<p>ಬೆಂಗಳೂರು: `ಜಾಗತಿಕ ಬದಲಾವಣೆಗಳು ಯುವಜನರಲ್ಲಿ ಬದಲಾವಣೆ ತಂದಿವೆ. ಆದರೆ ಮಾನವೀಯ ಮೌಲ್ಯಗಳು ಹಾಗೂ ಸಂಬಂಧಗಳಲ್ಲಿ ಅವಶ್ಯಕ ಬದಲಾವಣೆ ಆಗಿಲ್ಲ~ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ನಗರದ ನಿಸರ್ಗ ಬಡಾವಣೆಯ ವೀಯೆಲ್ಲೆನ್ ಪ್ರಬುದ್ಧಾಲಯದಲ್ಲಿ ಶುಕ್ರವಾರ ನಡೆದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಪ್ರಬುದ್ಧವಾಣಿಯ ಐದನೇ ಸಂಚಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. <br /> <br /> `ವಯೋಧರ್ಮಕ್ಕನುಗುಣವಾಗಿ ದುಗುಡ, ದುಮ್ಮಾನ, ಭಯ ಕಾಡುತ್ತವೆ. ಯಾವುದೇ ದೂರವಾಣಿ ಕರೆ ಆತಂಕದತ್ತ ಸೆಳೆಯುವ ಸ್ಥಿತಿ ಇದ್ದರೂ ಮಾನಸಿಕವಾಗಿ ಎಲ್ಲವನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು. <br /> <br /> ವಕೀಲ ರವಿ ಬಿ. ನಾಯಕ್ ಅಧ್ಯಕ್ಷತೆ ವಹಿಸಿ, `ಆಧುನಿಕ ಕಾಲಘಟ್ಟದಲ್ಲಿ ಪ್ರಬುದ್ಧಾಲಯದಂತಹ ಹಿರಿಯರ ಕಲ್ಯಾಣ ಕೇಂದ್ರಗಳು ಅಗತ್ಯ~ ಎಂದರು.<br /> <br /> ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ವಿಶ್ರಾಂತ ಕುಲಪತಿ ಪ್ರೊ. ಎಂ.ಆರ್. ಗಜೇಂದ್ರಗಡ್,ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ.ಲಕ್ಷ್ಮಿನಾರಾಯಣ್, ಪ್ರಬುದ್ಧಾಲಯದ ಹಿರಿಯ ಪ್ರಬಂಧಕಿ ಸುಷ್ಮಾಮೂರ್ತಿ ಉಪಸ್ಥಿತರಿದ್ದರು. <br /> <br /> ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮಾ ಅವರನ್ನು ಸನ್ಮಾನಿಸಲಾಯಿತು. ಗಾಯಕ ಉಪಾಸನಾ ಮೋಹನ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಜಾಗತಿಕ ಬದಲಾವಣೆಗಳು ಯುವಜನರಲ್ಲಿ ಬದಲಾವಣೆ ತಂದಿವೆ. ಆದರೆ ಮಾನವೀಯ ಮೌಲ್ಯಗಳು ಹಾಗೂ ಸಂಬಂಧಗಳಲ್ಲಿ ಅವಶ್ಯಕ ಬದಲಾವಣೆ ಆಗಿಲ್ಲ~ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ನಗರದ ನಿಸರ್ಗ ಬಡಾವಣೆಯ ವೀಯೆಲ್ಲೆನ್ ಪ್ರಬುದ್ಧಾಲಯದಲ್ಲಿ ಶುಕ್ರವಾರ ನಡೆದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಪ್ರಬುದ್ಧವಾಣಿಯ ಐದನೇ ಸಂಚಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. <br /> <br /> `ವಯೋಧರ್ಮಕ್ಕನುಗುಣವಾಗಿ ದುಗುಡ, ದುಮ್ಮಾನ, ಭಯ ಕಾಡುತ್ತವೆ. ಯಾವುದೇ ದೂರವಾಣಿ ಕರೆ ಆತಂಕದತ್ತ ಸೆಳೆಯುವ ಸ್ಥಿತಿ ಇದ್ದರೂ ಮಾನಸಿಕವಾಗಿ ಎಲ್ಲವನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು. <br /> <br /> ವಕೀಲ ರವಿ ಬಿ. ನಾಯಕ್ ಅಧ್ಯಕ್ಷತೆ ವಹಿಸಿ, `ಆಧುನಿಕ ಕಾಲಘಟ್ಟದಲ್ಲಿ ಪ್ರಬುದ್ಧಾಲಯದಂತಹ ಹಿರಿಯರ ಕಲ್ಯಾಣ ಕೇಂದ್ರಗಳು ಅಗತ್ಯ~ ಎಂದರು.<br /> <br /> ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ವಿಶ್ರಾಂತ ಕುಲಪತಿ ಪ್ರೊ. ಎಂ.ಆರ್. ಗಜೇಂದ್ರಗಡ್,ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ.ಲಕ್ಷ್ಮಿನಾರಾಯಣ್, ಪ್ರಬುದ್ಧಾಲಯದ ಹಿರಿಯ ಪ್ರಬಂಧಕಿ ಸುಷ್ಮಾಮೂರ್ತಿ ಉಪಸ್ಥಿತರಿದ್ದರು. <br /> <br /> ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮಾ ಅವರನ್ನು ಸನ್ಮಾನಿಸಲಾಯಿತು. ಗಾಯಕ ಉಪಾಸನಾ ಮೋಹನ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>