<p><strong>ನವದೆಹಲಿ (ಪಿಟಿಐ):</strong> ಕಾಂಗ್ರೆಸ್ ಸಂಸದ ವಿಜಯ್ ಬಹುಗುಣ ಅವರು ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಪ್ರಕಟಿಸಿದ್ದಾರೆ.</p>.<p>ಆಜಾದ್ ಹೇಳಿಕೆ ಪ್ರಕಟಗೊಂಡ ಬಳಿಕ ಮಾತನಾಡಿದ ವಿಜಯ್ ಅವರು, ಪಕ್ಷದ ಎಲ್ಲ ವರ್ಗಗಳ ಮುಖಂಡರನ್ನು ಒಗ್ಗೂಡಿಸುವುದಾಗಿ ಮತ್ತು ಯಾವುದೇ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.</p>.<p>ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸಚಿವ ಹರೀಶ್ ರಾವತ್ ಮತ್ತು ಸಂಸದ ವಿಜಯ್ ಬಹುಗುಣ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದರ್ ಸಿಂಗ್ ಮಾತುಕತೆ ನಡೆಸಿದ ಬಳಿಕ ಆಜಾದ್ ವಿಜಯ್ ಹೆಸರು ಪ್ರಕಟಿಸಿದ್ದಾರೆ.</p>.<p>ಈ ಮುಂಚೆ ನಡೆದ ಸಭೆಯಲ್ಲಿ ಸಿಎಂ ಆಯ್ಕೆ ನಿರ್ಧಾರವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಆಜಾದ್ ತಿಳಿಸಿದ್ದರು. ಸಿಎಂ ಆಯ್ಕೆಗೆ ಶಾಸಕ ಅಥವಾ ಸಂಸದರಲ್ಲಿ ಯಾವ ಮಾನದಂಡ ನಿಗದಿಪಡಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, `ಇಲ್ಲ, ಇಂಥ ಯಾವ ಮಾನದಂಡವೂ ಇಲ್ಲ. ಇದನ್ನು ಮಾಧ್ಯಮಗಳ ಸೃಷ್ಟಿ. ಸರ್ಕಾರಕ್ಕೆ ಬಿಎಸ್ಪಿ ಸಹ ಬೆಂಬಲ ನೀಡಿದೆ~ ಎಂದರು.</p>.<p>ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಮುಖಂಡ ಬೀರೇಂದ್ರ ಸಿಂಗ್, ಆಜಾದ್ ಮತ್ತು ಅಹ್ಮದ್ ಪಟೇಲ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೂ ಸಭೆ ನಡೆಸಿದರು.</p>.<p><strong>ಪ್ರಮಾಣ ವಚನಕ್ಕೆ ಸಿದ್ಧತೆ</strong></p>.<p><strong>ಡೆಹ್ರಾಡೂನ್ ವರದಿ:</strong> ಉತ್ತರಾಖಂಡದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಲ್ಲಿನ ಪರೇಡ್ ಗ್ರೌಂಡ್ ಆಯ್ಕೆ ಮಾಡಲಾಗಿದೆ.</p>.<p>ಈ ಸ್ಥಳದಲ್ಲಿ ಈಗಾಗಲೇ ಟೆಂಟ್ ಮತ್ತು ಕುರ್ಚಿಗಳನ್ನು ಹಾಕಲಾಗಿದ್ದು, ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆದಾಗ್ಯೂ, ಒಂದೊಮ್ಮೆ ಹವಾಮಾನ ಪರಿಸ್ಥಿತಿಯಲ್ಲಿ ಬದಲಾವಣೆಯಾದರೆ ಸಮಾರಂಭವನ್ನು ಒಳಾಂಗಣ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದಿದ್ದಾರೆ.</p>.<p>ಸಮಾರಂಭದಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರಿಂದ ಪರೇಡ್ ಗ್ರೌಂಡ್ ಆಯ್ಕೆ ಮಾಡಿಕೊಳ್ಳಲಾಗಿದೆ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಮಾರ ಹೇಳಿದ್ದಾರೆ.</p>.<p>2000ರಲ್ಲಿ ಬಿಜೆಪಿ ಮಧ್ಯಂತರ ಸರ್ಕಾರದ ಪ್ರಮಾಣ ವಚನ ಸಮಾರಂಭ ಪರೇಡ್ ಗ್ರೌಂಡ್ನಲ್ಲಿ ಜರುಗಿತ್ತು. ಉಳಿದಂತೆ ಎಲ್ಲ ಪ್ರಮಾಣ ವಚನ ಸಮಾರಂಭಪೆವಿಲಿಯನ್ ಗ್ರೌಂಡ್ ಮತ್ತು ಒಎನ್ಜಿಸಿ ಸಭಾಂಗಣದಲ್ಲಿ ನಡೆದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕಾಂಗ್ರೆಸ್ ಸಂಸದ ವಿಜಯ್ ಬಹುಗುಣ ಅವರು ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಪ್ರಕಟಿಸಿದ್ದಾರೆ.</p>.<p>ಆಜಾದ್ ಹೇಳಿಕೆ ಪ್ರಕಟಗೊಂಡ ಬಳಿಕ ಮಾತನಾಡಿದ ವಿಜಯ್ ಅವರು, ಪಕ್ಷದ ಎಲ್ಲ ವರ್ಗಗಳ ಮುಖಂಡರನ್ನು ಒಗ್ಗೂಡಿಸುವುದಾಗಿ ಮತ್ತು ಯಾವುದೇ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.</p>.<p>ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸಚಿವ ಹರೀಶ್ ರಾವತ್ ಮತ್ತು ಸಂಸದ ವಿಜಯ್ ಬಹುಗುಣ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದರ್ ಸಿಂಗ್ ಮಾತುಕತೆ ನಡೆಸಿದ ಬಳಿಕ ಆಜಾದ್ ವಿಜಯ್ ಹೆಸರು ಪ್ರಕಟಿಸಿದ್ದಾರೆ.</p>.<p>ಈ ಮುಂಚೆ ನಡೆದ ಸಭೆಯಲ್ಲಿ ಸಿಎಂ ಆಯ್ಕೆ ನಿರ್ಧಾರವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಆಜಾದ್ ತಿಳಿಸಿದ್ದರು. ಸಿಎಂ ಆಯ್ಕೆಗೆ ಶಾಸಕ ಅಥವಾ ಸಂಸದರಲ್ಲಿ ಯಾವ ಮಾನದಂಡ ನಿಗದಿಪಡಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, `ಇಲ್ಲ, ಇಂಥ ಯಾವ ಮಾನದಂಡವೂ ಇಲ್ಲ. ಇದನ್ನು ಮಾಧ್ಯಮಗಳ ಸೃಷ್ಟಿ. ಸರ್ಕಾರಕ್ಕೆ ಬಿಎಸ್ಪಿ ಸಹ ಬೆಂಬಲ ನೀಡಿದೆ~ ಎಂದರು.</p>.<p>ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಮುಖಂಡ ಬೀರೇಂದ್ರ ಸಿಂಗ್, ಆಜಾದ್ ಮತ್ತು ಅಹ್ಮದ್ ಪಟೇಲ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೂ ಸಭೆ ನಡೆಸಿದರು.</p>.<p><strong>ಪ್ರಮಾಣ ವಚನಕ್ಕೆ ಸಿದ್ಧತೆ</strong></p>.<p><strong>ಡೆಹ್ರಾಡೂನ್ ವರದಿ:</strong> ಉತ್ತರಾಖಂಡದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಲ್ಲಿನ ಪರೇಡ್ ಗ್ರೌಂಡ್ ಆಯ್ಕೆ ಮಾಡಲಾಗಿದೆ.</p>.<p>ಈ ಸ್ಥಳದಲ್ಲಿ ಈಗಾಗಲೇ ಟೆಂಟ್ ಮತ್ತು ಕುರ್ಚಿಗಳನ್ನು ಹಾಕಲಾಗಿದ್ದು, ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆದಾಗ್ಯೂ, ಒಂದೊಮ್ಮೆ ಹವಾಮಾನ ಪರಿಸ್ಥಿತಿಯಲ್ಲಿ ಬದಲಾವಣೆಯಾದರೆ ಸಮಾರಂಭವನ್ನು ಒಳಾಂಗಣ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದಿದ್ದಾರೆ.</p>.<p>ಸಮಾರಂಭದಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರಿಂದ ಪರೇಡ್ ಗ್ರೌಂಡ್ ಆಯ್ಕೆ ಮಾಡಿಕೊಳ್ಳಲಾಗಿದೆ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಮಾರ ಹೇಳಿದ್ದಾರೆ.</p>.<p>2000ರಲ್ಲಿ ಬಿಜೆಪಿ ಮಧ್ಯಂತರ ಸರ್ಕಾರದ ಪ್ರಮಾಣ ವಚನ ಸಮಾರಂಭ ಪರೇಡ್ ಗ್ರೌಂಡ್ನಲ್ಲಿ ಜರುಗಿತ್ತು. ಉಳಿದಂತೆ ಎಲ್ಲ ಪ್ರಮಾಣ ವಚನ ಸಮಾರಂಭಪೆವಿಲಿಯನ್ ಗ್ರೌಂಡ್ ಮತ್ತು ಒಎನ್ಜಿಸಿ ಸಭಾಂಗಣದಲ್ಲಿ ನಡೆದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>