<p><strong>ಮಂಡ್ಯ: </strong>ಮಾನವನ ಅತಿರೇಕ ವರ್ತನೆಗಳಿಂದಾಗಿ ಪ್ರಕೃತಿಯಲ್ಲಿ ಅನೇಕ ಏರುಪೇರುಗಳು ಘಟಿಸುತ್ತಿವೆ. ಪರಿಸರದ ಬಗೆಗೆ ಮನುಷ್ಯನಿಗೆ ಒಲುಮೆ, ಎಚ್ಚರಿಕೆ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.<br /> <br /> ಬೆಂಗಳೂರಿನ ಸಹನ ಕಲ್ಚರಲ್, ಕ್ರಿಯೇಷನ್ಸ್, ಪಬ್ಲಿಕೇಷನ್ಸ್ ಹಾಗೂ ಸ್ಮಾರ್ಟ್ ಇಂಗ್ಲಿಷ್ ಅಕಾಡೆಮಿ ಮತ್ತು ಕಂಪ್ಯೂಟರ್ ವರ್ಲ್ಡ್ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕುರಿತ ಸಾಕ್ಷ್ಯಚಿತ್ರ `ನಮ್ಮ ಭೂಮಿ' ಡಿವಿಡಿ ಬಿಡುಗಡೆ, ಸಸಿಗಳ ವಿತರಣೆ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ನಮಗಿರುವುದು ಒಂದೇ ಭೂಮಿ. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪರಿಸರದಲ್ಲಿರುವ ಜೀವಸಂಕುಲ, ಜೀವ ವೈವವಿಧ್ಯತೆಯನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.<br /> <br /> ಆಧುನಿಕ ಜೀವನ ಭರಾಟೆ ಮತ್ತು ಅಭಿವೃದ್ಧಿ ನೆಪದಲ್ಲಿ ಪರಿಸರ ಇತ್ತೀಚಿನ ದಿನಗಳಲ್ಲಿ ನಾಶವಾಗುತ್ತಿದೆ. ಅದರ ಪ್ರತಿಫಲವನ್ನು ಪ್ರಕೃತಿ ವಿಕೋಪಗಳ ರೂಪದಲ್ಲಿ ಎದುರಿಸುವಂತಾಗಿದೆ ಎಂದು ಹೇಳಿದರು.<br /> <br /> ಎಲ್ಲವನ್ನೂ ಪ್ರೀತಿಸುವುದರ ಜೊತೆಗೆ ಸಮಾನವಾಗಿ ಕಾಣುವ ದೃಷ್ಟಿಕೋನ ಹೊಂದಬೇಕು. ಪರಿಸರ ರಕ್ಷಿಸಿದರೆ, ಪ್ರಕೃತಿಯೂ ನಮ್ಮನ್ನು ಸಲಹುತ್ತದೆ ಎಂದು ಹೇಳಿದರು. ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, `ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮಗೆ, ಪರಿಸರ ಸಂರಕ್ಷಣೆಯೇ ದೊಡ್ಡ ಸಾವಾಲು. ಪ್ರಕೃತಿ ಸಂರಕ್ಷಣೆ ಬಗ್ಗೆ ವಿದೇಶಿಯರಿಗೆ ಇರುವಷ್ಟು ಕಾಳಜಿ ನಮ್ಮಲ್ಲಿ ಕಂಡಬರುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿ.ಎನ್.ಸುರೇಶ್ಬಾಬು ನಿರ್ಮಾಣದ, ರಾಜು ಸೂನಗಹಳ್ಳಿ ಪರಿಕಲ್ಪನೆಯ `ನಮ್ಮ ಭೂಮಿ' ಡಿವಿಡಿ ಬಿಡುಗಡೆ ಮಾಡಲಾಯಿತು.<br /> <br /> ದಿ. ಆರ್.ಕೆ.ರೆಹಮತ್ ಉಲ್ಲಾಖಾನ್-ದಿ. ಸೈಯರ್ ಖೈರುನ್ನೀಸಾ ಸ್ಮರಣಾರ್ಥ `ಕರ್ನಾಟಕ ಪರಿಸರ ಪ್ರೇಮಿ' ಪ್ರಶಸ್ತಿಯನ್ನು ಡಾ. ಈಶ್ವರ ಎಸ್.ರಾಯುಡು ಅವರಿಗೆ ಹಾಗೂ ದಿ.ಕೆ.ಸರೋಜಮ್ಮ-ದಿ. ಬಿ.ಎಸ್.ನಾರಾಯಣ ಸ್ವಾಮಿ ಸ್ಮರಣಾರ್ಥ `ಕರ್ನಾಟಕ ಪರಿಸರ ಮಿತ್ರ' ಪ್ರಶಸ್ತಿಯನ್ನು ಕೆ.ಪದ್ಮನಾಭ ಅವರಿಗೆ ನೀಡಲಾಯಿತು. ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಸಸಿಗಳನ್ನು ವಿತರಿಸಿದರು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಂಗಲ ಎಂ. ಯೋಗೀಶ್, ಜಯದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಮಾನವನ ಅತಿರೇಕ ವರ್ತನೆಗಳಿಂದಾಗಿ ಪ್ರಕೃತಿಯಲ್ಲಿ ಅನೇಕ ಏರುಪೇರುಗಳು ಘಟಿಸುತ್ತಿವೆ. ಪರಿಸರದ ಬಗೆಗೆ ಮನುಷ್ಯನಿಗೆ ಒಲುಮೆ, ಎಚ್ಚರಿಕೆ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.<br /> <br /> ಬೆಂಗಳೂರಿನ ಸಹನ ಕಲ್ಚರಲ್, ಕ್ರಿಯೇಷನ್ಸ್, ಪಬ್ಲಿಕೇಷನ್ಸ್ ಹಾಗೂ ಸ್ಮಾರ್ಟ್ ಇಂಗ್ಲಿಷ್ ಅಕಾಡೆಮಿ ಮತ್ತು ಕಂಪ್ಯೂಟರ್ ವರ್ಲ್ಡ್ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕುರಿತ ಸಾಕ್ಷ್ಯಚಿತ್ರ `ನಮ್ಮ ಭೂಮಿ' ಡಿವಿಡಿ ಬಿಡುಗಡೆ, ಸಸಿಗಳ ವಿತರಣೆ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ನಮಗಿರುವುದು ಒಂದೇ ಭೂಮಿ. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪರಿಸರದಲ್ಲಿರುವ ಜೀವಸಂಕುಲ, ಜೀವ ವೈವವಿಧ್ಯತೆಯನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.<br /> <br /> ಆಧುನಿಕ ಜೀವನ ಭರಾಟೆ ಮತ್ತು ಅಭಿವೃದ್ಧಿ ನೆಪದಲ್ಲಿ ಪರಿಸರ ಇತ್ತೀಚಿನ ದಿನಗಳಲ್ಲಿ ನಾಶವಾಗುತ್ತಿದೆ. ಅದರ ಪ್ರತಿಫಲವನ್ನು ಪ್ರಕೃತಿ ವಿಕೋಪಗಳ ರೂಪದಲ್ಲಿ ಎದುರಿಸುವಂತಾಗಿದೆ ಎಂದು ಹೇಳಿದರು.<br /> <br /> ಎಲ್ಲವನ್ನೂ ಪ್ರೀತಿಸುವುದರ ಜೊತೆಗೆ ಸಮಾನವಾಗಿ ಕಾಣುವ ದೃಷ್ಟಿಕೋನ ಹೊಂದಬೇಕು. ಪರಿಸರ ರಕ್ಷಿಸಿದರೆ, ಪ್ರಕೃತಿಯೂ ನಮ್ಮನ್ನು ಸಲಹುತ್ತದೆ ಎಂದು ಹೇಳಿದರು. ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, `ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮಗೆ, ಪರಿಸರ ಸಂರಕ್ಷಣೆಯೇ ದೊಡ್ಡ ಸಾವಾಲು. ಪ್ರಕೃತಿ ಸಂರಕ್ಷಣೆ ಬಗ್ಗೆ ವಿದೇಶಿಯರಿಗೆ ಇರುವಷ್ಟು ಕಾಳಜಿ ನಮ್ಮಲ್ಲಿ ಕಂಡಬರುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿ.ಎನ್.ಸುರೇಶ್ಬಾಬು ನಿರ್ಮಾಣದ, ರಾಜು ಸೂನಗಹಳ್ಳಿ ಪರಿಕಲ್ಪನೆಯ `ನಮ್ಮ ಭೂಮಿ' ಡಿವಿಡಿ ಬಿಡುಗಡೆ ಮಾಡಲಾಯಿತು.<br /> <br /> ದಿ. ಆರ್.ಕೆ.ರೆಹಮತ್ ಉಲ್ಲಾಖಾನ್-ದಿ. ಸೈಯರ್ ಖೈರುನ್ನೀಸಾ ಸ್ಮರಣಾರ್ಥ `ಕರ್ನಾಟಕ ಪರಿಸರ ಪ್ರೇಮಿ' ಪ್ರಶಸ್ತಿಯನ್ನು ಡಾ. ಈಶ್ವರ ಎಸ್.ರಾಯುಡು ಅವರಿಗೆ ಹಾಗೂ ದಿ.ಕೆ.ಸರೋಜಮ್ಮ-ದಿ. ಬಿ.ಎಸ್.ನಾರಾಯಣ ಸ್ವಾಮಿ ಸ್ಮರಣಾರ್ಥ `ಕರ್ನಾಟಕ ಪರಿಸರ ಮಿತ್ರ' ಪ್ರಶಸ್ತಿಯನ್ನು ಕೆ.ಪದ್ಮನಾಭ ಅವರಿಗೆ ನೀಡಲಾಯಿತು. ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಸಸಿಗಳನ್ನು ವಿತರಿಸಿದರು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಂಗಲ ಎಂ. ಯೋಗೀಶ್, ಜಯದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>