<p><strong>ಲಾಹೋರ್ (ಪಿಟಿಐ): </strong>ನಿಷೇಧಿತ ಉಗ್ರ ಸಂಘಟನೆ `ಲಷ್ಕರ್-ಎ- ತೈಯಬಾ'ದ ಮಾರುವೇಷದ ಸಂಘಟನೆ `ಜಮಾತ್-ಉದ್-ದವಾ' (ಜೆಯುಡಿ) ಪ್ರಧಾನ ಕೇಂದ್ರಕ್ಕೆ ರೂ 6.1 ಕೋಟಿ ಅನುದಾನ ನೀಡಿರುವುದನ್ನು ಪಾಕ್ನ ಪಂಜಾಬ್ ಪ್ರಾಂತ್ಯದ ಸರ್ಕಾರ ಸಮರ್ಥಿಸಿಕೊಂಡಿದೆ. ಅಲ್ಲಿನ ಜನರ ಸೌಲಭ್ಯಗಳಿಗಾಗಿ ಇಷ್ಟು ಮೊತ್ತದ ಅನುದಾನ ನೀಡುವುದು ಅಗತ್ಯವಾಗಿತ್ತು ಎಂದು ಪಂಜಾಬ್ ಪ್ರಾಂತ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.<br /> <br /> ಜೆಡಿಯುನಿಂದ ನಡೆಸಲ್ಪಡುತ್ತಿರುವ ಸಂಸ್ಥೆಗಳ ಆಡಳಿತದ ನಿರ್ವಹಣೆಯನ್ನು ಪಂಜಾಬ್ ಪ್ರಾಂತ್ಯ ಸರ್ಕಾರವೇ ನಿಯಂತ್ರಿಸುತ್ತಿದೆ. ಈ ನಿಯಂತ್ರಣದ ಹಿಂದೆ ಎರಡು ಮುಖ್ಯ ಉದ್ದೇಶಗಳಿವೆ. ಮೊದಲನೆಯದು ಜೆಯುಡಿ ತನ್ನ ಚಟುವಟಿಕೆಗಳನ್ನು ಮುಂದುವರೆಸದಂತೆ ತಡೆಯುವುದು ಹಾಗೂ ಅಲ್ಲಿನ ಸ್ಥಳೀಯರಿಗೆ ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯ ಒದಗಿಸುವುದು ಎಂದು ವಕ್ತಾರರು ವಿವರಿಸಿದ್ದಾರೆ.<br /> <br /> ಜನರಿಗೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಆಡಳಿತ ನಿರ್ವಹಣೆಗಾಗಿಯೇ ಪಂಜಾಬ್ ಪ್ರಾಂತ್ಯ ಸರ್ಕಾರ 2008ರಿಂದಲೇ ಅಧಿಕಾರಿಗಳನ್ನು ನೇಮಿಸಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್ (ಪಿಟಿಐ): </strong>ನಿಷೇಧಿತ ಉಗ್ರ ಸಂಘಟನೆ `ಲಷ್ಕರ್-ಎ- ತೈಯಬಾ'ದ ಮಾರುವೇಷದ ಸಂಘಟನೆ `ಜಮಾತ್-ಉದ್-ದವಾ' (ಜೆಯುಡಿ) ಪ್ರಧಾನ ಕೇಂದ್ರಕ್ಕೆ ರೂ 6.1 ಕೋಟಿ ಅನುದಾನ ನೀಡಿರುವುದನ್ನು ಪಾಕ್ನ ಪಂಜಾಬ್ ಪ್ರಾಂತ್ಯದ ಸರ್ಕಾರ ಸಮರ್ಥಿಸಿಕೊಂಡಿದೆ. ಅಲ್ಲಿನ ಜನರ ಸೌಲಭ್ಯಗಳಿಗಾಗಿ ಇಷ್ಟು ಮೊತ್ತದ ಅನುದಾನ ನೀಡುವುದು ಅಗತ್ಯವಾಗಿತ್ತು ಎಂದು ಪಂಜಾಬ್ ಪ್ರಾಂತ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.<br /> <br /> ಜೆಡಿಯುನಿಂದ ನಡೆಸಲ್ಪಡುತ್ತಿರುವ ಸಂಸ್ಥೆಗಳ ಆಡಳಿತದ ನಿರ್ವಹಣೆಯನ್ನು ಪಂಜಾಬ್ ಪ್ರಾಂತ್ಯ ಸರ್ಕಾರವೇ ನಿಯಂತ್ರಿಸುತ್ತಿದೆ. ಈ ನಿಯಂತ್ರಣದ ಹಿಂದೆ ಎರಡು ಮುಖ್ಯ ಉದ್ದೇಶಗಳಿವೆ. ಮೊದಲನೆಯದು ಜೆಯುಡಿ ತನ್ನ ಚಟುವಟಿಕೆಗಳನ್ನು ಮುಂದುವರೆಸದಂತೆ ತಡೆಯುವುದು ಹಾಗೂ ಅಲ್ಲಿನ ಸ್ಥಳೀಯರಿಗೆ ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯ ಒದಗಿಸುವುದು ಎಂದು ವಕ್ತಾರರು ವಿವರಿಸಿದ್ದಾರೆ.<br /> <br /> ಜನರಿಗೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಆಡಳಿತ ನಿರ್ವಹಣೆಗಾಗಿಯೇ ಪಂಜಾಬ್ ಪ್ರಾಂತ್ಯ ಸರ್ಕಾರ 2008ರಿಂದಲೇ ಅಧಿಕಾರಿಗಳನ್ನು ನೇಮಿಸಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>