<p>ಆಲಮಟ್ಟಿ (ವಿಜಾಪುರ): ಚಲಿಸುತ್ತಿದ್ದ ರೈಲಿನಿಂದ ಕೃಷ್ಣಾ ನದಿಗೆ ಹಾರಿ ಸಾಫ್ಟ್ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.<br /> <br /> ಇವರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅಜಿತ್ಕುಮಾರ ರನ್ನಕುಮಾರ ಹಜಾರೆ (29) ಎಂದು ಗುರುತಿಸಲಾಗಿದೆ.<br /> <br /> ಇವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಇತ್ತೀಚೆಗಷ್ಟೇ ನೌಕರಿಗೆ ರಾಜೀನಾಮೆ ನೀಡಿ ಮತ್ತೊಂದು ನೌಕರಿಗೆ ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಮಿತ್ರನೊಬ್ಬನ ಜೊತೆ ಸೇರಿ ವಿಜಾಪುರ-ಯಶವಂತಪುರ ರೈಲಿನಲ್ಲಿ ಆಲಮಟ್ಟಿ ಕಡೆ ಬರುತ್ತಿದ್ದಾಗ, ಆಲಮಟ್ಟಿ ಹತ್ತಿರದ ಕೃಷ್ಣಾ ನದಿಗೆ (ಪಾರ್ವತಿ ಕಟ್ಟಾ ಸೇತುವೆ) ಹಾರಿದರು ಎಂದು ತಿಳಿಸಲಾಗಿದೆ.<br /> <br /> ಜೀವನದಲ್ಲಿ ಜಿಗುಪ್ಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇವರ ಚೀಲದಿಂದ ದೊರೆತಿರುವ ಚೀಟಿಯಿಂದ ಗೊತ್ತಾಗಿದೆ.<br /> <br /> ವಿಜಾಪುರ ಬಿಎಲ್ಡಿಇ ಎಂಜಿನಿಯರಿಂಗ್ ಕಾಲೇಜಿನಿಂದ ಬಿಇ (ಎಲೆಕ್ಟ್ರಾನಿಕ್ಸ್) ಪದವಿ ಪಡೆದಿದ್ದ ಇವರಿಗೆ ತಂದೆ, ತಾಯಿ, ಒಬ್ಬ ಸಹೋದರ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲಮಟ್ಟಿ (ವಿಜಾಪುರ): ಚಲಿಸುತ್ತಿದ್ದ ರೈಲಿನಿಂದ ಕೃಷ್ಣಾ ನದಿಗೆ ಹಾರಿ ಸಾಫ್ಟ್ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.<br /> <br /> ಇವರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅಜಿತ್ಕುಮಾರ ರನ್ನಕುಮಾರ ಹಜಾರೆ (29) ಎಂದು ಗುರುತಿಸಲಾಗಿದೆ.<br /> <br /> ಇವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಇತ್ತೀಚೆಗಷ್ಟೇ ನೌಕರಿಗೆ ರಾಜೀನಾಮೆ ನೀಡಿ ಮತ್ತೊಂದು ನೌಕರಿಗೆ ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಮಿತ್ರನೊಬ್ಬನ ಜೊತೆ ಸೇರಿ ವಿಜಾಪುರ-ಯಶವಂತಪುರ ರೈಲಿನಲ್ಲಿ ಆಲಮಟ್ಟಿ ಕಡೆ ಬರುತ್ತಿದ್ದಾಗ, ಆಲಮಟ್ಟಿ ಹತ್ತಿರದ ಕೃಷ್ಣಾ ನದಿಗೆ (ಪಾರ್ವತಿ ಕಟ್ಟಾ ಸೇತುವೆ) ಹಾರಿದರು ಎಂದು ತಿಳಿಸಲಾಗಿದೆ.<br /> <br /> ಜೀವನದಲ್ಲಿ ಜಿಗುಪ್ಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇವರ ಚೀಲದಿಂದ ದೊರೆತಿರುವ ಚೀಟಿಯಿಂದ ಗೊತ್ತಾಗಿದೆ.<br /> <br /> ವಿಜಾಪುರ ಬಿಎಲ್ಡಿಇ ಎಂಜಿನಿಯರಿಂಗ್ ಕಾಲೇಜಿನಿಂದ ಬಿಇ (ಎಲೆಕ್ಟ್ರಾನಿಕ್ಸ್) ಪದವಿ ಪಡೆದಿದ್ದ ಇವರಿಗೆ ತಂದೆ, ತಾಯಿ, ಒಬ್ಬ ಸಹೋದರ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>