<p><strong>ಕೋಯಿಕ್ಕೋಡ್</strong>: ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿಯವರನ್ನು 18ನೇ ಬಷೀರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.<br /> <br /> ಗಲ್ಫ್ ಮಲಯಾಳಿಗಳ ಸಾಂಸ್ಕೃತಿಕ ಸಂಘಟನೆ `ಪ್ರವಾಸಿ ದೋಹಾ~ ಸಂಸ್ಥೆ, ಪ್ರಸಿದ್ಧ ಮಲಯಾಳಂನ ಲೇಖಕ ವೈಕಂ ಮಹಮ್ಮದ್ ಬಷೀರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ. <br /> <br /> ಪ್ರಶಸ್ತಿಯು ರೂ. 50 ಸಾವಿರ ನಗದು ಹಾಗೂ ಸ್ಮರಣ ಫಲಕ ಹಾಗೂ ಪುತ್ಥಳಿಯೊಂದನ್ನು ಒಳಗೊಂಡಿದೆ. <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಎಂ.ಟಿ.ವಾಸುದೇವನ್ ನಾಯರ್, ಪ್ರವಾಸಿ ಟ್ರಸ್ಟ್ನ ಟ್ರಸ್ಟಿ ಬಾಬು ಮಾಥರ್ ಮತ್ತು ಎಂ.ಎ.ರಹಮಾನ್ ಅವರನ್ನೊಳ ಗೊಂಡ ತೀರ್ಪುಗಾರರ ಸಮಿತಿ ಅನಂತಮೂರ್ತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.<br /> <br /> ಇಂಗ್ಲಿಷ್ ಭಾಷೆಯ ಶಿಕ್ಷಕರಾದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಹಿತ್ಯ ರಚಿಸಿರುವ, ವೈಕಂ ಅವರನ್ನು ಇತರ ದೇಶಗಳಲ್ಲಿ ಪರಿಚಯಿಸಿದ ಅನಂತಮೂರ್ತಿ ಪ್ರಶಸ್ತಿಗೆ ಅರ್ಹರು ಎಂದು ಆಯ್ಕೆ ಸಮಿತಿ ಹೇಳಿದೆ.<br /> <br /> <strong>ಅನಂತಮೂರ್ತಿ ಸಂತಸ<br /> ಶಿವಮೊಗ್ಗ ವರದಿ: </strong>`ಈ ಪ್ರಶಸ್ತಿ ನಿಜಕ್ಕೂ ನನಗೆ ಗೌರವ ತಂದುಕೊಟ್ಟಿದೆ. ಬಷೀರ್ ಕೇರಳದ ಮಹತ್ವದ ಕಾದಂಬರಿಕಾರರು; ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗುತ್ತಿದೆ~ ಎಂದು ಡಾ.ಯು.ಆರ್. ಅನಂತಮೂರ್ತಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್</strong>: ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿಯವರನ್ನು 18ನೇ ಬಷೀರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.<br /> <br /> ಗಲ್ಫ್ ಮಲಯಾಳಿಗಳ ಸಾಂಸ್ಕೃತಿಕ ಸಂಘಟನೆ `ಪ್ರವಾಸಿ ದೋಹಾ~ ಸಂಸ್ಥೆ, ಪ್ರಸಿದ್ಧ ಮಲಯಾಳಂನ ಲೇಖಕ ವೈಕಂ ಮಹಮ್ಮದ್ ಬಷೀರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ. <br /> <br /> ಪ್ರಶಸ್ತಿಯು ರೂ. 50 ಸಾವಿರ ನಗದು ಹಾಗೂ ಸ್ಮರಣ ಫಲಕ ಹಾಗೂ ಪುತ್ಥಳಿಯೊಂದನ್ನು ಒಳಗೊಂಡಿದೆ. <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಎಂ.ಟಿ.ವಾಸುದೇವನ್ ನಾಯರ್, ಪ್ರವಾಸಿ ಟ್ರಸ್ಟ್ನ ಟ್ರಸ್ಟಿ ಬಾಬು ಮಾಥರ್ ಮತ್ತು ಎಂ.ಎ.ರಹಮಾನ್ ಅವರನ್ನೊಳ ಗೊಂಡ ತೀರ್ಪುಗಾರರ ಸಮಿತಿ ಅನಂತಮೂರ್ತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.<br /> <br /> ಇಂಗ್ಲಿಷ್ ಭಾಷೆಯ ಶಿಕ್ಷಕರಾದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಹಿತ್ಯ ರಚಿಸಿರುವ, ವೈಕಂ ಅವರನ್ನು ಇತರ ದೇಶಗಳಲ್ಲಿ ಪರಿಚಯಿಸಿದ ಅನಂತಮೂರ್ತಿ ಪ್ರಶಸ್ತಿಗೆ ಅರ್ಹರು ಎಂದು ಆಯ್ಕೆ ಸಮಿತಿ ಹೇಳಿದೆ.<br /> <br /> <strong>ಅನಂತಮೂರ್ತಿ ಸಂತಸ<br /> ಶಿವಮೊಗ್ಗ ವರದಿ: </strong>`ಈ ಪ್ರಶಸ್ತಿ ನಿಜಕ್ಕೂ ನನಗೆ ಗೌರವ ತಂದುಕೊಟ್ಟಿದೆ. ಬಷೀರ್ ಕೇರಳದ ಮಹತ್ವದ ಕಾದಂಬರಿಕಾರರು; ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗುತ್ತಿದೆ~ ಎಂದು ಡಾ.ಯು.ಆರ್. ಅನಂತಮೂರ್ತಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>