<p><strong>ಬೀದರ್</strong>: ಜಿಲ್ಲೆಯಲ್ಲಿ ಅಂಗವಿಕಲರ ಪುನರ್ವಸತಿ ಉದ್ದೇಶಗಳಿಗಾಗಿ ಬಳಸಲು 2006-07ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದ 10 ಲಕ್ಷ ರೂಪಾಯಿ ಇನ್ನೂ ಬಳಕೆಯಾಗದೇ ಉಳಿದಿದೆ. ನಿಯಮಾನುಸಾರ ಯೋಜನೆಯನ್ನು ಕಾರ್ಯಗತ ಗೊಳಿಸಬೇಕಾದ ಸಮಿತಿ ರಚನೆ ಆಗದೇ ಇರುವುದು ಇದಕ್ಕೆ ಕಾರಣ.<br /> <br /> ಇನ್ನೊಂದೆಡೆ, ಪ್ರಸ್ತುತ 2013-14ನೇ ಹಣಕಾಸು ವರ್ಷದಲ್ಲಿ ಮೂರು ತಿಂಗಳ ಕಾಲಾವಧಿಯು ಈಗಾಗಲೇ ಕಳೆದು ಹೋಗಿದ್ದರೂ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಬೇಕಾಗಿರುವ ರೂಪುರೇಷೆ ಇನ್ನು ಸಿದ್ಧವಾಗಿಲ್ಲ.<br /> <br /> ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ (ಡಿಡಿಆರ್ಸಿ) ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಅಂಶಗಳೂ ಪ್ರಮುಖವಾಗಿ ಚರ್ಚೆಯಾಯಿತು. ಅಲ್ಲದೆ, ಅಂಗವಿಕಲರಿಗಾಗಿ ಇರುವ ಪುನರ್ವಸತಿ ಕುರಿತ ಕಾರ್ಯಕ್ರಮಗಳ ಜಾರಿ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ರೆಡ್ಕ್ರಾಸ್ ಸಂಸ್ಥೆಗೆ ವಹಿಸಲು ಸಭೆಯು ತೀರ್ಮಾನಿಸಿದೆ.<br /> <br /> ಅಂಗವಿಕಲರಿಗಾಗಿ ಇರುವ ವಿವಿಧ ಸೌಲಭ್ಯ ಒದಗಿಸಲು ನೆರವಾಗುವುದು; ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೃತಕ ಕೈ, ಕಾಲು ಅಳವಡಿಸಲು ಸಹಕಾರಿ ಆಗುವುದು, ಅಂಗವಿಕಲ ಅಭ್ಯರ್ಥಿಗಳ ಆರೋಗ್ಯ ತಪಾಸಣೆಗಾಗಿ ಶಿಬಿರಗಳನ್ನು ಸಂಘಟಿಸುವುದು ಮತ್ತಿತರ ಕಾರ್ಯಗಳನ್ನು ಈ ಮೇಲ್ವಿಚಾರಣಾ ತಂಡ ನಿರ್ವಹಿಸಬೇಕಾಗಿದೆ.<br /> <br /> ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಉಳಿದಂತೆ, ಡಿಡಿಪಿಐ, ರೆಡ್ಕ್ರಾಸ್ ಪ್ರತಿನಿಧಿ ಸೇರಿ ಏಳು ಮಂದಿ ಸದಸ್ಯರಿರುತ್ತಾರೆ.<br /> ರೆಡ್ಕ್ರಾಸ್ನಿಂದ ಅಗತ್ಯ ದಾಖಲಾತಿಗಳನ್ನು ಮೇಲ್ವಿಚಾರಣಾ ತಂಡವಾಗಿ ರೆಡ್ಕ್ರಾಸ್ ಕಾರ್ಯ ನಿರ್ವಹಣೆಗೆ ಸರ್ಕಾರದ ಅನುಮೋದನೆಯನ್ನು ಪಡೆದ ಬಳಿಕ ಅಧಿಕೃತವಾಗಿ ಅಂಗವಿಕಲ ಪುನರ್ವಸತಿ ಕಾರ್ಯಕ್ರಮಗಳ ಜಾರಿ ಪ್ರಕ್ರಿಯೆಯು ಆರಂಭವಾಗಬೇಕಾಗಿದೆ. <br /> <br /> ಅಧಿಕಾರಿ ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 35 ಸಾವಿರ ಮಂದಿ ಅಂಗವಿಕಲರು ಇದ್ದಾರೆ ಎಂಬುದು ಅಂದಾಜು. ಈ ಪೈಕಿ ಅಂಗವಿಕಲತೆಯ ಪ್ರಮಾಣಗಳನ್ನು ಆಧರಿಸಿ ಮಾಸಾಶನವನ್ನು ಪಡೆಯುತ್ತಿದ್ದಾರೆ.<br /> <br /> ಈ ನಡುವೆ, ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ವಿವಿಧ ಅಂಗವಿಕಲ ಕಲ್ಯಾಣ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಅಂಗವಿಕಲರ ಸಮಸ್ಯೆಗಳ ಬಗೆಗೆ ಗಮನ ಸೆಳೆದರು ಎಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಜಿಲ್ಲೆಯಲ್ಲಿ ಅಂಗವಿಕಲರ ಪುನರ್ವಸತಿ ಉದ್ದೇಶಗಳಿಗಾಗಿ ಬಳಸಲು 2006-07ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದ 10 ಲಕ್ಷ ರೂಪಾಯಿ ಇನ್ನೂ ಬಳಕೆಯಾಗದೇ ಉಳಿದಿದೆ. ನಿಯಮಾನುಸಾರ ಯೋಜನೆಯನ್ನು ಕಾರ್ಯಗತ ಗೊಳಿಸಬೇಕಾದ ಸಮಿತಿ ರಚನೆ ಆಗದೇ ಇರುವುದು ಇದಕ್ಕೆ ಕಾರಣ.<br /> <br /> ಇನ್ನೊಂದೆಡೆ, ಪ್ರಸ್ತುತ 2013-14ನೇ ಹಣಕಾಸು ವರ್ಷದಲ್ಲಿ ಮೂರು ತಿಂಗಳ ಕಾಲಾವಧಿಯು ಈಗಾಗಲೇ ಕಳೆದು ಹೋಗಿದ್ದರೂ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಬೇಕಾಗಿರುವ ರೂಪುರೇಷೆ ಇನ್ನು ಸಿದ್ಧವಾಗಿಲ್ಲ.<br /> <br /> ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ (ಡಿಡಿಆರ್ಸಿ) ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಅಂಶಗಳೂ ಪ್ರಮುಖವಾಗಿ ಚರ್ಚೆಯಾಯಿತು. ಅಲ್ಲದೆ, ಅಂಗವಿಕಲರಿಗಾಗಿ ಇರುವ ಪುನರ್ವಸತಿ ಕುರಿತ ಕಾರ್ಯಕ್ರಮಗಳ ಜಾರಿ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ರೆಡ್ಕ್ರಾಸ್ ಸಂಸ್ಥೆಗೆ ವಹಿಸಲು ಸಭೆಯು ತೀರ್ಮಾನಿಸಿದೆ.<br /> <br /> ಅಂಗವಿಕಲರಿಗಾಗಿ ಇರುವ ವಿವಿಧ ಸೌಲಭ್ಯ ಒದಗಿಸಲು ನೆರವಾಗುವುದು; ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೃತಕ ಕೈ, ಕಾಲು ಅಳವಡಿಸಲು ಸಹಕಾರಿ ಆಗುವುದು, ಅಂಗವಿಕಲ ಅಭ್ಯರ್ಥಿಗಳ ಆರೋಗ್ಯ ತಪಾಸಣೆಗಾಗಿ ಶಿಬಿರಗಳನ್ನು ಸಂಘಟಿಸುವುದು ಮತ್ತಿತರ ಕಾರ್ಯಗಳನ್ನು ಈ ಮೇಲ್ವಿಚಾರಣಾ ತಂಡ ನಿರ್ವಹಿಸಬೇಕಾಗಿದೆ.<br /> <br /> ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಉಳಿದಂತೆ, ಡಿಡಿಪಿಐ, ರೆಡ್ಕ್ರಾಸ್ ಪ್ರತಿನಿಧಿ ಸೇರಿ ಏಳು ಮಂದಿ ಸದಸ್ಯರಿರುತ್ತಾರೆ.<br /> ರೆಡ್ಕ್ರಾಸ್ನಿಂದ ಅಗತ್ಯ ದಾಖಲಾತಿಗಳನ್ನು ಮೇಲ್ವಿಚಾರಣಾ ತಂಡವಾಗಿ ರೆಡ್ಕ್ರಾಸ್ ಕಾರ್ಯ ನಿರ್ವಹಣೆಗೆ ಸರ್ಕಾರದ ಅನುಮೋದನೆಯನ್ನು ಪಡೆದ ಬಳಿಕ ಅಧಿಕೃತವಾಗಿ ಅಂಗವಿಕಲ ಪುನರ್ವಸತಿ ಕಾರ್ಯಕ್ರಮಗಳ ಜಾರಿ ಪ್ರಕ್ರಿಯೆಯು ಆರಂಭವಾಗಬೇಕಾಗಿದೆ. <br /> <br /> ಅಧಿಕಾರಿ ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 35 ಸಾವಿರ ಮಂದಿ ಅಂಗವಿಕಲರು ಇದ್ದಾರೆ ಎಂಬುದು ಅಂದಾಜು. ಈ ಪೈಕಿ ಅಂಗವಿಕಲತೆಯ ಪ್ರಮಾಣಗಳನ್ನು ಆಧರಿಸಿ ಮಾಸಾಶನವನ್ನು ಪಡೆಯುತ್ತಿದ್ದಾರೆ.<br /> <br /> ಈ ನಡುವೆ, ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ವಿವಿಧ ಅಂಗವಿಕಲ ಕಲ್ಯಾಣ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಅಂಗವಿಕಲರ ಸಮಸ್ಯೆಗಳ ಬಗೆಗೆ ಗಮನ ಸೆಳೆದರು ಎಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>