<p><strong>ಬೆಂಗಳೂರು: </strong>`ದ್ವಿಮುಖ ನೆಲೆಯಲ್ಲಿ ಮಹಿಳಾ ಸಬಲೀಕರಣ ಪ್ರಕ್ರಿಯೆಯು ನಡೆಯುತ್ತಿದ್ದು, ಪ್ರಸ್ತುತ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದ ಜತೆಯಲ್ಲಿಯೇ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ~ ಎಂದು ವಿಮರ್ಶಕಿ ಡಾ.ಎಂ. ಎಸ್. ಆಶಾದೇವಿ ಹೇಳಿದರು. <br /> <br /> ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಂತರರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ~ ಪುಸ್ತಕ ಮಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. <br /> `ಮಹಿಳೆಯರು ಔದ್ಯೋಗಿಕ ಜಗತ್ತಿನ ವಿಭಿನ್ನ ಸವಾಲುಗಳೊಂದಿಗೆ, ಕೌಟುಂಬಿಕ ಜವಾಬ್ದಾರಿಗಳ ಚೌಕಟ್ಟು ವಿಸ್ತಾರಗೊಂಡಿದೆ. <br /> <br /> <br /> ಈ ಬಗ್ಗೆಯು ಹೊಸ ನೆಲೆಯಲ್ಲಿ ಚಿಂತನೆ ನಡೆಸಬೇಕು~ ಎಂದ ಅವರು, `ಹೆಣ್ಣು ಮತ್ತು ಸಂಸ್ಕೃತಿ ಪರಸ್ಪರ ಮಿಳಿತಗೊಂಡಿದ್ದು, ಮಹಿಳೆಯ ಸಬಲೀಕರಣಕ್ಕೆ ಸಂಸ್ಕೃತಿ ತೊಡಕಾದ ಉದಾಹರಣೆಯಿಲ್ಲ. ಆದರೆ ಉದ್ಯೋಗ ಮತ್ತು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸಲು ಭಾವನಾತ್ಮಕ ತೊಳಲಾಟದಿಂದ ಹೊರಬರಬೇಕು~ ಎಂದು ಸಲಹೆ ನೀಡಿದರು.<br /> <br /> ಸಂಘದ ಅಧ್ಯಕ್ಷೆ ವಸುಂಧಾರ ಭೂಪತಿ, ` ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಘೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಮಹಿಳಾ ಪ್ರಪಂಚಕ್ಕೆ ಸವಾಲಾಗಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು~ ಎಂದು ಹೇಳಿದರು. <br /> <br /> <strong>ಎಸ್.ಕೆ.ಗೀತಾ ಅವರ ಮಹಿಳಾ ವಿಮೋಚನೆ:</strong> ಹೋರಾಟದ ನೂರು ವರ್ಷಗಳು, ಡಾ.ಎನ್.ಗಾಯತ್ರಿ ಅವರ `ಮಹಿಳಾದಿನದ ರೂವಾರಿ - ಕ್ಲಾರಾ ಜೆಟ್ಕಿನ್~ ಮತ್ತು ಡಾ.ಮಾಧವಿ ಭಂಡಾರಿ ಅವರ `ನೀನುಂಟು ನಿನ್ನ ರಕ್ಕೆಗಳುಂಟು~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಡಾ.ಕೆ.ಷರೀಫಾ, ಕೆ.ಎಸ್. ವಿಮಲಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ದ್ವಿಮುಖ ನೆಲೆಯಲ್ಲಿ ಮಹಿಳಾ ಸಬಲೀಕರಣ ಪ್ರಕ್ರಿಯೆಯು ನಡೆಯುತ್ತಿದ್ದು, ಪ್ರಸ್ತುತ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದ ಜತೆಯಲ್ಲಿಯೇ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ~ ಎಂದು ವಿಮರ್ಶಕಿ ಡಾ.ಎಂ. ಎಸ್. ಆಶಾದೇವಿ ಹೇಳಿದರು. <br /> <br /> ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಂತರರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ~ ಪುಸ್ತಕ ಮಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. <br /> `ಮಹಿಳೆಯರು ಔದ್ಯೋಗಿಕ ಜಗತ್ತಿನ ವಿಭಿನ್ನ ಸವಾಲುಗಳೊಂದಿಗೆ, ಕೌಟುಂಬಿಕ ಜವಾಬ್ದಾರಿಗಳ ಚೌಕಟ್ಟು ವಿಸ್ತಾರಗೊಂಡಿದೆ. <br /> <br /> <br /> ಈ ಬಗ್ಗೆಯು ಹೊಸ ನೆಲೆಯಲ್ಲಿ ಚಿಂತನೆ ನಡೆಸಬೇಕು~ ಎಂದ ಅವರು, `ಹೆಣ್ಣು ಮತ್ತು ಸಂಸ್ಕೃತಿ ಪರಸ್ಪರ ಮಿಳಿತಗೊಂಡಿದ್ದು, ಮಹಿಳೆಯ ಸಬಲೀಕರಣಕ್ಕೆ ಸಂಸ್ಕೃತಿ ತೊಡಕಾದ ಉದಾಹರಣೆಯಿಲ್ಲ. ಆದರೆ ಉದ್ಯೋಗ ಮತ್ತು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸಲು ಭಾವನಾತ್ಮಕ ತೊಳಲಾಟದಿಂದ ಹೊರಬರಬೇಕು~ ಎಂದು ಸಲಹೆ ನೀಡಿದರು.<br /> <br /> ಸಂಘದ ಅಧ್ಯಕ್ಷೆ ವಸುಂಧಾರ ಭೂಪತಿ, ` ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಘೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಮಹಿಳಾ ಪ್ರಪಂಚಕ್ಕೆ ಸವಾಲಾಗಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು~ ಎಂದು ಹೇಳಿದರು. <br /> <br /> <strong>ಎಸ್.ಕೆ.ಗೀತಾ ಅವರ ಮಹಿಳಾ ವಿಮೋಚನೆ:</strong> ಹೋರಾಟದ ನೂರು ವರ್ಷಗಳು, ಡಾ.ಎನ್.ಗಾಯತ್ರಿ ಅವರ `ಮಹಿಳಾದಿನದ ರೂವಾರಿ - ಕ್ಲಾರಾ ಜೆಟ್ಕಿನ್~ ಮತ್ತು ಡಾ.ಮಾಧವಿ ಭಂಡಾರಿ ಅವರ `ನೀನುಂಟು ನಿನ್ನ ರಕ್ಕೆಗಳುಂಟು~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಡಾ.ಕೆ.ಷರೀಫಾ, ಕೆ.ಎಸ್. ವಿಮಲಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>