<p>ಬೆಳಗಾವಿ: ರಾಜ್ಯ ಸರ್ಕಾರವು ವಿಧಾನಸಭೆಯ ವಜ್ರಮಹೋತ್ಸವ ಆಚರಿಸಿರುವುದಕ್ಕೆ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. <br /> <br /> ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `1956ರಲ್ಲಿ ಏಕೀಕರಣವಾಗಿದೆ. ಹೀಗಾಗಿ ವಜ್ರಮಹೋತ್ಸವ ಆಚರಿಸಲು ಇನ್ನೂ ಮೂರು ವರ್ಷಗಳು ಬಾಕಿ ಉಳಿದಿದ್ದವು. ಹೀಗಿದ್ದಾಗ ರಾಜ್ಯ ಸರ್ಕಾರವು ಈ ವರ್ಷವೇ ವಜ್ರಮಹೋತ್ಸವ ಆಚರಿಸಿರುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು. <br /> <br /> ~1952ರಲ್ಲಿ ರಾಜ್ಯ ನಿರ್ಮಾಣವಾದರೂ ಏಕೀಕರಣವಾದುದು 1956ರಲ್ಲಿ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಮೈಸೂರು ಪ್ರಾಂತದ ಹಲವು ಮುಖಂಡರು ಏಕೀಕರಣವನ್ನು ವಿರೋಧಿಸಿದ್ದರು~ ಎಂದು ಅವರು ಸ್ಮರಿಸಿದರು. <br /> <br /> `ಕೆಲವರು ಎರಡು ಪ್ರತ್ಯೇಕ ರಾಜ್ಯ ಮಾಡುವಂತೆಯೂ ಸಲಹೆ ನೀಡಿದ್ದರು. ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿ ಕರ್ನಾಟಕ ಏಕೀಕರಣಗೊಂಡರೂ ಮೈಸೂರು ಪ್ರಾಂತ್ಯದ ಜನರಿಗೆ ಸಮಾಧಾನ ತಂದಿರಲಿಲ್ಲ~ ಎಂದು ಪಾ.ಪು ಮೆಲುಕು ಹಾಕಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ರಾಜ್ಯ ಸರ್ಕಾರವು ವಿಧಾನಸಭೆಯ ವಜ್ರಮಹೋತ್ಸವ ಆಚರಿಸಿರುವುದಕ್ಕೆ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. <br /> <br /> ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `1956ರಲ್ಲಿ ಏಕೀಕರಣವಾಗಿದೆ. ಹೀಗಾಗಿ ವಜ್ರಮಹೋತ್ಸವ ಆಚರಿಸಲು ಇನ್ನೂ ಮೂರು ವರ್ಷಗಳು ಬಾಕಿ ಉಳಿದಿದ್ದವು. ಹೀಗಿದ್ದಾಗ ರಾಜ್ಯ ಸರ್ಕಾರವು ಈ ವರ್ಷವೇ ವಜ್ರಮಹೋತ್ಸವ ಆಚರಿಸಿರುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು. <br /> <br /> ~1952ರಲ್ಲಿ ರಾಜ್ಯ ನಿರ್ಮಾಣವಾದರೂ ಏಕೀಕರಣವಾದುದು 1956ರಲ್ಲಿ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಮೈಸೂರು ಪ್ರಾಂತದ ಹಲವು ಮುಖಂಡರು ಏಕೀಕರಣವನ್ನು ವಿರೋಧಿಸಿದ್ದರು~ ಎಂದು ಅವರು ಸ್ಮರಿಸಿದರು. <br /> <br /> `ಕೆಲವರು ಎರಡು ಪ್ರತ್ಯೇಕ ರಾಜ್ಯ ಮಾಡುವಂತೆಯೂ ಸಲಹೆ ನೀಡಿದ್ದರು. ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿ ಕರ್ನಾಟಕ ಏಕೀಕರಣಗೊಂಡರೂ ಮೈಸೂರು ಪ್ರಾಂತ್ಯದ ಜನರಿಗೆ ಸಮಾಧಾನ ತಂದಿರಲಿಲ್ಲ~ ಎಂದು ಪಾ.ಪು ಮೆಲುಕು ಹಾಕಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>