<p>ಬೆಂಗಳೂರು: `ಬೆನ್ನು ಮೂಳೆ ಮುರಿತಕ್ಕೆ ಕಾರಣವಾಗುವ ಆಸ್ಟಿಯೊಪೊರೋಸಿಸ್ ರೋಗ 2013ರ ವೇಳೆಗೆ ದೇಶದ 36 ದಶಲಕ್ಷ ಮಂದಿಯನ್ನು ಬಾಧಿಸಲಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದ್ದು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಕೊರತೆ ಇದೆ~ ಎಂದು ಮಹಾವೀರ್ ಜೈನ್ ಆಸ್ಪತ್ರೆಯ ಬೆನ್ನುಮೂಳೆ ತಜ್ಞ ಡಾ.ಮಹೇಶ್ ಬಿಜ್ಜಾವರ ತಿಳಿಸಿದರು.<br /> <br /> ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು `50 ವರ್ಷ ಮೇಲ್ಪಟ್ಟ ಶೇ.20ರಷ್ಟು ಸ್ತ್ರೀಯರು ಮತ್ತು ಶೇ 10-15ರಷ್ಟು ಪುರುಷರು ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿದ್ದಾರೆ. ವಿಶ್ವ ಆಸ್ಟಿಯೊಪೊರೋಸಿಸ್ ಸಪ್ತಾಹದ ಅಂಗವಾಗಿ ಅಖಿಲ ಭಾರತ ಬೆನ್ನುಮೂಳೆ ತಜ್ಞರ ಸಂಘಟನೆ (ಎಎಸ್ಎಸ್ಐ) ಜನಸಾಮಾನ್ಯರಿಗೆ ಅಧ್ಯಯನದ ಸಾರವನ್ನು ಪ್ರಚುರಪಡಿಸುತ್ತಿದೆ~ ಎಂದರು. <br /> <br /> ವೈದ್ಯ ಡಾ.ಬಿ.ಎನ್.ಉಪೇಂದ್ರ ಮಾತನಾಡಿ, `ಆಸ್ಟಿೂಪೊರೋಸಿಸ್ ಮೂಳೆಯ ಸಾಂದ್ರತೆ ಕಡಿಮೆ ಮಾಡಿ ಅದನ್ನು ದುರ್ಬಲಗೊಳಿಸುತ್ತದೆ . ಇದರಿಂದ ಪದೇ ಪದೇ ಮೂಳೆ ಮುರಿತ ಉಂಟಾಗುತ್ತದೆ ಅಥವಾ ತೀವ್ರವಾಗಿ ಬಾಗುತ್ತವೆ. ಮೂಳೆ ಮುರಿತ ಸಂಭವಿಸುವವರೆಗೂ ಯಾವುದೇ ಮುನ್ಸೂಚನೆ ದೊರೆಯುವುದಿಲ್ಲ. ಆದ್ದರಿಂದಲೇ ಇದನ್ನು ಮೌನ ಹಂತಕ ಎಂದು ಪರಿಗಣಿಸಲಾಗಿದೆ~ ಎಂದು ತಿಳಿಸಿದರು. <br /> <br /> `ದೇಶದ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ನಗರದ ಜನರ ಮೇಲೂ ಇದು ಮಾರಕ ಪರಿಣಾಮ ಬೀರುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಬೆನ್ನು ಮೂಳೆ ಮುರಿತಕ್ಕೆ ಕಾರಣವಾಗುವ ಆಸ್ಟಿಯೊಪೊರೋಸಿಸ್ ರೋಗ 2013ರ ವೇಳೆಗೆ ದೇಶದ 36 ದಶಲಕ್ಷ ಮಂದಿಯನ್ನು ಬಾಧಿಸಲಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದ್ದು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಕೊರತೆ ಇದೆ~ ಎಂದು ಮಹಾವೀರ್ ಜೈನ್ ಆಸ್ಪತ್ರೆಯ ಬೆನ್ನುಮೂಳೆ ತಜ್ಞ ಡಾ.ಮಹೇಶ್ ಬಿಜ್ಜಾವರ ತಿಳಿಸಿದರು.<br /> <br /> ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು `50 ವರ್ಷ ಮೇಲ್ಪಟ್ಟ ಶೇ.20ರಷ್ಟು ಸ್ತ್ರೀಯರು ಮತ್ತು ಶೇ 10-15ರಷ್ಟು ಪುರುಷರು ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿದ್ದಾರೆ. ವಿಶ್ವ ಆಸ್ಟಿಯೊಪೊರೋಸಿಸ್ ಸಪ್ತಾಹದ ಅಂಗವಾಗಿ ಅಖಿಲ ಭಾರತ ಬೆನ್ನುಮೂಳೆ ತಜ್ಞರ ಸಂಘಟನೆ (ಎಎಸ್ಎಸ್ಐ) ಜನಸಾಮಾನ್ಯರಿಗೆ ಅಧ್ಯಯನದ ಸಾರವನ್ನು ಪ್ರಚುರಪಡಿಸುತ್ತಿದೆ~ ಎಂದರು. <br /> <br /> ವೈದ್ಯ ಡಾ.ಬಿ.ಎನ್.ಉಪೇಂದ್ರ ಮಾತನಾಡಿ, `ಆಸ್ಟಿೂಪೊರೋಸಿಸ್ ಮೂಳೆಯ ಸಾಂದ್ರತೆ ಕಡಿಮೆ ಮಾಡಿ ಅದನ್ನು ದುರ್ಬಲಗೊಳಿಸುತ್ತದೆ . ಇದರಿಂದ ಪದೇ ಪದೇ ಮೂಳೆ ಮುರಿತ ಉಂಟಾಗುತ್ತದೆ ಅಥವಾ ತೀವ್ರವಾಗಿ ಬಾಗುತ್ತವೆ. ಮೂಳೆ ಮುರಿತ ಸಂಭವಿಸುವವರೆಗೂ ಯಾವುದೇ ಮುನ್ಸೂಚನೆ ದೊರೆಯುವುದಿಲ್ಲ. ಆದ್ದರಿಂದಲೇ ಇದನ್ನು ಮೌನ ಹಂತಕ ಎಂದು ಪರಿಗಣಿಸಲಾಗಿದೆ~ ಎಂದು ತಿಳಿಸಿದರು. <br /> <br /> `ದೇಶದ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ನಗರದ ಜನರ ಮೇಲೂ ಇದು ಮಾರಕ ಪರಿಣಾಮ ಬೀರುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>