<p><strong>ಮೈಸೂರು: </strong>‘ಸೀತೆಯ ಬೆತ್ತಲೆಯ ಚಿತ್ರ ಬಿಡಿಸಿದ್ದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾದ ಪರಿಣಾಮ ಬೇಸತ್ತ ಚಿತ್ರಕಲಾವಿದ ಎಂ.ಎಫ್. ಹುಸೇನ್ ಈ ದೇಶ ಬಿಟ್ಟು ಹೋದರು. ಅವರು ಹಿಂದೂ ಆಗಿದ್ದರೆ ಕೇಂದ್ರ ಸರ್ಕಾರ ಸುಮ್ಮನಿರುತ್ತಿತ್ತೆ? ಎಂದು ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ಪ್ರಶ್ನಿಸಿದರು.<br /> <br /> ನಗರದ ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಅಂಗವಾಗಿ ಚಲನಚಿತ್ರೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಅಂತರರಾಷ್ಟ್ರೀಯ ಚಿತ್ರಕಲಾವಿದರಾಗಿದ್ದ ಎಂ.ಎಫ್. ಹುಸೇನ್ ಅವರಿಗೆ ಈ ದೇಶದಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ. 95ನೇ ವಯಸ್ಸಿನಲ್ಲಿ ಅವರು ಲಂಡನ್ನಲ್ಲಿ ಮೃತಪಟ್ಟರು. ಜೀವಿತಾವಧಿಯಲ್ಲಿ ಮತ್ತೆ ಅವರು ಈ ದೇಶಕ್ಕೆ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ನಮ್ಮ ದೇವಾಲಯಗಳಲ್ಲಿನ ವಿಗ್ರಹಗಳು ಬೆತ್ತಲೆಯಾಗಿಯೇ ಇರುತ್ತವೆ. ಅವುಗಳಿಗೆ ವಸ್ತ್ರ, ಆಭರಣವನ್ನು ತೊಡಿಸಲಾಗುತ್ತದೆ. ಬೇಲೂರು– ಹಳೇಬೀಡಿನ ಶಿಲಾಬಾಲಕಿಯರ ಮೇಲೆ ಬಟ್ಟೆಯಿದೆಯೆ? ಹೀಗೆ, ಈ ದೇಶದಲ್ಲಿ ಅಲ್ಲದೆ ಗ್ರೀಕ್, ಯುರೋಪ್ ಮೊದಲಾದ ದೇಶಗಳಲ್ಲಿನ ಅನೇಕ ಪೇಂಟಿಂಗ್ ಹಾಗೂ ವಿಗ್ರಹಗಳು ಬೆತ್ತಲೆಯಾಗಿವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಸೀತೆಯ ಬೆತ್ತಲೆಯ ಚಿತ್ರ ಬಿಡಿಸಿದ್ದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾದ ಪರಿಣಾಮ ಬೇಸತ್ತ ಚಿತ್ರಕಲಾವಿದ ಎಂ.ಎಫ್. ಹುಸೇನ್ ಈ ದೇಶ ಬಿಟ್ಟು ಹೋದರು. ಅವರು ಹಿಂದೂ ಆಗಿದ್ದರೆ ಕೇಂದ್ರ ಸರ್ಕಾರ ಸುಮ್ಮನಿರುತ್ತಿತ್ತೆ? ಎಂದು ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ಪ್ರಶ್ನಿಸಿದರು.<br /> <br /> ನಗರದ ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಅಂಗವಾಗಿ ಚಲನಚಿತ್ರೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಅಂತರರಾಷ್ಟ್ರೀಯ ಚಿತ್ರಕಲಾವಿದರಾಗಿದ್ದ ಎಂ.ಎಫ್. ಹುಸೇನ್ ಅವರಿಗೆ ಈ ದೇಶದಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ. 95ನೇ ವಯಸ್ಸಿನಲ್ಲಿ ಅವರು ಲಂಡನ್ನಲ್ಲಿ ಮೃತಪಟ್ಟರು. ಜೀವಿತಾವಧಿಯಲ್ಲಿ ಮತ್ತೆ ಅವರು ಈ ದೇಶಕ್ಕೆ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ನಮ್ಮ ದೇವಾಲಯಗಳಲ್ಲಿನ ವಿಗ್ರಹಗಳು ಬೆತ್ತಲೆಯಾಗಿಯೇ ಇರುತ್ತವೆ. ಅವುಗಳಿಗೆ ವಸ್ತ್ರ, ಆಭರಣವನ್ನು ತೊಡಿಸಲಾಗುತ್ತದೆ. ಬೇಲೂರು– ಹಳೇಬೀಡಿನ ಶಿಲಾಬಾಲಕಿಯರ ಮೇಲೆ ಬಟ್ಟೆಯಿದೆಯೆ? ಹೀಗೆ, ಈ ದೇಶದಲ್ಲಿ ಅಲ್ಲದೆ ಗ್ರೀಕ್, ಯುರೋಪ್ ಮೊದಲಾದ ದೇಶಗಳಲ್ಲಿನ ಅನೇಕ ಪೇಂಟಿಂಗ್ ಹಾಗೂ ವಿಗ್ರಹಗಳು ಬೆತ್ತಲೆಯಾಗಿವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>