಾರದಿಂದ ಈಗ ಕೆಳಗಿಳಿದರೆ ಏನಾಗುತ್ತದೆ ಎಂಬುದೂ ನಿಮಗೆ ತಿಳಿದಿಲ್ಲ’ ಎಂದಿದ್ದಾರೆ.<br /> <br /> ಈ ಮಧ್ಯೆ ವಿದೇಶಿ ಪತ್ರಕರ್ತರ ಮೇಲೆ ಮುಬಾರಕ್ ಪರ ಗುಂಪಿನವರು ಹಲ್ಲೆ ಮಾಡಿರುವ ಆಪಾದನೆಗಳು ಕೇಳಿಬರುತ್ತಿವೆ. <br /> <br /> ಗುರುವಾರ ನಡೆದ ಹಿಂಸಾಚಾರಕ್ಕೆ ಈಜಿಪ್ಟ್ನ ಆಂತರಿಕ ಗುಪ್ತಚರ ಖಾತೆ ಸಚಿವರು ಕ್ಷಮೆ ಕೋರಿದ್ದಾರೆ ಎಂದು ಪ್ರಧಾನ ಅಹ್ಮದ್ ಷಫಿ ಹೇಳಿದ್ದಾರೆ.<br /> <br /> <strong>ಇರಾನ್ ನಾಯಕ ಖೊಮೇನಿ ಹರ್ಷ<br /> </strong>ಟೆಹರಾನ್ (ಎಎಫ್ಪಿ): ಈಜಿಪ್ಟ್, ಟ್ಯುನೀಷಿಯಾ ಮತ್ತಿತರ ರಾಷ್ಟ್ರಗಳಲ್ಲಿನ ಪ್ರಭುತ್ವದ ವಿರುದ್ಧ ದಂಗೆಗೆ ಹರ್ಷ ವ್ಯಕ್ತಪಡಿಸಿರುವ ಇರಾನ್, ಈ ಬೆಳವಣಿಗೆಗಳನ್ನು ‘ಇಸ್ಲಾಮ್ ಜಾಗೃತಿ’ಯ ಪ್ರತೀಕ ಎಂದು ಬಣ್ಣಿಸಿದೆ.</p>.<p>ಟೆಹರಾನ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಧಾರ್ಮಿಕ ಉಪನ್ಯಾಸ ನೀಡಿದ ಇರಾನ್ನ ಸರ್ವೋಚ್ಚ ನಾಯಕ ಹಾಗೂ ಧಾರ್ಮಿಕ ಗುರು ಅಯಾತುಲ್ಲಾ ಖೊಮೇನಿ, 1979ರ ಇರಾನ್ ಕ್ರಾಂತಿಯ ವೇಳೆ ಯಾವ ‘ಇಸ್ಲಾಮ್ ಜಾಗೃತಿ’ಯ ಕನಸು ಕಾಣಲಾಗಿತ್ತೋ ಅದು ಇದೀಗ ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ.</p>.<p>ತಮ್ಮ ಮಾರ್ಗದರ್ಶಕನ ಮಾತುಗಳನ್ನು ಆಲಿಸಿ ಸಂಭ್ರಮೋದ್ಗಾರಗಳ ಸುರಿಮಳೆ ಸುರಿಸಿದ ನೆರೆದಿದ್ದ ಜನತೆ ಇದೇ ವೇಳೆ ‘ಅಮೆರಿಕ ನಾಶವಾಗಲಿ, ಇಸ್ರೇಲ್ ನಿರ್ಮೂಲನೆ ಯಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.</p>.<p>ಕಳೆದ ಏಳು ತಿಂಗಳ ನಂತರ ಶುಕ್ರವಾರದ ಪ್ರಾರ್ಥನೆ ವೇಳೆ ಖೊಮೇನಿ ಮಾಡಿದ ಮೊತ್ತಮೊದಲ ಭಾಷಣ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೈರೊ (ಪಿಟಿಐ): ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಚಳವಳಿಗಾರರು ಶುಕ್ರವಾರದವರೆಗೆ ನೀಡಿದ್ದ ಗಡುವನ್ನು ಲೆಕ್ಕಿಸಿದ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್, ತಾವು ಈ ಕೂಡಲೇ ಅಧಿಕಾರ ತ್ಯಜಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಮುಬಾರಕ್ ವಿರುದ್ಧ ನಡೆಯುತ್ತಿರುವ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.<br /> <br /> ಕಳೆದ ಮೂರು ದಿನಗಳಿಂದ ಸರ್ಕಾರದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆದ ಸಂಘರ್ಷದಿಂದ ಚಿಂತಾಕ್ರಾಂತವಾಗಿರುವ ಸೇನೆಪಡೆಯು ಹೇಗಾದರೂ ಮಾಡಿ ಈ ಚಳವಳಿಯನ್ನು ಶಮನ ಮಾಡಬೇಕು ಎಂದು ಕಂಕಣ ಕಟ್ಟಿ ನಿಂತಿದೆ. ಆದರೆ ಚಳವಳಿಗಾರರು ಶುಕ್ರವಾರವನ್ನು ‘ನಿರ್ಗಮನದ ದಿನ’ ಎಂದು ಹೇಳಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಶುಕ್ರವಾರ ತಹ್ರೀರ್ ಚೌಕದಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.<br /> <br /> ಈ ಮಧ್ಯೆ ’ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮುಬಾರಕ್, ‘ದೇಶದಲ್ಲಿ ಈಗ ಉಂಟಾಗಿರುವ ಪರಿಸ್ಥಿತಿ ತಲೆಚಿಟ್ಟು ಹಿಡಿಸಿದ್ದು ಅತ್ಯಂತ ಬೇಸರ ತಂದಿದೆ. ಅಧಿಕಾರ ಸಾಕಾಗಿದೆ. ಆದರೆ, ನಾನು ಕೂಡಲೇ ಅಧಿಕಾರ ತ್ಯಜಿಸಿದರೆ ದೇಶ ಅರಾಜಕತೆಯಿಂದ ತತ್ತರಿಸುತ್ತದೆ’ ಎಂದಿದ್ದಾರೆ.<br /> <br /> ‘ನನ್ನನ್ನು ಟೀಕಿಸುವ ಜನರನ್ನು ನಾನು ಲೆಕ್ಕಿಸುವುದಿಲ್ಲ. ನನಗೆ ದೇಶವೇ ಮುಖ್ಯ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ’ ಎಂದು ಅಂಗರಕ್ಷರ ಬೆಂಗಾವಲಿನಲ್ಲಿರುವ ಮುಬಾರಕ್ ಎರಡು ಟಿವಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ.<br /> <br /> ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈಜಿಪ್ಟ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಬಾರಕ್, ‘ನಿಮಗೆ (ಒಬಾಮ) ಈಜಿಪ್ಟ್ನ ಸಂಸ್ಕೃತಿ ಗೊತ್ತಿಲ್ಲ. ನಾನು ಅಧಿಕಾರದಿಂದ ಈಗ ಕೆಳಗಿಳಿದರೆ ಏನಾಗುತ್ತದೆ ಎಂಬುದೂ ನಿಮಗೆ ತಿಳಿದಿಲ್ಲ’ ಎಂದಿದ್ದಾರೆ.<br /> <br /> ಈ ಮಧ್ಯೆ ವಿದೇಶಿ ಪತ್ರಕರ್ತರ ಮೇಲೆ ಮುಬಾರಕ್ ಪರ ಗುಂಪಿನವರು ಹಲ್ಲೆ ಮಾಡಿರುವ ಆಪಾದನೆಗಳು ಕೇಳಿಬರುತ್ತಿವೆ. <br /> <br /> ಗುರುವಾರ ನಡೆದ ಹಿಂಸಾಚಾರಕ್ಕೆ ಈಜಿಪ್ಟ್ನ ಆಂತರಿಕ ಗುಪ್ತಚರ ಖಾತೆ ಸಚಿವರು ಕ್ಷಮೆ ಕೋರಿದ್ದಾರೆ ಎಂದು ಪ್ರಧಾನ ಅಹ್ಮದ್ ಷಫಿ ಹೇಳಿದ್ದಾರೆ.<br /> <br /> <strong>ಇರಾನ್ ನಾಯಕ ಖೊಮೇನಿ ಹರ್ಷ<br /> </strong>ಟೆಹರಾನ್ (ಎಎಫ್ಪಿ): ಈಜಿಪ್ಟ್, ಟ್ಯುನೀಷಿಯಾ ಮತ್ತಿತರ ರಾಷ್ಟ್ರಗಳಲ್ಲಿನ ಪ್ರಭುತ್ವದ ವಿರುದ್ಧ ದಂಗೆಗೆ ಹರ್ಷ ವ್ಯಕ್ತಪಡಿಸಿರುವ ಇರಾನ್, ಈ ಬೆಳವಣಿಗೆಗಳನ್ನು ‘ಇಸ್ಲಾಮ್ ಜಾಗೃತಿ’ಯ ಪ್ರತೀಕ ಎಂದು ಬಣ್ಣಿಸಿದೆ.</p>.<p>ಟೆಹರಾನ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಧಾರ್ಮಿಕ ಉಪನ್ಯಾಸ ನೀಡಿದ ಇರಾನ್ನ ಸರ್ವೋಚ್ಚ ನಾಯಕ ಹಾಗೂ ಧಾರ್ಮಿಕ ಗುರು ಅಯಾತುಲ್ಲಾ ಖೊಮೇನಿ, 1979ರ ಇರಾನ್ ಕ್ರಾಂತಿಯ ವೇಳೆ ಯಾವ ‘ಇಸ್ಲಾಮ್ ಜಾಗೃತಿ’ಯ ಕನಸು ಕಾಣಲಾಗಿತ್ತೋ ಅದು ಇದೀಗ ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ.</p>.<p>ತಮ್ಮ ಮಾರ್ಗದರ್ಶಕನ ಮಾತುಗಳನ್ನು ಆಲಿಸಿ ಸಂಭ್ರಮೋದ್ಗಾರಗಳ ಸುರಿಮಳೆ ಸುರಿಸಿದ ನೆರೆದಿದ್ದ ಜನತೆ ಇದೇ ವೇಳೆ ‘ಅಮೆರಿಕ ನಾಶವಾಗಲಿ, ಇಸ್ರೇಲ್ ನಿರ್ಮೂಲನೆ ಯಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.</p>.<p>ಕಳೆದ ಏಳು ತಿಂಗಳ ನಂತರ ಶುಕ್ರವಾರದ ಪ್ರಾರ್ಥನೆ ವೇಳೆ ಖೊಮೇನಿ ಮಾಡಿದ ಮೊತ್ತಮೊದಲ ಭಾಷಣ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>