<p><strong>ಮುಂಡರಗಿ: </strong>ಉನ್ನತ ಶಿಕ್ಷಣ ಪಡೆ ಯಲು ಇಂದು ಹಲವಾರು ಅವಕಾಶ ಗಳಿದ್ದು, ಹೆಚ್ಚು ಶ್ರಮಪಡುವ ವಿದ್ಯಾರ್ಥಿಗಳು ಏಕ ಕಾಲದಲ್ಲಿಯೇ ಹಲವು ವಿಷಯಗಳಲ್ಲಿ ಪ್ರಾವಿಣ್ಯತೆ ಸಾಧಿಸಬಹುದು~ ಎಂದು ಸರಕಾರಿ ಕಾಲೇಜು ಉಪನ್ಯಾಸಕ ಎಂ.ಎಂ. ಹೆಬ್ಬಾಳ ಹೇಳಿದರು.<br /> <br /> ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಕಡು ಬಡತನಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಪದವಿಗೆ ಏರಿ ದೇಶ ಹಾಗೂ ಸಮಾಜ ಸೇವೆ ಮಾಡಿದ ಹಲವಾರು ಸಾಧಕರು ನಮ್ಮ ನಡುವೆ ಇದ್ದಾರೆ.<br /> <br /> ವಿದ್ಯಾರ್ಥಿಗಳು ಅರ್ಥಹೀನ ಕೆಲಸಗಳಲ್ಲಿ ವಿನಾಕಾರಣ ಸಮಯ ವನ್ನು ವ್ಯರ್ಥ ಮಾಡದೆ ಹೆಚ್ಚು ಹೆಚ್ಚು ಓದಬೇಕೆನ್ನುವುದನ್ನು ಮಾತ್ರ ಮನ ದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ~ ಎಂದು ಅವರು ಸಲಹೆ ನೀಡಿದರು.<br /> <br /> `ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಕೆಲಸದ ಮೂಲಕ ಇಲಾಖೆ ಹಾಗೂ ಅಧಿಕಾರಿಗಳನ್ನು ತೃಪ್ತಿಪಡಿಸುವುಕ್ಕಿಂತ ಸಮಾಜದಲ್ಲಿರುವ ಜನರ ಹಾಗೂ ಪಾಲಕರು ಮೆಚ್ಚುವಂತೆ ಕೆಲಸ ಮಾಡಬೇಕು. <br /> <br /> ಸರಕಾರ ಹಾಗೂ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವುದಕ್ಕಿಂತ ಸಮಾಜದಿಂದ, ಪಾಲಕರಿಂದ ಮತ್ತು ಮಕ್ಕಳಿಂದ ಮನ್ನಣೆ ಗಳಿಸುವುದು ತುಂಬಾ ಅಗತ್ಯ~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೆರ ಹೇಳಿದರು.<br /> <br /> `ಶಿಕ್ಷಕರಿಗೆ ನೀಡುವ ವಿವಿಧ ಬಗೆಯ ತರಬೇತಿ ಹಾಗೂ ಅನ್ಯ ಕಾರ್ಯ ಗಳಿಂದಾಗಿ ಶಾಲೆಯ ಮಕ್ಕಳ ಅಭ್ಯಾಸಕ್ಕೆ ತುಂಬಾ ತೊಂದರೆಯಾಗು ತ್ತದೆ. <br /> <br /> ಬರಲಿರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ತಿಳಿದು ಬಂದಿದ್ದು, ಶಿಕ್ಷಕರಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡು ವುದಕ್ಕಿಂತ ರಜಾ ಅವಧಿಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ಮಕ್ಕಳಿಗೆ ಉಂಟಾಗುವ ತೊಂದರೆ ಯನ್ನು ನಿವಾರಿಸಬೇಕು~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಸದಸ್ಯ ಶಿವಪ್ಪ ಕೋರಿಶಟ್ಟರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕಾಶೀನಾಥ ಬಿಳಿಮಗ್ಗದ ಮಾತನಾಡಿದರು.<br /> <br /> ಶಾಲಾ ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ, ಶೇಖರಗೌಡ ಪಾಟೀಲ, ಈರಯ್ಯ ಹಿರೇಮಠ, ಕೊಟ್ರೇಶ ಅಂಗಡಿ ವೇದಿಕೆಯ ಮೇಲೆ ಹಾಜ ರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಎಂ.ಬಿ.ಮೇಟಿ ಸ್ವಾಗತಿಸಿ ದರು. ಭಾಗ್ಯಲಕ್ಷ್ಮಿ ಇನಾಮತಿ ಹಾಗೂ ಎಸ್.ಉಮಾದೇವಿ ಕಾರ್ಯ ಕ್ರಮ ನಿರೂಪಿಸಿದರು. ಉಮೇಶ ಬೂದಿಹಾಳ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ: </strong>ಉನ್ನತ ಶಿಕ್ಷಣ ಪಡೆ ಯಲು ಇಂದು ಹಲವಾರು ಅವಕಾಶ ಗಳಿದ್ದು, ಹೆಚ್ಚು ಶ್ರಮಪಡುವ ವಿದ್ಯಾರ್ಥಿಗಳು ಏಕ ಕಾಲದಲ್ಲಿಯೇ ಹಲವು ವಿಷಯಗಳಲ್ಲಿ ಪ್ರಾವಿಣ್ಯತೆ ಸಾಧಿಸಬಹುದು~ ಎಂದು ಸರಕಾರಿ ಕಾಲೇಜು ಉಪನ್ಯಾಸಕ ಎಂ.ಎಂ. ಹೆಬ್ಬಾಳ ಹೇಳಿದರು.<br /> <br /> ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಕಡು ಬಡತನಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಪದವಿಗೆ ಏರಿ ದೇಶ ಹಾಗೂ ಸಮಾಜ ಸೇವೆ ಮಾಡಿದ ಹಲವಾರು ಸಾಧಕರು ನಮ್ಮ ನಡುವೆ ಇದ್ದಾರೆ.<br /> <br /> ವಿದ್ಯಾರ್ಥಿಗಳು ಅರ್ಥಹೀನ ಕೆಲಸಗಳಲ್ಲಿ ವಿನಾಕಾರಣ ಸಮಯ ವನ್ನು ವ್ಯರ್ಥ ಮಾಡದೆ ಹೆಚ್ಚು ಹೆಚ್ಚು ಓದಬೇಕೆನ್ನುವುದನ್ನು ಮಾತ್ರ ಮನ ದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ~ ಎಂದು ಅವರು ಸಲಹೆ ನೀಡಿದರು.<br /> <br /> `ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಕೆಲಸದ ಮೂಲಕ ಇಲಾಖೆ ಹಾಗೂ ಅಧಿಕಾರಿಗಳನ್ನು ತೃಪ್ತಿಪಡಿಸುವುಕ್ಕಿಂತ ಸಮಾಜದಲ್ಲಿರುವ ಜನರ ಹಾಗೂ ಪಾಲಕರು ಮೆಚ್ಚುವಂತೆ ಕೆಲಸ ಮಾಡಬೇಕು. <br /> <br /> ಸರಕಾರ ಹಾಗೂ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವುದಕ್ಕಿಂತ ಸಮಾಜದಿಂದ, ಪಾಲಕರಿಂದ ಮತ್ತು ಮಕ್ಕಳಿಂದ ಮನ್ನಣೆ ಗಳಿಸುವುದು ತುಂಬಾ ಅಗತ್ಯ~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೆರ ಹೇಳಿದರು.<br /> <br /> `ಶಿಕ್ಷಕರಿಗೆ ನೀಡುವ ವಿವಿಧ ಬಗೆಯ ತರಬೇತಿ ಹಾಗೂ ಅನ್ಯ ಕಾರ್ಯ ಗಳಿಂದಾಗಿ ಶಾಲೆಯ ಮಕ್ಕಳ ಅಭ್ಯಾಸಕ್ಕೆ ತುಂಬಾ ತೊಂದರೆಯಾಗು ತ್ತದೆ. <br /> <br /> ಬರಲಿರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ತಿಳಿದು ಬಂದಿದ್ದು, ಶಿಕ್ಷಕರಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡು ವುದಕ್ಕಿಂತ ರಜಾ ಅವಧಿಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ಮಕ್ಕಳಿಗೆ ಉಂಟಾಗುವ ತೊಂದರೆ ಯನ್ನು ನಿವಾರಿಸಬೇಕು~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಸದಸ್ಯ ಶಿವಪ್ಪ ಕೋರಿಶಟ್ಟರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕಾಶೀನಾಥ ಬಿಳಿಮಗ್ಗದ ಮಾತನಾಡಿದರು.<br /> <br /> ಶಾಲಾ ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ, ಶೇಖರಗೌಡ ಪಾಟೀಲ, ಈರಯ್ಯ ಹಿರೇಮಠ, ಕೊಟ್ರೇಶ ಅಂಗಡಿ ವೇದಿಕೆಯ ಮೇಲೆ ಹಾಜ ರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಎಂ.ಬಿ.ಮೇಟಿ ಸ್ವಾಗತಿಸಿ ದರು. ಭಾಗ್ಯಲಕ್ಷ್ಮಿ ಇನಾಮತಿ ಹಾಗೂ ಎಸ್.ಉಮಾದೇವಿ ಕಾರ್ಯ ಕ್ರಮ ನಿರೂಪಿಸಿದರು. ಉಮೇಶ ಬೂದಿಹಾಳ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>