<p>ತಿಪಟೂರು: ನಗರದ ಎಪಿಎಂಸಿಯಲ್ಲಿ ನೂತನವಾಗಿ ಜಾರಿಗೆ ಬಂದಿರುವ ಏಕೀಕೃತ ಮಾರುಕಟ್ಟೆ ವೇದಿಕೆ ವ್ಯವಸ್ಥೆಯಿಂದ ರೈತರ ಕೊಬ್ಬರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ಸಹಿಸಲಾಗದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ದೇವರಾಜು ಎಚ್ಚರಿಸಿದ್ದಾರೆ.<br /> <br /> ಮಾರುಕಟ್ಟೆಗೆ ರೈತರು ಕೊಬ್ಬರಿಯನ್ನು ವರ್ಗೀಕರಣ ಮಾಡಿ ತರುವುದರಿಂದ ಕೊಬ್ಬರಿಗೆ ಸೂಕ್ತ ಧಾರಣೆ ಸಿಗುತ್ತದೆ. ನೇರ ನಗದು ವ್ಯವಸ್ಥೆಯೂ ರೈತರನ್ನು ವಂಚಿಸಲು ಅವಕಾಶವಿಲ್ಲದ ಅವಕಾಶ ಸೃಷ್ಟಿಸಿದೆ. ಎಲ್ಲ ರೀತಿಯಲ್ಲೂ ಈ ಹೊಸ ಪದ್ಧತಿ ಅನುಕೂಲವಾಗಿದೆ. ಹೀಗಿದ್ದರೂ ಕೊಬ್ಬರಿ ವರ್ತಕರು ತಮ್ಮ ಅನುಕೂಲಕ್ಕಾಗಿ, ಪಾರದರ್ಶಕ ರೀತಿಯಲ್ಲಿರುವ ಆನ್ಲೈನ್ ಮಾರಾಟ ವ್ಯವಸ್ಥೆಯನ್ನು<br /> ವಿರೋಧಿಸುತ್ತಿದ್ದಾರೆ.<br /> <br /> ಇದರಿಂದ ರೈತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಆನ್ಲೈನ್ ವ್ಯವಸ್ಥೆಯಲ್ಲೇ ಕೊಬ್ಬರಿ ಮಾರಾಟ ಮಾಡಲು ರೈತರು ಮಂದಾಗಬೇಕು. ಅಲ್ಲದೇ ರಾಜ್ಯ ಸರ್ಕಾರ ಈ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಯತ್ನ ಮಾಡಬಾರದು ಎಂದು ಬಿ.ಎಸ್.ದೇವರಾಜು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.<br /> <br /> ಕೊಬ್ಬರಿ ರವಾನೆದಾರರು, ದಲ್ಲಾಳಿಗಳು, ರೈತರೊಂದಿಗೆ ಎಪಿಎಂಸಿಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಸಾಧಕ, ಬಾಧಕ ಚರ್ಚಿಸಿಯೇ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಸಭೆ ಸಂದರ್ಭ ಸಮ್ಮತಿ ಸೂಚಿಸಿದ ವರ್ತಕರು ಈಗ ತಕರಾರು ತೆಗೆದಿರುವುದು ಸರಿಯಲ್ಲ.<br /> <br /> ಸ್ವತಃ ವರ್ತಕರೂ ಆದ ಶಾಸಕ ಕೆ.ಷಡಕ್ಷರಿ ಕೂಡ ಈ ಪದ್ಧತಿ ಬಗ್ಗೆ ಅಷ್ಟಾಗಿ ಆಸಕ್ತಿ ತಾಳಿದಂತೆ ಕಾಣದಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಆರೋಪಿಸಿದ್ದಾರೆ. ಏನೇ ಆದರೂ ಈ ಪದ್ಧತಿ ಕೈಬಿಡಲು ರೈತರ ಸಂಘ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಪಟೂರು: ನಗರದ ಎಪಿಎಂಸಿಯಲ್ಲಿ ನೂತನವಾಗಿ ಜಾರಿಗೆ ಬಂದಿರುವ ಏಕೀಕೃತ ಮಾರುಕಟ್ಟೆ ವೇದಿಕೆ ವ್ಯವಸ್ಥೆಯಿಂದ ರೈತರ ಕೊಬ್ಬರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ಸಹಿಸಲಾಗದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ದೇವರಾಜು ಎಚ್ಚರಿಸಿದ್ದಾರೆ.<br /> <br /> ಮಾರುಕಟ್ಟೆಗೆ ರೈತರು ಕೊಬ್ಬರಿಯನ್ನು ವರ್ಗೀಕರಣ ಮಾಡಿ ತರುವುದರಿಂದ ಕೊಬ್ಬರಿಗೆ ಸೂಕ್ತ ಧಾರಣೆ ಸಿಗುತ್ತದೆ. ನೇರ ನಗದು ವ್ಯವಸ್ಥೆಯೂ ರೈತರನ್ನು ವಂಚಿಸಲು ಅವಕಾಶವಿಲ್ಲದ ಅವಕಾಶ ಸೃಷ್ಟಿಸಿದೆ. ಎಲ್ಲ ರೀತಿಯಲ್ಲೂ ಈ ಹೊಸ ಪದ್ಧತಿ ಅನುಕೂಲವಾಗಿದೆ. ಹೀಗಿದ್ದರೂ ಕೊಬ್ಬರಿ ವರ್ತಕರು ತಮ್ಮ ಅನುಕೂಲಕ್ಕಾಗಿ, ಪಾರದರ್ಶಕ ರೀತಿಯಲ್ಲಿರುವ ಆನ್ಲೈನ್ ಮಾರಾಟ ವ್ಯವಸ್ಥೆಯನ್ನು<br /> ವಿರೋಧಿಸುತ್ತಿದ್ದಾರೆ.<br /> <br /> ಇದರಿಂದ ರೈತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಆನ್ಲೈನ್ ವ್ಯವಸ್ಥೆಯಲ್ಲೇ ಕೊಬ್ಬರಿ ಮಾರಾಟ ಮಾಡಲು ರೈತರು ಮಂದಾಗಬೇಕು. ಅಲ್ಲದೇ ರಾಜ್ಯ ಸರ್ಕಾರ ಈ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಯತ್ನ ಮಾಡಬಾರದು ಎಂದು ಬಿ.ಎಸ್.ದೇವರಾಜು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.<br /> <br /> ಕೊಬ್ಬರಿ ರವಾನೆದಾರರು, ದಲ್ಲಾಳಿಗಳು, ರೈತರೊಂದಿಗೆ ಎಪಿಎಂಸಿಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಸಾಧಕ, ಬಾಧಕ ಚರ್ಚಿಸಿಯೇ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಸಭೆ ಸಂದರ್ಭ ಸಮ್ಮತಿ ಸೂಚಿಸಿದ ವರ್ತಕರು ಈಗ ತಕರಾರು ತೆಗೆದಿರುವುದು ಸರಿಯಲ್ಲ.<br /> <br /> ಸ್ವತಃ ವರ್ತಕರೂ ಆದ ಶಾಸಕ ಕೆ.ಷಡಕ್ಷರಿ ಕೂಡ ಈ ಪದ್ಧತಿ ಬಗ್ಗೆ ಅಷ್ಟಾಗಿ ಆಸಕ್ತಿ ತಾಳಿದಂತೆ ಕಾಣದಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಆರೋಪಿಸಿದ್ದಾರೆ. ಏನೇ ಆದರೂ ಈ ಪದ್ಧತಿ ಕೈಬಿಡಲು ರೈತರ ಸಂಘ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>