<p><strong>ಮಳವಳ್ಳಿ:</strong> ಕಾಡಿನಿಂದ ನಾಡಿನಕಡೆಗೆ ಬಂದಿರುವ ಐದು ಆನೆಗಳ ಗುಂಪು ತಾಲ್ಲೂಕಿನ ಮಾರ್ಕಾಲು ಆಲದಹಳ್ಳಿ ಗ್ರಾಮಗಳ ಬಳಿ ಜಮೀನಿನನಲ್ಲಿ ಶುಕ್ರವಾರ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕಮೂಡಿಸಿವೆ.<br /> <br /> ತಾಲ್ಲೂಕಿನಲ್ಲಿ ಹಲವು ತಿಂಗಳುಗಳಿಂದ ಪದೆ ಪದೇ ಕಾಡಾನೆಗಳು ಗ್ರಾಮಾಂತರ ಪ್ರದೇಶಗಳ ಜಮೀನಿಗೆ ಬಂದು ರೈತರು ಬೆಳೆದ ಬೆಳೆಯನ್ನು ಹಾನಿಮಾಡುತ್ತಿದ್ದು, ಶುಕ್ರವಾರ ಮಾರ್ಕಾಲು ಆಲದಹಳ್ಳಿ ಬಳಿ ಬತ್ತದ ಬೆಳೆಯನ್ನು ತುಳಿದು ಹಾನಿಮಾಡಿವೆ.<br /> <br /> ಗುರುವಾರ ಚೊಟ್ಟನಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಈ ಆನೆಗಳ ಗುಂಪು ಸಂಜೆ ಮಾರೇಹಳ್ಳಿ, ಮೂಗನಕೊಪ್ಪಲು ಜಮೀನುಗಳ ಮೂಲಕ ಮಾರ್ಕಾಲು ಬಳಿಗೆ ಬಂದು ಸೇರಿಬಿಟ್ಟಿವೆ. ಈ ಪ್ರದೇಶಕ್ಕೆ ಸಮೀಪ ಯಾವುದೇ ಅರಣ್ಯ ಪ್ರದೇಶವೇ ಇಲ್ಲದಿರುವುದರಿಂದ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸ ಪ್ರಯಾಸಪಡಬೇಕಾಯಿತು.<br /> <br /> ಕೆಲವು ತಿಂಗಳ ಹಿಂದೆ ಎರಡು ಆನೆಗಳು ಈ ಗ್ರಾಮದ ಪಕ್ಕದ ಕೋರೇಗಾಲಕ್ಕೆ ಬಂದು ನಂತರ ಮೈಸೂರು ನಗರದಲ್ಲಿ ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು. ಶುಕ್ರವಾರವೂ ಸಹ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಳವಳ್ಳಿ:</strong> ಕಾಡಿನಿಂದ ನಾಡಿನಕಡೆಗೆ ಬಂದಿರುವ ಐದು ಆನೆಗಳ ಗುಂಪು ತಾಲ್ಲೂಕಿನ ಮಾರ್ಕಾಲು ಆಲದಹಳ್ಳಿ ಗ್ರಾಮಗಳ ಬಳಿ ಜಮೀನಿನನಲ್ಲಿ ಶುಕ್ರವಾರ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕಮೂಡಿಸಿವೆ.<br /> <br /> ತಾಲ್ಲೂಕಿನಲ್ಲಿ ಹಲವು ತಿಂಗಳುಗಳಿಂದ ಪದೆ ಪದೇ ಕಾಡಾನೆಗಳು ಗ್ರಾಮಾಂತರ ಪ್ರದೇಶಗಳ ಜಮೀನಿಗೆ ಬಂದು ರೈತರು ಬೆಳೆದ ಬೆಳೆಯನ್ನು ಹಾನಿಮಾಡುತ್ತಿದ್ದು, ಶುಕ್ರವಾರ ಮಾರ್ಕಾಲು ಆಲದಹಳ್ಳಿ ಬಳಿ ಬತ್ತದ ಬೆಳೆಯನ್ನು ತುಳಿದು ಹಾನಿಮಾಡಿವೆ.<br /> <br /> ಗುರುವಾರ ಚೊಟ್ಟನಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಈ ಆನೆಗಳ ಗುಂಪು ಸಂಜೆ ಮಾರೇಹಳ್ಳಿ, ಮೂಗನಕೊಪ್ಪಲು ಜಮೀನುಗಳ ಮೂಲಕ ಮಾರ್ಕಾಲು ಬಳಿಗೆ ಬಂದು ಸೇರಿಬಿಟ್ಟಿವೆ. ಈ ಪ್ರದೇಶಕ್ಕೆ ಸಮೀಪ ಯಾವುದೇ ಅರಣ್ಯ ಪ್ರದೇಶವೇ ಇಲ್ಲದಿರುವುದರಿಂದ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸ ಪ್ರಯಾಸಪಡಬೇಕಾಯಿತು.<br /> <br /> ಕೆಲವು ತಿಂಗಳ ಹಿಂದೆ ಎರಡು ಆನೆಗಳು ಈ ಗ್ರಾಮದ ಪಕ್ಕದ ಕೋರೇಗಾಲಕ್ಕೆ ಬಂದು ನಂತರ ಮೈಸೂರು ನಗರದಲ್ಲಿ ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು. ಶುಕ್ರವಾರವೂ ಸಹ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>