<p>ಮಂಡ್ಯ: ತಾಲ್ಲೂಕಿನ ಕಲ್ಲುಮಂಟಿ ಗ್ರಾಮದ ಹೊರವಲಯದ ಸಮೀಪ ಹವ್ಯಾಸಿ `ಚಾರ್ವಾಕ~ ರಂಗ ತಂಡ ಬಯಲು ಪ್ರದೇಶದಲ್ಲಿ ಆಯೋಜಿಸಲು ಉದ್ದೇಶಿಸಿರುವ `ಆರ್ಯ ದ್ರಾವಿಡ~ ನಾಟಕ ಪ್ರದರ್ಶನದ ಸಿದ್ಧತೆಗಳನ್ನು ವಿಶ್ರಾಂತ ಕುಲಪತಿ ದೇಜಗೌ ಶುಕ್ರವಾರ ವೀಕ್ಷಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯಲ್ಲಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಔಷಧಿ ಆಗುವಂತೆ ಹೆಚ್ಚಿನ ನಾಟಕಗಳು ಬರಬೇಕು ಎಂದು ಅಭಿಪ್ರಾಯಪಟ್ಟರು.<br /> <br /> ರಂಗಭೂಮಿ, ಯಕ್ಷಗಾನ, ಬಯಲಾಟಗಳು ಶೈಕ್ಷಣಿಕ ಸಂಸ್ಥೆಗಳ ಹಾಗಿದ್ದು, ಸಮಾಜವನ್ನು ತಿದ್ದಲು ಪ್ರಬಲವಾದ ಮಾಧ್ಯಮ ಆಗುತ್ತದೆ. ಆದರೆ, ಸಾಹಿತಿಗಳು ಇಂದು ಏಕೆ ಇಂದು ಸಮಕಾಲೀನ ಸಮಸ್ಯೆಗಳ ಬಗೆಗೆ ನಾಟಕಗಳನ್ನು ರಚಿಸುತ್ತಿಲ್ಲವೋ ತಿಳಿಯುತ್ತಿಲ್ಲ ಎಂದರು.<br /> <br /> ಭ್ರಷ್ಟಾಚಾರ ತಡೆಯಲು ಮಾಧ್ಯಮಗಳು, ಜನರೇ ಆಂದೋಲನ ಶುರು ಮಾಡಬೇಕು. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವುದೇ ಸಮಸ್ಯೆಗೆ ಉತ್ತಮ ಪರಿಹಾರ ಆಗಬಲ್ಲದು ಎಂದರು.<br /> <br /> ಈ ಸಂದರ್ಭದಲ್ಲಿ `ಆರ್ಯ ದ್ರಾವಿಡ~ ನಾಟಕದ ನಿರ್ದೇಶಕ ಗಿರೀಶ್ ಮಾಚಹಳ್ಳಿ ಅವರು ನಾಟಕದ ಸಿದ್ಧತೆಗಳು, ಸ್ವರೂಪ ಕುರಿತು ದೇಜಗೌ ಅವರಿಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ತಾಲ್ಲೂಕಿನ ಕಲ್ಲುಮಂಟಿ ಗ್ರಾಮದ ಹೊರವಲಯದ ಸಮೀಪ ಹವ್ಯಾಸಿ `ಚಾರ್ವಾಕ~ ರಂಗ ತಂಡ ಬಯಲು ಪ್ರದೇಶದಲ್ಲಿ ಆಯೋಜಿಸಲು ಉದ್ದೇಶಿಸಿರುವ `ಆರ್ಯ ದ್ರಾವಿಡ~ ನಾಟಕ ಪ್ರದರ್ಶನದ ಸಿದ್ಧತೆಗಳನ್ನು ವಿಶ್ರಾಂತ ಕುಲಪತಿ ದೇಜಗೌ ಶುಕ್ರವಾರ ವೀಕ್ಷಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯಲ್ಲಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಔಷಧಿ ಆಗುವಂತೆ ಹೆಚ್ಚಿನ ನಾಟಕಗಳು ಬರಬೇಕು ಎಂದು ಅಭಿಪ್ರಾಯಪಟ್ಟರು.<br /> <br /> ರಂಗಭೂಮಿ, ಯಕ್ಷಗಾನ, ಬಯಲಾಟಗಳು ಶೈಕ್ಷಣಿಕ ಸಂಸ್ಥೆಗಳ ಹಾಗಿದ್ದು, ಸಮಾಜವನ್ನು ತಿದ್ದಲು ಪ್ರಬಲವಾದ ಮಾಧ್ಯಮ ಆಗುತ್ತದೆ. ಆದರೆ, ಸಾಹಿತಿಗಳು ಇಂದು ಏಕೆ ಇಂದು ಸಮಕಾಲೀನ ಸಮಸ್ಯೆಗಳ ಬಗೆಗೆ ನಾಟಕಗಳನ್ನು ರಚಿಸುತ್ತಿಲ್ಲವೋ ತಿಳಿಯುತ್ತಿಲ್ಲ ಎಂದರು.<br /> <br /> ಭ್ರಷ್ಟಾಚಾರ ತಡೆಯಲು ಮಾಧ್ಯಮಗಳು, ಜನರೇ ಆಂದೋಲನ ಶುರು ಮಾಡಬೇಕು. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವುದೇ ಸಮಸ್ಯೆಗೆ ಉತ್ತಮ ಪರಿಹಾರ ಆಗಬಲ್ಲದು ಎಂದರು.<br /> <br /> ಈ ಸಂದರ್ಭದಲ್ಲಿ `ಆರ್ಯ ದ್ರಾವಿಡ~ ನಾಟಕದ ನಿರ್ದೇಶಕ ಗಿರೀಶ್ ಮಾಚಹಳ್ಳಿ ಅವರು ನಾಟಕದ ಸಿದ್ಧತೆಗಳು, ಸ್ವರೂಪ ಕುರಿತು ದೇಜಗೌ ಅವರಿಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>