<p>ಬೆಂಗಳೂರು: ‘ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಬೇರೆ ದಾರಿಯಿಲ್ಲದೇ ಕಾಂಗ್ರೆಸ್ನ ಬೆಂಬಲ ಪಡೆದು ಸರ್ಕಾರ ರಚಿಸುವುದು ನಿಶ್ಚಿತ’ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.<br /> <br /> ಜನ ಸಂಗ್ರಾಮ ಪರಿಷತ್ ಮತ್ತು ಪ್ರೆಸ್ಕ್ಲಬ್ ಆಫ್ ಬೆಂಗಳೂರು ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣೆಗಳು ಮತ್ತು ರಾಜಕಾರಣದ ಜನತಂತ್ರೀ ಕರಣ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ‘ದೆಹಲಿಯಲ್ಲಿ ನಡೆದ ವ್ಯಾಪಕ ಸಮೀಕ್ಷೆಯಲ್ಲಿ ಶೇ 70ರಷ್ಟು ಮಂದಿ ಸರ್ಕಾರ ರಚಿಸುವಂತೆ ಅಭಿಪ್ರಾಯ ಮಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ’ ಎಂದು ತಿಳಿಸಿದರು. ‘ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಗೆಲುವು ಹಾಗೂ ಬಹುಮತವೇ ಸರ್ಕಾರ ರಚನೆಯ ಮಾನದಂಡವಾಗಿದೆ.<br /> <br /> 28 ಸ್ಥಾನ ಗಳಿಸಿರುವ ಎಎಪಿಗೆ ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿದ್ದು, ಅದು ಎಲ್ಲಿಯವರೆಗೆ ಮುಂದುವರಿಯುತ್ತದೋ ತಿಳಿದಿಲ್ಲ. ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಿದರೆ 32 ಸ್ಥಾನಗಳಿಸಿರುವ ಬಹುದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿ ನಗಣ್ಯವಾಗಲಿದೆ’ ಎಂದು ಭವಿಷ್ಯ ನುಡಿದರು.<br /> <br /> ‘ಆಮ್ ಆದ್ಮಿ ಪಕ್ಷ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಎಲ್ಲ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಹಳ್ಳಿಗರು ನಿರ್ಧರಿಸಬೇಕು ಎಂದರು.<br /> <br /> ‘ಸ್ವಿಟ್ಜರ್ಲೆಂಡ್ ಮಾದರಿಯಲ್ಲಿ ಮತದಾನ ಅನುಪಾತ ಆಡಳಿತ ಪ್ರಾತಿನಿಧ್ಯ ಜಾರಿಗೆ ಬರಬೇಕು. ಶೇ 5ರಷ್ಟು ಮತದಾನ ಪಡೆದ ಪಕ್ಷಕ್ಕೆ ಅಷ್ಟೇ ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆಯಬೇಕು. ಆಗ ಮಾತ್ರ ವ್ಯವಸ್ಥೆ ಸುಧಾರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.<br /> <br /> ‘ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಸಾಧ್ಯವಾಗಬೇಕು. ಸರ್ಕಾರ ರಚಿಸುವ ಸಲುವಾಗಿ ಅನೈತಿಕ ಕಸರತ್ತುಗಳು ಕಡಿಮೆಯಾಗಬೇಕು. ಪಾಶ್ಚಿಮಾತ್ಯ ಪ್ರಭಾವದಿಂದ ಹೊರಬಂದು ಪ್ರಜಾಪ್ರಭುತ್ವ ನೆಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಕಟ್ಟಬೇಕು’ ಎಂದು ತಿಳಿಸಿದರು.<br /> <br /> ‘ಐದು ವರ್ಷದ ಆಡಳಿತಾವವಧಿಯಲ್ಲಿ ಜನಪ್ರತಿನಿಧಿಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲ. ಅವರ ಎಲ್ಲ ನಿರ್ಧಾರಗಳ ಹಿಂದೆ ವಾಣಿಜ್ಯ ಹಿತಾಸಕ್ತಿ ಹಾಗೂ ಮಾಫಿಯಾ ಶಕ್ತಿಗಳಿವೆ. ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ಪರಮಾಣು ನೀತಿಯ ಅಗತ್ಯವಿರಲಿಲ್ಲ. ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಲಾಬಿಯಿಂದಾಗಿ ಈ ನೀತಿ ರೂಪುಗೊಂಡಿತು’ ಎಂದು ಹೇಳಿದರು.<br /> <br /> ಯಶಸ್ಸಿಗೆ ಹೆದರಿದ ಕಾಂಗ್ರೆಸ್: ‘ಲೋಕಪಾಲ ಮಸೂದೆಯನ್ನು ಜಾರಿಮಾಡುವಂತೆ 2011ರಲ್ಲಿ ಬಹುದೊಡ್ಡ ಚಳವಳಿ ನಡೆಯಿತು. ಆಗ ಮನ್ನಣೆ ನೀಡದ ಕಾಂಗ್ರೆಸ್ ಈಗ ಎಎಪಿಯ ಯಶಸ್ಸಿಗೆ ಹೆದರಿಗೆ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಪಯುಕ್ತವಿಲ್ಲದ ಮಸೂದೆಯನ್ನು ಜಾರಿ ಮಾಡಿದೆ’ ಎಂದು ಟೀಕಿಸಿದರು.<br /> <br /> ‘ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಶೇ 80ರಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದರು. ಜನ ಇಚ್ಛೆಪಟ್ಟಂತೆ ಮಸೂದೆಯನ್ನು ಜಾರಿ ಮಾಡಿದ್ದರೆ, ಸಚಿವ ಸಂಪುಟದ ಶೇ 50ರಷ್ಟು ಮಂದಿ ಸಚಿವರು ಜೈಲಿನಲ್ಲಿರಬೇಕಾಗಿತ್ತು’ ಎಂದು ವ್ಯಂಗ್ಯವಾಡಿದರು.<br /> <br /> ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ ದೇಶದಲ್ಲಿ ಸುಮಾರು 1,350 ಪಕ್ಷಗಳಿವೆ. ಅವುಗಳಲ್ಲಿ 90 ಪಕ್ಷಗಳು ಕ್ರಿಯಾಶೀಲವಾಗಿವೆ. ಆದರೆ, ಪ್ರತಿಯೊಂದು ಪಕ್ಷವನ್ನು ಒಂದೊಂದು ಕುಟುಂಬ ನಿಯಂತ್ರಿಸುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ‘ ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಪ್ರಯೋಗ ಎಲ್ಲೆಡೆಯು ಸಾಧ್ಯವಾಗುತ್ತದೆ ಎಂಬ ಭ್ರಮೆ ಬೇಡ. ವಿವಿಧ ರಾಜ್ಯಗಳಲ್ಲಿರುವ ಸಮಸ್ಯೆಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಸುಧಾರಿಸಬೇಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಬೇರೆ ದಾರಿಯಿಲ್ಲದೇ ಕಾಂಗ್ರೆಸ್ನ ಬೆಂಬಲ ಪಡೆದು ಸರ್ಕಾರ ರಚಿಸುವುದು ನಿಶ್ಚಿತ’ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.<br /> <br /> ಜನ ಸಂಗ್ರಾಮ ಪರಿಷತ್ ಮತ್ತು ಪ್ರೆಸ್ಕ್ಲಬ್ ಆಫ್ ಬೆಂಗಳೂರು ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣೆಗಳು ಮತ್ತು ರಾಜಕಾರಣದ ಜನತಂತ್ರೀ ಕರಣ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ‘ದೆಹಲಿಯಲ್ಲಿ ನಡೆದ ವ್ಯಾಪಕ ಸಮೀಕ್ಷೆಯಲ್ಲಿ ಶೇ 70ರಷ್ಟು ಮಂದಿ ಸರ್ಕಾರ ರಚಿಸುವಂತೆ ಅಭಿಪ್ರಾಯ ಮಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ’ ಎಂದು ತಿಳಿಸಿದರು. ‘ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಗೆಲುವು ಹಾಗೂ ಬಹುಮತವೇ ಸರ್ಕಾರ ರಚನೆಯ ಮಾನದಂಡವಾಗಿದೆ.<br /> <br /> 28 ಸ್ಥಾನ ಗಳಿಸಿರುವ ಎಎಪಿಗೆ ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿದ್ದು, ಅದು ಎಲ್ಲಿಯವರೆಗೆ ಮುಂದುವರಿಯುತ್ತದೋ ತಿಳಿದಿಲ್ಲ. ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಿದರೆ 32 ಸ್ಥಾನಗಳಿಸಿರುವ ಬಹುದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿ ನಗಣ್ಯವಾಗಲಿದೆ’ ಎಂದು ಭವಿಷ್ಯ ನುಡಿದರು.<br /> <br /> ‘ಆಮ್ ಆದ್ಮಿ ಪಕ್ಷ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಎಲ್ಲ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಹಳ್ಳಿಗರು ನಿರ್ಧರಿಸಬೇಕು ಎಂದರು.<br /> <br /> ‘ಸ್ವಿಟ್ಜರ್ಲೆಂಡ್ ಮಾದರಿಯಲ್ಲಿ ಮತದಾನ ಅನುಪಾತ ಆಡಳಿತ ಪ್ರಾತಿನಿಧ್ಯ ಜಾರಿಗೆ ಬರಬೇಕು. ಶೇ 5ರಷ್ಟು ಮತದಾನ ಪಡೆದ ಪಕ್ಷಕ್ಕೆ ಅಷ್ಟೇ ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆಯಬೇಕು. ಆಗ ಮಾತ್ರ ವ್ಯವಸ್ಥೆ ಸುಧಾರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.<br /> <br /> ‘ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಸಾಧ್ಯವಾಗಬೇಕು. ಸರ್ಕಾರ ರಚಿಸುವ ಸಲುವಾಗಿ ಅನೈತಿಕ ಕಸರತ್ತುಗಳು ಕಡಿಮೆಯಾಗಬೇಕು. ಪಾಶ್ಚಿಮಾತ್ಯ ಪ್ರಭಾವದಿಂದ ಹೊರಬಂದು ಪ್ರಜಾಪ್ರಭುತ್ವ ನೆಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಕಟ್ಟಬೇಕು’ ಎಂದು ತಿಳಿಸಿದರು.<br /> <br /> ‘ಐದು ವರ್ಷದ ಆಡಳಿತಾವವಧಿಯಲ್ಲಿ ಜನಪ್ರತಿನಿಧಿಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲ. ಅವರ ಎಲ್ಲ ನಿರ್ಧಾರಗಳ ಹಿಂದೆ ವಾಣಿಜ್ಯ ಹಿತಾಸಕ್ತಿ ಹಾಗೂ ಮಾಫಿಯಾ ಶಕ್ತಿಗಳಿವೆ. ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ಪರಮಾಣು ನೀತಿಯ ಅಗತ್ಯವಿರಲಿಲ್ಲ. ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಲಾಬಿಯಿಂದಾಗಿ ಈ ನೀತಿ ರೂಪುಗೊಂಡಿತು’ ಎಂದು ಹೇಳಿದರು.<br /> <br /> ಯಶಸ್ಸಿಗೆ ಹೆದರಿದ ಕಾಂಗ್ರೆಸ್: ‘ಲೋಕಪಾಲ ಮಸೂದೆಯನ್ನು ಜಾರಿಮಾಡುವಂತೆ 2011ರಲ್ಲಿ ಬಹುದೊಡ್ಡ ಚಳವಳಿ ನಡೆಯಿತು. ಆಗ ಮನ್ನಣೆ ನೀಡದ ಕಾಂಗ್ರೆಸ್ ಈಗ ಎಎಪಿಯ ಯಶಸ್ಸಿಗೆ ಹೆದರಿಗೆ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಪಯುಕ್ತವಿಲ್ಲದ ಮಸೂದೆಯನ್ನು ಜಾರಿ ಮಾಡಿದೆ’ ಎಂದು ಟೀಕಿಸಿದರು.<br /> <br /> ‘ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಶೇ 80ರಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದರು. ಜನ ಇಚ್ಛೆಪಟ್ಟಂತೆ ಮಸೂದೆಯನ್ನು ಜಾರಿ ಮಾಡಿದ್ದರೆ, ಸಚಿವ ಸಂಪುಟದ ಶೇ 50ರಷ್ಟು ಮಂದಿ ಸಚಿವರು ಜೈಲಿನಲ್ಲಿರಬೇಕಾಗಿತ್ತು’ ಎಂದು ವ್ಯಂಗ್ಯವಾಡಿದರು.<br /> <br /> ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ ದೇಶದಲ್ಲಿ ಸುಮಾರು 1,350 ಪಕ್ಷಗಳಿವೆ. ಅವುಗಳಲ್ಲಿ 90 ಪಕ್ಷಗಳು ಕ್ರಿಯಾಶೀಲವಾಗಿವೆ. ಆದರೆ, ಪ್ರತಿಯೊಂದು ಪಕ್ಷವನ್ನು ಒಂದೊಂದು ಕುಟುಂಬ ನಿಯಂತ್ರಿಸುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ‘ ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಪ್ರಯೋಗ ಎಲ್ಲೆಡೆಯು ಸಾಧ್ಯವಾಗುತ್ತದೆ ಎಂಬ ಭ್ರಮೆ ಬೇಡ. ವಿವಿಧ ರಾಜ್ಯಗಳಲ್ಲಿರುವ ಸಮಸ್ಯೆಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಸುಧಾರಿಸಬೇಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>