<p>ಹಲವು ವರ್ಷಗಳಿಂದ ಅಭಿನಯ, ರಂಗಸಜ್ಜಿಕೆ, ಬೆಳಕು ಹೀಗೆ ರಂಗಭೂಮಿಯ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಗುಂಪು ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ `ಆಮೋದ ನಾಟಕೋತ್ಸವ~ ಹಮ್ಮಿಕೊಂಡಿತ್ತು.<br /> <br /> `ಕಲಾಶಿಖರ~, `ರಂಗವಿಶೇಷ~, `ಸಿರಿ ಸಂಭ್ರಮ~, `ಸಂಭ್ರಮ~ ಹಾಗೂ `ಪಂಚಮುಖಿ~ ನಟರ ಸಮೂಹಗಳು ಒಟ್ಟಾರೆಯಾಗಿ ಸೇರಿ ಆಮೋದ ನಾಟಕೋತ್ಸವವನ್ನು ಏರ್ಪಡಿಸಿದ್ದವು. ಬಿ. ಜಯಶ್ರೀ ಅವರು ಉದ್ಘಾಟಿಸಿದ ನಾಟಕೋತ್ಸವದಲ್ಲಿ ಸಫ್ದರ್ ಹಶ್ಮಿ ನೆನಪಿನಲ್ಲಿ ಸಮಕಾಲೀನ ರಾಜಕೀಯ ವಿಡಂಬನೆಯ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. <br /> <br /> ಮೊದಲ ದಿನ ಕಲಾಶಿಖರ ತಂಡವು ಜೈನೇಂದ್ರ ಕುಮಾರ್ ಅವರ ವಸಾಹತುಶಾಹಿ ಕಾಲದ ನೀಳ್ಗತೆಯನ್ನು ಆಧರಿಸಿ ಕನ್ನಡಕ್ಕೆ ರೂಪಾಂತರವಾದ `ಗಲ್ಲು~ ನಾಟಕವನ್ನು ಪ್ರದರ್ಶಿಸಿತು. ಬಡವರ ಪರವಾಗಿ ಚಿಂತಿಸುವ, ಕ್ರಿಯಾಶೀಲ ಯುವಕ ಶಂಶೇರ್ನನ್ನು ಬ್ರಿಟೀಷ್ ಅಧಿಕಾರಿಗಳು ಕುತಂತ್ರದಿಂದ ಹಿಡಿದು ಗಲ್ಲಿಗೇರಿಸುವ ಕಥಾವಸ್ತುವುಳ್ಳ ಈ ನಾಟಕವು ಸಾಮಾಜಿಕ ಆಶಯವನ್ನೊಳಗೊಂಡಿತ್ತು. ಶಂಶೇರ್ ಪಾತ್ರದಲ್ಲಿ ಸಂಪತ್ಕುಮಾರ್ ಅಭಿನಯ ಗಮನಾರ್ಹ. ನಾಟಕದ ನಿರ್ದೇಶಕ ಮಹದೇವಸ್ವಾಮಿ. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೋಜನೆ ಮಾಡಿದ್ದರು. <br /> <br /> ಎರಡನೇ ದಿನ `ಸಿರಿ ಸಂಭ್ರಮ~ ತಂಡದವರು `ಬೆತ್ತಲೆ ಹರಕೆ~ ನಾಟಕವನ್ನು ಪ್ರಯೋಗಿಸಿದರು. ಚಂದ್ರಗುತ್ತಿಯಲ್ಲಿ ಎಲ್ಲಮ್ಮ ಹಾಗೂ ಮಾತಂಗಿಯ ಬಗೆಗೆ ಪುರಾಣ ಪ್ರಸಿದ್ಧವಾದ ಕಥೆಯಿದೆಯಲ್ಲ, ಅದನ್ನು ಹಾಗೂ ಜಾನಪದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ಮಹೇಶ್ ಎಸ್. ಪಲ್ಲಕ್ಕಿ ನಿರ್ದೇಶನದ ನಾಟಕದಲ್ಲಿ ಮಹಾರಾಣಿಯಾಗಿ ವರ್ಷಾ ಹೆಗಡೆ ಅಭಿನಯ ಮನೋಜ್ಞವಾಗಿತ್ತು.<br /> <br /> ಮೂರನೇ ದಿನ `ಪಂಚಮುಖಿ~ ನಟರ ಸಮೂಹ ಬಿ.ಆರ್. ಲಕ್ಷ್ಮಣ್ ರಾವ್ ಅವರ `ನಂಗ್ಯಾಕೋ ಡೌಟು~ ನಾಟಕವನ್ನು ಪ್ರದರ್ಶಿಸಿತು. ಇದೊಂದು ಹಾಸ್ಯ ಪ್ರಧಾನ ನಾಟಕ. ಮಧುಸೂದನ್ ಕನೇಕಲ್ ನಿರ್ದೇಶನದ ನಾಟಕವಿದು. ಮಧುಸೂದನ್, ಮಹೇಶ್, ನಯನ ಶೆಟ್ಟಿ, ಅರ್ಚನಾ, ರಕ್ಷಿತ್, ಪ್ರಭಾಕರ್, ಸಂಧ್ಯಾ ಲವಲವಿಕೆಯ ಅಭಿನಯ ನಾಟಕದ ಗಮನಾರ್ಹ ಅಂಶ. ಅರ್ಜುನ್ ತೇಜಸ್ವಿಯವರ ಸಂಗೀತ ಕೂಡ ಯುವಕರನ್ನು ಹಿಡಿದಿಡುವಂತಿತ್ತು. <br /> <br /> `ರಂಗವಿಶೇಷ~ ತಂಡದ `ಮುಂದೇನು ನೀವೇ ಹೇಳಿ~ ಹಾಗೂ `ಸಂಭ್ರಮ~ ತಂಡದ `ಚದುರಂಗ~ ಉತ್ಸವದಲ್ಲಿ ಪ್ರದರ್ಶಿತವಾದ ಇನ್ನೆರಡು ನಾಟಕಗಳು. ರಂಗಭೂಮಿಗೆ ದುಡಿದ ಹನುಮಕ್ಕ, ರುದ್ರಣ್ಣ, ಶ್ರೀನಿವಾಸ ಮೇಷ್ಟ್ರು, ಕೇಶವಮೂರ್ತಿ, ಅಂಕಲ್ ಶ್ಯಾಮ್, ಬಿ.ಎಸ್.ಕೇಶವರಾವ್, ರಾಮಕೃಷ್ಣ ಕನ್ನರಪಾಡಿ, ಇಸ್ಮಾಯಿಲ್ ಗೋನಾಳ್ ಅವರನ್ನು ಉತ್ಸವದಲ್ಲಿ ಸನ್ಮಾನಿಸಲಾಯಿತು.<br /> <br /> ಬಾದಲ್ ಸರ್ಕಾರ್ ನೆನಪಿನಲ್ಲಿ ಪ್ರಸ್ತುತ ಸಮಾಜದ ರಾಜಕೀಯ ತಲ್ಲಣ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಡಾ. ಎಲ್. ಬಸವರಾಜು ಹಾಗೂ ಹಬೀದ್ ತನ್ವೀರ್ ನೆನೆಪಿನಲ್ಲಿ `ಪದ್ಯಕಾಲ~ ಹಾಗೂ ಕೆ.ಪಿ. ಪೂರ್ಣಚಂದ್ರ ನೆನಪಿನಲ್ಲಿ `ಕಥಾಸಮಯ~ ಕೂಡ ನಡೆದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಲವು ವರ್ಷಗಳಿಂದ ಅಭಿನಯ, ರಂಗಸಜ್ಜಿಕೆ, ಬೆಳಕು ಹೀಗೆ ರಂಗಭೂಮಿಯ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಗುಂಪು ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ `ಆಮೋದ ನಾಟಕೋತ್ಸವ~ ಹಮ್ಮಿಕೊಂಡಿತ್ತು.<br /> <br /> `ಕಲಾಶಿಖರ~, `ರಂಗವಿಶೇಷ~, `ಸಿರಿ ಸಂಭ್ರಮ~, `ಸಂಭ್ರಮ~ ಹಾಗೂ `ಪಂಚಮುಖಿ~ ನಟರ ಸಮೂಹಗಳು ಒಟ್ಟಾರೆಯಾಗಿ ಸೇರಿ ಆಮೋದ ನಾಟಕೋತ್ಸವವನ್ನು ಏರ್ಪಡಿಸಿದ್ದವು. ಬಿ. ಜಯಶ್ರೀ ಅವರು ಉದ್ಘಾಟಿಸಿದ ನಾಟಕೋತ್ಸವದಲ್ಲಿ ಸಫ್ದರ್ ಹಶ್ಮಿ ನೆನಪಿನಲ್ಲಿ ಸಮಕಾಲೀನ ರಾಜಕೀಯ ವಿಡಂಬನೆಯ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. <br /> <br /> ಮೊದಲ ದಿನ ಕಲಾಶಿಖರ ತಂಡವು ಜೈನೇಂದ್ರ ಕುಮಾರ್ ಅವರ ವಸಾಹತುಶಾಹಿ ಕಾಲದ ನೀಳ್ಗತೆಯನ್ನು ಆಧರಿಸಿ ಕನ್ನಡಕ್ಕೆ ರೂಪಾಂತರವಾದ `ಗಲ್ಲು~ ನಾಟಕವನ್ನು ಪ್ರದರ್ಶಿಸಿತು. ಬಡವರ ಪರವಾಗಿ ಚಿಂತಿಸುವ, ಕ್ರಿಯಾಶೀಲ ಯುವಕ ಶಂಶೇರ್ನನ್ನು ಬ್ರಿಟೀಷ್ ಅಧಿಕಾರಿಗಳು ಕುತಂತ್ರದಿಂದ ಹಿಡಿದು ಗಲ್ಲಿಗೇರಿಸುವ ಕಥಾವಸ್ತುವುಳ್ಳ ಈ ನಾಟಕವು ಸಾಮಾಜಿಕ ಆಶಯವನ್ನೊಳಗೊಂಡಿತ್ತು. ಶಂಶೇರ್ ಪಾತ್ರದಲ್ಲಿ ಸಂಪತ್ಕುಮಾರ್ ಅಭಿನಯ ಗಮನಾರ್ಹ. ನಾಟಕದ ನಿರ್ದೇಶಕ ಮಹದೇವಸ್ವಾಮಿ. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೋಜನೆ ಮಾಡಿದ್ದರು. <br /> <br /> ಎರಡನೇ ದಿನ `ಸಿರಿ ಸಂಭ್ರಮ~ ತಂಡದವರು `ಬೆತ್ತಲೆ ಹರಕೆ~ ನಾಟಕವನ್ನು ಪ್ರಯೋಗಿಸಿದರು. ಚಂದ್ರಗುತ್ತಿಯಲ್ಲಿ ಎಲ್ಲಮ್ಮ ಹಾಗೂ ಮಾತಂಗಿಯ ಬಗೆಗೆ ಪುರಾಣ ಪ್ರಸಿದ್ಧವಾದ ಕಥೆಯಿದೆಯಲ್ಲ, ಅದನ್ನು ಹಾಗೂ ಜಾನಪದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ಮಹೇಶ್ ಎಸ್. ಪಲ್ಲಕ್ಕಿ ನಿರ್ದೇಶನದ ನಾಟಕದಲ್ಲಿ ಮಹಾರಾಣಿಯಾಗಿ ವರ್ಷಾ ಹೆಗಡೆ ಅಭಿನಯ ಮನೋಜ್ಞವಾಗಿತ್ತು.<br /> <br /> ಮೂರನೇ ದಿನ `ಪಂಚಮುಖಿ~ ನಟರ ಸಮೂಹ ಬಿ.ಆರ್. ಲಕ್ಷ್ಮಣ್ ರಾವ್ ಅವರ `ನಂಗ್ಯಾಕೋ ಡೌಟು~ ನಾಟಕವನ್ನು ಪ್ರದರ್ಶಿಸಿತು. ಇದೊಂದು ಹಾಸ್ಯ ಪ್ರಧಾನ ನಾಟಕ. ಮಧುಸೂದನ್ ಕನೇಕಲ್ ನಿರ್ದೇಶನದ ನಾಟಕವಿದು. ಮಧುಸೂದನ್, ಮಹೇಶ್, ನಯನ ಶೆಟ್ಟಿ, ಅರ್ಚನಾ, ರಕ್ಷಿತ್, ಪ್ರಭಾಕರ್, ಸಂಧ್ಯಾ ಲವಲವಿಕೆಯ ಅಭಿನಯ ನಾಟಕದ ಗಮನಾರ್ಹ ಅಂಶ. ಅರ್ಜುನ್ ತೇಜಸ್ವಿಯವರ ಸಂಗೀತ ಕೂಡ ಯುವಕರನ್ನು ಹಿಡಿದಿಡುವಂತಿತ್ತು. <br /> <br /> `ರಂಗವಿಶೇಷ~ ತಂಡದ `ಮುಂದೇನು ನೀವೇ ಹೇಳಿ~ ಹಾಗೂ `ಸಂಭ್ರಮ~ ತಂಡದ `ಚದುರಂಗ~ ಉತ್ಸವದಲ್ಲಿ ಪ್ರದರ್ಶಿತವಾದ ಇನ್ನೆರಡು ನಾಟಕಗಳು. ರಂಗಭೂಮಿಗೆ ದುಡಿದ ಹನುಮಕ್ಕ, ರುದ್ರಣ್ಣ, ಶ್ರೀನಿವಾಸ ಮೇಷ್ಟ್ರು, ಕೇಶವಮೂರ್ತಿ, ಅಂಕಲ್ ಶ್ಯಾಮ್, ಬಿ.ಎಸ್.ಕೇಶವರಾವ್, ರಾಮಕೃಷ್ಣ ಕನ್ನರಪಾಡಿ, ಇಸ್ಮಾಯಿಲ್ ಗೋನಾಳ್ ಅವರನ್ನು ಉತ್ಸವದಲ್ಲಿ ಸನ್ಮಾನಿಸಲಾಯಿತು.<br /> <br /> ಬಾದಲ್ ಸರ್ಕಾರ್ ನೆನಪಿನಲ್ಲಿ ಪ್ರಸ್ತುತ ಸಮಾಜದ ರಾಜಕೀಯ ತಲ್ಲಣ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಡಾ. ಎಲ್. ಬಸವರಾಜು ಹಾಗೂ ಹಬೀದ್ ತನ್ವೀರ್ ನೆನೆಪಿನಲ್ಲಿ `ಪದ್ಯಕಾಲ~ ಹಾಗೂ ಕೆ.ಪಿ. ಪೂರ್ಣಚಂದ್ರ ನೆನಪಿನಲ್ಲಿ `ಕಥಾಸಮಯ~ ಕೂಡ ನಡೆದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>