<p><strong>ಮಂಗಳೂರು:</strong> ಕಂಕನಾಡಿ ಹಾಗೂ ನಂತೂರಿನ ಮಸಾಜ್ ಪಾರ್ಲರ್ಗಳ ದಾಳಿಗೆ ಪೊಲೀಸರ ಹಫ್ತಾ ವಸೂಲಿ ಹಿನ್ನೆಲೆಯೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕದ್ರಿ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. <br /> <br /> ಕದ್ರಿ ಇನ್ಸ್ಪೆಕ್ಟರ್ ಕಿರಣ್, ಹೆಡ್ ಕಾನ್ಸ್ಟೇಬಲ್ ಶಿವಪ್ಪ, ಕಾನ್ಸ್ಟೆಬಲ್ ಪ್ರಮೋದ್ ಅಮಾನತುಗೊಂಡವರು. <br /> `ತನಿಖೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆಸಲಾಗುವುದು~ ಎಂದು ಮಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಬುಧವಾರ ತಿಳಿಸಿದರು. <br /> <br /> ವೇಶ್ಯಾವಾಟಿಕೆ ಆರೋಪದ ಮೇರೆಗೆ ಕದ್ರಿ ಠಾಣೆ ಪೊಲೀಸರು ಮೂನ್ಶೈನ್ ಹಾಗೂ ಅಲೆವೆರಾ ಮಸಾಜ್ ಸೆಂಟರ್ಗಳಿಗೆ ಫೆ. 13ರಂದು ದಾಳಿ ನಡೆಸಿ ನಾಲ್ವರು ಮಹಿಳಾ ಸಿಬ್ಬಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. <br /> ಹಫ್ತಾ ವಸೂಲಿಗೆ ಒತ್ತಾಯಿಸಿದ್ದ ಪೊಲೀಸರು, ಕೇಳಿದಷ್ಟು ಹಣ ನೀಡಲಿಲ್ಲವೆಂದು ದಾಳಿ ನಡೆಸಿದ್ದರು ಎಂದು ಮಾಲೀಕರಾದ ಸತೀಶ್ ರೈ ಹಾಗೂ ಲೋಕೇಶ್ ರೈ ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ಸಲ್ಲಿಸಿದ್ದರು. <br /> ಆರೋಪಗಳ ಕುರಿತು ತನಿಖೆಗೆ ಎಸಿಪಿ ಜಿ.ವಿ.ಸುಬ್ರಹ್ಮಣ್ಯ ಅವರನ್ನು ನಿಯೋಜಿಸಲಾಗಿತ್ತು. ಅವರ ನೀಡಿದ ವರದಿ ಆಧರಿಸಿ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದಾರೆ. <br /> <br /> `ಪೊಲೀಸರು ಪಾರ್ಲರ್ನ ಕ್ಯಾಶ್ಬಾಕ್ಸ್ಗೆ ಕಾಂಡೋಮ್ ಹಾಕುತ್ತಿರುವ ದೃಶ್ಯ ಪಾರ್ಲರ್ನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಬ್ಬರು ಪುರುಷರನ್ನೂ ಗಿರಾಕಿಗಳಂತೆ ಪೊಲೀಸರೇ ಕರೆತಂದಿದ್ದರು. <br /> <br /> ದಾಳಿ ವೇಳೆ ಮಹಿಳೆಯರು ಹಾಗೂ ಗಿರಾಕಿಗಳು ಅರೆನಗ್ನ ಸ್ಥಿತಿಯಲ್ಲಿದ್ದರು ಎಂದು ಎಫ್ಐಆರ್ನಲ್ಲಿ ತೋರಿಸಲಾಗಿದೆ. ಹಫ್ತಾ ಕೊಡದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು~ ಮಸಾಜ್ ಪಾರ್ಲರ್ ಮಾಲೀಕರು ದೂರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕಂಕನಾಡಿ ಹಾಗೂ ನಂತೂರಿನ ಮಸಾಜ್ ಪಾರ್ಲರ್ಗಳ ದಾಳಿಗೆ ಪೊಲೀಸರ ಹಫ್ತಾ ವಸೂಲಿ ಹಿನ್ನೆಲೆಯೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕದ್ರಿ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. <br /> <br /> ಕದ್ರಿ ಇನ್ಸ್ಪೆಕ್ಟರ್ ಕಿರಣ್, ಹೆಡ್ ಕಾನ್ಸ್ಟೇಬಲ್ ಶಿವಪ್ಪ, ಕಾನ್ಸ್ಟೆಬಲ್ ಪ್ರಮೋದ್ ಅಮಾನತುಗೊಂಡವರು. <br /> `ತನಿಖೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆಸಲಾಗುವುದು~ ಎಂದು ಮಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಬುಧವಾರ ತಿಳಿಸಿದರು. <br /> <br /> ವೇಶ್ಯಾವಾಟಿಕೆ ಆರೋಪದ ಮೇರೆಗೆ ಕದ್ರಿ ಠಾಣೆ ಪೊಲೀಸರು ಮೂನ್ಶೈನ್ ಹಾಗೂ ಅಲೆವೆರಾ ಮಸಾಜ್ ಸೆಂಟರ್ಗಳಿಗೆ ಫೆ. 13ರಂದು ದಾಳಿ ನಡೆಸಿ ನಾಲ್ವರು ಮಹಿಳಾ ಸಿಬ್ಬಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. <br /> ಹಫ್ತಾ ವಸೂಲಿಗೆ ಒತ್ತಾಯಿಸಿದ್ದ ಪೊಲೀಸರು, ಕೇಳಿದಷ್ಟು ಹಣ ನೀಡಲಿಲ್ಲವೆಂದು ದಾಳಿ ನಡೆಸಿದ್ದರು ಎಂದು ಮಾಲೀಕರಾದ ಸತೀಶ್ ರೈ ಹಾಗೂ ಲೋಕೇಶ್ ರೈ ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ಸಲ್ಲಿಸಿದ್ದರು. <br /> ಆರೋಪಗಳ ಕುರಿತು ತನಿಖೆಗೆ ಎಸಿಪಿ ಜಿ.ವಿ.ಸುಬ್ರಹ್ಮಣ್ಯ ಅವರನ್ನು ನಿಯೋಜಿಸಲಾಗಿತ್ತು. ಅವರ ನೀಡಿದ ವರದಿ ಆಧರಿಸಿ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದಾರೆ. <br /> <br /> `ಪೊಲೀಸರು ಪಾರ್ಲರ್ನ ಕ್ಯಾಶ್ಬಾಕ್ಸ್ಗೆ ಕಾಂಡೋಮ್ ಹಾಕುತ್ತಿರುವ ದೃಶ್ಯ ಪಾರ್ಲರ್ನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಬ್ಬರು ಪುರುಷರನ್ನೂ ಗಿರಾಕಿಗಳಂತೆ ಪೊಲೀಸರೇ ಕರೆತಂದಿದ್ದರು. <br /> <br /> ದಾಳಿ ವೇಳೆ ಮಹಿಳೆಯರು ಹಾಗೂ ಗಿರಾಕಿಗಳು ಅರೆನಗ್ನ ಸ್ಥಿತಿಯಲ್ಲಿದ್ದರು ಎಂದು ಎಫ್ಐಆರ್ನಲ್ಲಿ ತೋರಿಸಲಾಗಿದೆ. ಹಫ್ತಾ ಕೊಡದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು~ ಮಸಾಜ್ ಪಾರ್ಲರ್ ಮಾಲೀಕರು ದೂರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>