<p><strong>ಗಂಗಾವತಿ: </strong>ತಾಲ್ಲೂಕಿನ ವಿವಿಧ ಭಾಗದಲ್ಲಿ ಬುಧವಾರ ಸಂಜೆ ಸುರಿದ ರಭಸದ ಅಲಿಕಲ್ಲು ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ವಿವಿಧ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ, ಮಾವು ಮತ್ತು ಬಾಳೆ ಗಿಡ ನೆಲಕ್ಕೊರಗಿ ಆರ್ಥಿಕ ಹಾನಿ ಸಂಭವಿಸಿದ ಘಟನೆ ನಡೆದಿದೆ. <br /> <br /> ತುಂಗಭದ್ರಾ ನದಿಯಂಚಿನಲ್ಲಿ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದೆ. ನದಿಯೂದಕ್ಕೂ ಇರುವ ಸಣಾಪುರ, ವಿರುಪಾಪುರಗಡ್ಡೆ, ತಿರುಮಲಾಪುರ, ಅಂಜನಹಳ್ಳಿ, ಆನೆಗೊಂದಿ, ಚಿಕ್ಕಜಂತಕಲ್ ಮತ್ತಿತರ ಗ್ರಾಮಗಳಲ್ಲಿನ ಬಾಳೆತೋಟ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಗೆ ನೆಲಕ್ಕೊರಗಿದೆ.<br /> <br /> ರಹೀಂ ಮತ್ತು ಹನುಮಂತಯ್ಯ ಎಂಬ ರೈತರಿಗೆ ಸಂಬಂಧಿಸಿದ ತೋಟದಲ್ಲಿ ಬೆಳೆದ ಮಾವು ಉದುರಿ ಆರ್ಥಿಕ ಹಾನಿ ಸಂಭವಿಸಿದೆ. ಮುಸ್ಟೂರು ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿನ ಭತ್ತಕ್ಕೆ ಹಾನಿಯಾಗಿದೆ ಎಂದು ಮಾರೇಶ ಮುಸ್ಟೂರು ತಿಳಿಸಿದ್ದಾರೆ. <br /> <br /> ಬಸವಾಪಟ್ಟಣ, ಹಣವಾಳ, ಶ್ರೀರಾಮನಗರ, ಕುಂಟೋಜಿ, ಬರಗೂರು, ಸಿಂಗನಾಳ ಮೊದಲಾದ ಗ್ರಾಮಗಳಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಭತ್ತ ಮಳೆಯಿಂದ ಹಾನಿಯಾದ ಬಗ್ಗೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> `ಏಕ ಮುಖವಾಗಿ ಭಾರಿ ಗಾಳಿ ಬೀಸಿ ಮತ್ತು ಆಲಿಕಲ್ಲು ಮಳೆ ಬಿದ್ದಿದ್ದರಿಂದ ತಿರುಮಲಾಪುರದಲ್ಲಿ ಎರಡು ಮನೆಯ ತಗಡು ಹಾರಿ ಹೋಗಿದೆ. ತಾಲ್ಲೂಕಿನಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ~ ಎಂದು ತಹಸೀಲ್ದಾರ್ ಸಿ.ಡಿ. ಗೀತಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ಹೊಸ್ಕೇರಾ ಮತ್ತು ಜಂಗಮರ ಕಲ್ಗುಡಿಯಲ್ಲಿ ಭತ್ತ ನೆಲಕ್ಕೆ ಬಿದ್ದು ಒಟ್ಟು ಉತ್ಪನ್ನದ ಶೇ, 25ರಷ್ಟು ಹಾನಿಯಾಗಿದೆ ಎಂದು ರೈತರು ತಿಳಿದ್ದಾರೆ. ಆದರೆ ಈ ಬಗ್ಗೆ ಸಮೀಕ್ಷೆ ನಡೆಸಿದ ಬಳಿಕವೇ ಖಚಿತ ಮಾಹಿತಿ ದೊರೆಯುತ್ತದೆ~ ಎಂದು ಮರಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ತಿಳಿಸಿದ್ದಾರೆ.<br /> <br /> <strong>ಮರಳಿ- ಅಧಿಕ ಮಳೆ:</strong> ಮರಳಿ ಹೋಬಳಿಯಲ್ಲಿ ಬುಧವಾರ ಬಿದ್ದ ಮಳೆ ತಾಲ್ಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ.ಮಳೆ ಮಾಪಕದಲ್ಲಿ ಮರಳಿ ಕಂದಾಯ ವೃತ್ತದಲ್ಲಿ ಒಟ್ಟು 15 ಮಿಲ್ಲಿ ಮಿಟರ್ ಮಳೆ ದಾಖಲಾಗಿದೆ. <br /> ಗಂಗಾವತಿಯಲ್ಲಿ 13.5 ಮಿಲ್ಲಿ ಮೀಟರ್ ದಾಖಲಾಗಿದೆ. <br /> <br /> ಇನ್ನೂಳಿದಂತೆ ಕಾರಟಗಿಯಲ್ಲಿ 6.2 ಮಿ.ಮೀ. ವಡ್ಡರಹಟ್ಟಿಯಲ್ಲಿ 8.2 ಮಿ.ಮೀ, ಸಿದ್ದಾಪುರದಲ್ಲಿ 9.0 ಮಿ.ಮೀ ನವಲಿಯಲ್ಲಿ 4.2ಮಿ.ಮೀ, ಹಾಗೂ ವೆಂಕಟಗಿರಿಯಲ್ಲಿ 2.3 ಮಿ.ಮೀ ಮಳೆ ನಮೂದಾಗಿದೆ. ಹುಲಿಹೈದರ ಮತ್ತು ಕನಕಗಿರಿಯಲ್ಲಿ ಮಳೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ತಾಲ್ಲೂಕಿನ ವಿವಿಧ ಭಾಗದಲ್ಲಿ ಬುಧವಾರ ಸಂಜೆ ಸುರಿದ ರಭಸದ ಅಲಿಕಲ್ಲು ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ವಿವಿಧ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ, ಮಾವು ಮತ್ತು ಬಾಳೆ ಗಿಡ ನೆಲಕ್ಕೊರಗಿ ಆರ್ಥಿಕ ಹಾನಿ ಸಂಭವಿಸಿದ ಘಟನೆ ನಡೆದಿದೆ. <br /> <br /> ತುಂಗಭದ್ರಾ ನದಿಯಂಚಿನಲ್ಲಿ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದೆ. ನದಿಯೂದಕ್ಕೂ ಇರುವ ಸಣಾಪುರ, ವಿರುಪಾಪುರಗಡ್ಡೆ, ತಿರುಮಲಾಪುರ, ಅಂಜನಹಳ್ಳಿ, ಆನೆಗೊಂದಿ, ಚಿಕ್ಕಜಂತಕಲ್ ಮತ್ತಿತರ ಗ್ರಾಮಗಳಲ್ಲಿನ ಬಾಳೆತೋಟ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಗೆ ನೆಲಕ್ಕೊರಗಿದೆ.<br /> <br /> ರಹೀಂ ಮತ್ತು ಹನುಮಂತಯ್ಯ ಎಂಬ ರೈತರಿಗೆ ಸಂಬಂಧಿಸಿದ ತೋಟದಲ್ಲಿ ಬೆಳೆದ ಮಾವು ಉದುರಿ ಆರ್ಥಿಕ ಹಾನಿ ಸಂಭವಿಸಿದೆ. ಮುಸ್ಟೂರು ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿನ ಭತ್ತಕ್ಕೆ ಹಾನಿಯಾಗಿದೆ ಎಂದು ಮಾರೇಶ ಮುಸ್ಟೂರು ತಿಳಿಸಿದ್ದಾರೆ. <br /> <br /> ಬಸವಾಪಟ್ಟಣ, ಹಣವಾಳ, ಶ್ರೀರಾಮನಗರ, ಕುಂಟೋಜಿ, ಬರಗೂರು, ಸಿಂಗನಾಳ ಮೊದಲಾದ ಗ್ರಾಮಗಳಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಭತ್ತ ಮಳೆಯಿಂದ ಹಾನಿಯಾದ ಬಗ್ಗೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> `ಏಕ ಮುಖವಾಗಿ ಭಾರಿ ಗಾಳಿ ಬೀಸಿ ಮತ್ತು ಆಲಿಕಲ್ಲು ಮಳೆ ಬಿದ್ದಿದ್ದರಿಂದ ತಿರುಮಲಾಪುರದಲ್ಲಿ ಎರಡು ಮನೆಯ ತಗಡು ಹಾರಿ ಹೋಗಿದೆ. ತಾಲ್ಲೂಕಿನಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ~ ಎಂದು ತಹಸೀಲ್ದಾರ್ ಸಿ.ಡಿ. ಗೀತಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ಹೊಸ್ಕೇರಾ ಮತ್ತು ಜಂಗಮರ ಕಲ್ಗುಡಿಯಲ್ಲಿ ಭತ್ತ ನೆಲಕ್ಕೆ ಬಿದ್ದು ಒಟ್ಟು ಉತ್ಪನ್ನದ ಶೇ, 25ರಷ್ಟು ಹಾನಿಯಾಗಿದೆ ಎಂದು ರೈತರು ತಿಳಿದ್ದಾರೆ. ಆದರೆ ಈ ಬಗ್ಗೆ ಸಮೀಕ್ಷೆ ನಡೆಸಿದ ಬಳಿಕವೇ ಖಚಿತ ಮಾಹಿತಿ ದೊರೆಯುತ್ತದೆ~ ಎಂದು ಮರಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ತಿಳಿಸಿದ್ದಾರೆ.<br /> <br /> <strong>ಮರಳಿ- ಅಧಿಕ ಮಳೆ:</strong> ಮರಳಿ ಹೋಬಳಿಯಲ್ಲಿ ಬುಧವಾರ ಬಿದ್ದ ಮಳೆ ತಾಲ್ಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ.ಮಳೆ ಮಾಪಕದಲ್ಲಿ ಮರಳಿ ಕಂದಾಯ ವೃತ್ತದಲ್ಲಿ ಒಟ್ಟು 15 ಮಿಲ್ಲಿ ಮಿಟರ್ ಮಳೆ ದಾಖಲಾಗಿದೆ. <br /> ಗಂಗಾವತಿಯಲ್ಲಿ 13.5 ಮಿಲ್ಲಿ ಮೀಟರ್ ದಾಖಲಾಗಿದೆ. <br /> <br /> ಇನ್ನೂಳಿದಂತೆ ಕಾರಟಗಿಯಲ್ಲಿ 6.2 ಮಿ.ಮೀ. ವಡ್ಡರಹಟ್ಟಿಯಲ್ಲಿ 8.2 ಮಿ.ಮೀ, ಸಿದ್ದಾಪುರದಲ್ಲಿ 9.0 ಮಿ.ಮೀ ನವಲಿಯಲ್ಲಿ 4.2ಮಿ.ಮೀ, ಹಾಗೂ ವೆಂಕಟಗಿರಿಯಲ್ಲಿ 2.3 ಮಿ.ಮೀ ಮಳೆ ನಮೂದಾಗಿದೆ. ಹುಲಿಹೈದರ ಮತ್ತು ಕನಕಗಿರಿಯಲ್ಲಿ ಮಳೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>