<p><strong>ಪುಣೆ</strong>: ಕನ್ನಡ ಭಾಷೆ ಮರಾಠಿಯ ಹಿರಿಯಕ್ಕ. ಈ ಎರಡು ಭಾಷೆಗಳ ಐತಿಹಾಸಿಕ ಅನುಬಂಧ ಅನ್ಯೋನ್ಯ. ಇದನ್ನು ಬೆಳೆಸಬೇಕು. ವಿಶಾಲ ಮನೋಭಾವನೆ ಬೆಳೆಯಲು ಕನ್ನಡ ಹಾಗೂ ಇತರ ಭಾಷೆಯ ಕಲಿಕೆ ಅಗತ್ಯ ಎಂದು ಶಿಕ್ಷಣ ತಜ್ಞ , ಮರಾಠಿಯ ಹಿರಿಯ ಸಾಹಿತಿ ಡಾ. ನ.ಮ. ಜೋಶಿ ಅವರು ಹೇಳಿದರು.<br /> <br /> ಅವರು ಇಲ್ಲಿ ಕೃ.ಶಿ. ಹೆಗಡೆ ಅವರು ಮರಾಠಿಗರ ಅಧ್ಯಯನಕ್ಕಾಗಿಯೇ ರಚಿಸಿದ ಇಲ್ಲಿನ ಗುರುಕುಲ ಪ್ರತಿಷ್ಠಾನದಿಂದ ಪ್ರಕಟವಾಗಿರುವ `ಸುಲಭ ಕನ್ನಡ~ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಈ ಸಾಲಿನ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳನ್ನು ಉದ್ಘಾಟಿಸಿದರು. ಹಿಂದಿನ ಸಾಲಿನ ಕನ್ನಡ ಕಲಿಕಾ ವರ್ಗಗಳ ಪ್ರಮಾಣ ಪತ್ರ ಪ್ರದಾನ ಮಾಡಿದರು.<br /> <br /> ಪ್ರತಿಕೂಲ ಸ್ಥಿತಿಯಲ್ಲಿ ದಶಕಗಳ ಕಾಲದಿಂದ ಕನ್ನಡ ವರ್ಗಗಳನ್ನು ಪುಣೆಯಂತಹ ನಗರದಲ್ಲಿ ನಡೆಸಿಕೊಂಡು ಬರುವುದು ಸುಲಭವಲ್ಲ. ಇದಕ್ಕೆ ಹಟಮಾರಿತನ, ಭಾಷಾ ಸಾಮರಸ್ಯದ ಅಭಿಮಾನ, ಸ್ಥಾನಿಕರ ಪ್ರೋತ್ಸಾಹ ಈ ರೀತಿ ಅನೇಕ ಕಾರಣಗಳಿವೆ ಎಂದು ಮರಾಠಿ- ಕನ್ನಡ ಸ್ನೇಹವರ್ಧನ ಕೇಂದ್ರದ ಅಧ್ಯಕ್ಷ ಡಾ. ಭಾ.ರ. ಸಾಬಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ</strong>: ಕನ್ನಡ ಭಾಷೆ ಮರಾಠಿಯ ಹಿರಿಯಕ್ಕ. ಈ ಎರಡು ಭಾಷೆಗಳ ಐತಿಹಾಸಿಕ ಅನುಬಂಧ ಅನ್ಯೋನ್ಯ. ಇದನ್ನು ಬೆಳೆಸಬೇಕು. ವಿಶಾಲ ಮನೋಭಾವನೆ ಬೆಳೆಯಲು ಕನ್ನಡ ಹಾಗೂ ಇತರ ಭಾಷೆಯ ಕಲಿಕೆ ಅಗತ್ಯ ಎಂದು ಶಿಕ್ಷಣ ತಜ್ಞ , ಮರಾಠಿಯ ಹಿರಿಯ ಸಾಹಿತಿ ಡಾ. ನ.ಮ. ಜೋಶಿ ಅವರು ಹೇಳಿದರು.<br /> <br /> ಅವರು ಇಲ್ಲಿ ಕೃ.ಶಿ. ಹೆಗಡೆ ಅವರು ಮರಾಠಿಗರ ಅಧ್ಯಯನಕ್ಕಾಗಿಯೇ ರಚಿಸಿದ ಇಲ್ಲಿನ ಗುರುಕುಲ ಪ್ರತಿಷ್ಠಾನದಿಂದ ಪ್ರಕಟವಾಗಿರುವ `ಸುಲಭ ಕನ್ನಡ~ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಈ ಸಾಲಿನ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳನ್ನು ಉದ್ಘಾಟಿಸಿದರು. ಹಿಂದಿನ ಸಾಲಿನ ಕನ್ನಡ ಕಲಿಕಾ ವರ್ಗಗಳ ಪ್ರಮಾಣ ಪತ್ರ ಪ್ರದಾನ ಮಾಡಿದರು.<br /> <br /> ಪ್ರತಿಕೂಲ ಸ್ಥಿತಿಯಲ್ಲಿ ದಶಕಗಳ ಕಾಲದಿಂದ ಕನ್ನಡ ವರ್ಗಗಳನ್ನು ಪುಣೆಯಂತಹ ನಗರದಲ್ಲಿ ನಡೆಸಿಕೊಂಡು ಬರುವುದು ಸುಲಭವಲ್ಲ. ಇದಕ್ಕೆ ಹಟಮಾರಿತನ, ಭಾಷಾ ಸಾಮರಸ್ಯದ ಅಭಿಮಾನ, ಸ್ಥಾನಿಕರ ಪ್ರೋತ್ಸಾಹ ಈ ರೀತಿ ಅನೇಕ ಕಾರಣಗಳಿವೆ ಎಂದು ಮರಾಠಿ- ಕನ್ನಡ ಸ್ನೇಹವರ್ಧನ ಕೇಂದ್ರದ ಅಧ್ಯಕ್ಷ ಡಾ. ಭಾ.ರ. ಸಾಬಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>