<p>ಹೈದರಾಬಾದ್ (ಪಿಟಿಐ): ಪಕ್ಷದ ಮಾಜಿ ಸಂಸತ್ ಸದಸ್ಯ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗಳಲ್ಲಿ 9 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಗೆದ್ದುಕೊಂಡರು. ಇದರಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು.<br /> <br /> ಜಗನ್ ಮೋಹನ್ ರೆಡ್ಡಿ ಗುಂಪು ಮೂರನೇ ಸ್ಥಾನವನ್ನೂ ಗೆದ್ದುಕೊಂಡಿತಾದರೂ, ವಿಜೇತ ಅಭ್ಯರ್ಥಿ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು.<br /> <br /> ಪರಿಣಾಮವಾಗಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ವಿಜಯ ಸಾಧ್ಯತೆಯನ್ನು ಜಗನ್ ಅವರು ಪರಿಣಾಮಕಾರಿಯಾಗಿ ಮಸುಕುಗೊಳಿಸಿದ್ದಾರೆ. ಹೀಗಾಗಿ ಮುಖ್ಯ ವಿರೋಧಿ ಪಕ್ಷವಾದ ಟಿಡಿಪಿಗೆ ಅಂತಿಮವಾಗಿ ಮಂದಹಾಸ ಬೀರುವಂತಾಗಿದೆ.<br /> <br /> ಇದೇನಿದ್ದರೂ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ಜಗನ್ ಭಾರಿ ಹೊಡೆತ ಅನುಭವಿಸಿದ್ದಾರೆ. ಅವರ ಗುಂಪಿನ ಅಭ್ಯರ್ಥಿಯನ್ನು ಕಾಂಗ್ರೆಸ್ ಪರಾಭವಗೊಳಿಸಿದೆ.<br /> ಮಾರ್ಚ್ 21ರಂದು ಎಂಟು ಜಿಲ್ಲೆಗಳ ಪೈಕಿ ಒಂಬತ್ತು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ಅವುಗಳ ಮತ ಎಣಿಕೆಯನ್ನು ಬುಧವಾರ ಮುಂಜಾನೆ ಆರಂಭಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್ (ಪಿಟಿಐ): ಪಕ್ಷದ ಮಾಜಿ ಸಂಸತ್ ಸದಸ್ಯ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗಳಲ್ಲಿ 9 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಗೆದ್ದುಕೊಂಡರು. ಇದರಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು.<br /> <br /> ಜಗನ್ ಮೋಹನ್ ರೆಡ್ಡಿ ಗುಂಪು ಮೂರನೇ ಸ್ಥಾನವನ್ನೂ ಗೆದ್ದುಕೊಂಡಿತಾದರೂ, ವಿಜೇತ ಅಭ್ಯರ್ಥಿ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು.<br /> <br /> ಪರಿಣಾಮವಾಗಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ವಿಜಯ ಸಾಧ್ಯತೆಯನ್ನು ಜಗನ್ ಅವರು ಪರಿಣಾಮಕಾರಿಯಾಗಿ ಮಸುಕುಗೊಳಿಸಿದ್ದಾರೆ. ಹೀಗಾಗಿ ಮುಖ್ಯ ವಿರೋಧಿ ಪಕ್ಷವಾದ ಟಿಡಿಪಿಗೆ ಅಂತಿಮವಾಗಿ ಮಂದಹಾಸ ಬೀರುವಂತಾಗಿದೆ.<br /> <br /> ಇದೇನಿದ್ದರೂ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ಜಗನ್ ಭಾರಿ ಹೊಡೆತ ಅನುಭವಿಸಿದ್ದಾರೆ. ಅವರ ಗುಂಪಿನ ಅಭ್ಯರ್ಥಿಯನ್ನು ಕಾಂಗ್ರೆಸ್ ಪರಾಭವಗೊಳಿಸಿದೆ.<br /> ಮಾರ್ಚ್ 21ರಂದು ಎಂಟು ಜಿಲ್ಲೆಗಳ ಪೈಕಿ ಒಂಬತ್ತು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ಅವುಗಳ ಮತ ಎಣಿಕೆಯನ್ನು ಬುಧವಾರ ಮುಂಜಾನೆ ಆರಂಭಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>