<p><strong>ಯಲಹಂಕ: </strong>ಹೋಳಿಯಾಡಿದ ನಂತರ ಕೆರೆಯಲ್ಲಿ ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಣಸಮಾರನಹಳ್ಳಿಯಲ್ಲಿ ಸೋಮವಾರ ನಡೆದಿದೆ.<br /> <br /> ಭಾರತಿನಗರ ನಿವಾಸಿ ಗಡಿಭದ್ರತಾ ಪಡೆಯ ಕಾನ್ಸ್ಟೆಬಲ್ ಅಬೂಬಕರ್ ಅವರ ಮಗ ಮಹಮ್ಮದ್ ಸುಬೇರ್ (21) ಮೃತಪಟ್ಟವರು. ಮೂಲತಃ ಕೇರಳದವರಾದ ಅಬೂಬಕರ್, ನಾಲ್ಕು ವರ್ಷಗಳಿಂದ ಭಾರತಿನಗರದಲ್ಲಿ ವಾಸವಿದ್ದಾರೆ.<br /> <br /> ನಾಗವಾರದ ಎಚ್ಕೆಬಿಕೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸುಬೇರ್, ಸ್ನೇಹಿತರಾದ ಶಮುಸಿಂಗ್, ವಿಜಯ್ಸಿಂಗ್, ಮಿಲ್ಟು, ಅವಿನಾಶ್, ದಿಲೀಪ್ ಹಾಗೂ ಪುಷ್ಪೇಂದರ್ ಅವರೊಂದಿಗೆ ಮಧ್ಯಾಹ್ನದವರೆಗೆ ಹೋಳಿಯಾಡಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಸ್ನೇಹಿತರೆಲ್ಲರು ಕೆರೆಗೆ ಈಜಲು ತೆರಳಿದ್ದಾರೆ.<br /> <br /> ಕಡಿಮೆ ಆಳವಿರುವ ಕಡೆ ಎಲ್ಲರೂ ಈಜುತ್ತ, ಮೈಗೆ ಅಂಟಿದ್ದ ಹೋಳಿಬಣ್ಣವನ್ನು ಸ್ವಚ್ಚಗೊಳಿಸಿಕೊಂಡಿದ್ದಾರೆ. ಈ ವೇಳೆ ಸುಬೇರ್, ಈಜುತ್ತ ಕೆರೆಯ ಮದ್ಯಭಾಗಕ್ಕೆ ತೆರಳಿದ್ದಾರೆ. ಹೆಚ್ಚಿನ ಆಳವಿದ್ದ ಭಾಗದಲ್ಲಿ ಅವರು ಮುಳುಗಿದ್ದಾರೆ. ಸುಬೇರ್ ಕಾಣದಿರುವುದರಿಂದ ಗಾಬರಿಗೊಂಡ ಸ್ನೇಹಿತರು ಠಾಣೆಗೆ ವಿಷಯ ತಿಳಿಸಿದರು.<br /> <br /> ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಶವವನ್ನು ನೀರಿನಿಂದ ಹೊರತೆಗೆದರು ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಹೋಳಿಯಾಡಿದ ನಂತರ ಕೆರೆಯಲ್ಲಿ ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಣಸಮಾರನಹಳ್ಳಿಯಲ್ಲಿ ಸೋಮವಾರ ನಡೆದಿದೆ.<br /> <br /> ಭಾರತಿನಗರ ನಿವಾಸಿ ಗಡಿಭದ್ರತಾ ಪಡೆಯ ಕಾನ್ಸ್ಟೆಬಲ್ ಅಬೂಬಕರ್ ಅವರ ಮಗ ಮಹಮ್ಮದ್ ಸುಬೇರ್ (21) ಮೃತಪಟ್ಟವರು. ಮೂಲತಃ ಕೇರಳದವರಾದ ಅಬೂಬಕರ್, ನಾಲ್ಕು ವರ್ಷಗಳಿಂದ ಭಾರತಿನಗರದಲ್ಲಿ ವಾಸವಿದ್ದಾರೆ.<br /> <br /> ನಾಗವಾರದ ಎಚ್ಕೆಬಿಕೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸುಬೇರ್, ಸ್ನೇಹಿತರಾದ ಶಮುಸಿಂಗ್, ವಿಜಯ್ಸಿಂಗ್, ಮಿಲ್ಟು, ಅವಿನಾಶ್, ದಿಲೀಪ್ ಹಾಗೂ ಪುಷ್ಪೇಂದರ್ ಅವರೊಂದಿಗೆ ಮಧ್ಯಾಹ್ನದವರೆಗೆ ಹೋಳಿಯಾಡಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಸ್ನೇಹಿತರೆಲ್ಲರು ಕೆರೆಗೆ ಈಜಲು ತೆರಳಿದ್ದಾರೆ.<br /> <br /> ಕಡಿಮೆ ಆಳವಿರುವ ಕಡೆ ಎಲ್ಲರೂ ಈಜುತ್ತ, ಮೈಗೆ ಅಂಟಿದ್ದ ಹೋಳಿಬಣ್ಣವನ್ನು ಸ್ವಚ್ಚಗೊಳಿಸಿಕೊಂಡಿದ್ದಾರೆ. ಈ ವೇಳೆ ಸುಬೇರ್, ಈಜುತ್ತ ಕೆರೆಯ ಮದ್ಯಭಾಗಕ್ಕೆ ತೆರಳಿದ್ದಾರೆ. ಹೆಚ್ಚಿನ ಆಳವಿದ್ದ ಭಾಗದಲ್ಲಿ ಅವರು ಮುಳುಗಿದ್ದಾರೆ. ಸುಬೇರ್ ಕಾಣದಿರುವುದರಿಂದ ಗಾಬರಿಗೊಂಡ ಸ್ನೇಹಿತರು ಠಾಣೆಗೆ ವಿಷಯ ತಿಳಿಸಿದರು.<br /> <br /> ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಶವವನ್ನು ನೀರಿನಿಂದ ಹೊರತೆಗೆದರು ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>