<p><strong>ಭಟ್ಕಳ:</strong> ಮೀನುಗಾರಿಕೆಗೆ ತೆರಳಿದ್ದ ಪಟ್ಟಿ ದೋಣಿಯೊಂದು ಅಲೆಗಳ ರಭಸಕ್ಕೆ ಸಿಲುಕಿ ಮಗುಚಿದ ಪರಿಣಾಮ ಅದರಲ್ಲಿದ್ದ ಎಂಟು ಮೀನುಗಾರರ ಪೈಕಿ ಒಬ್ಬ ನಾಪತ್ತೆಯಾಗಿರುವ ಘಟನೆ ಇಲ್ಲಿನ ಮಾವಿನಕುರ್ವೆ ಬಂದರು ಸಮೀಪ ಬುಧವಾರ ರಾತ್ರಿ ನಡೆದಿದೆ.<br /> <br /> ಉಳಿದ 7 ಮೀನುಗಾರರು ಸುಮಾರು 8 ತಾಸು ಈಜಿ, ಬೇರೊಂದು ದೋಣಿಯ ಮೂಲಕ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> ಮಾವಿನಕುರ್ವೆ ಬಂದರಿನ ಮಂಜುನಾಥ ಬಾಬು ಖಾರ್ವಿ (35) ಅವರಿಗಾಗಿ ಹುಡುಕಾಟ ನಡೆದಿದೆ. ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ.<br /> <br /> ಮಾವಿನಕುರ್ವೆಯ ಪಾಂಡುರಂಗ ಖಾರ್ವಿ, ಕೃಷ್ಣ ಖಾರ್ವಿ, ನಾಗೇಶ ಖಾರ್ವಿ, ರಾಮದಾಸ ಖಾರ್ವಿ, ಮಾದೇವ ಖಾರ್ವಿ, ಸುಭಾಸ ಖಾರ್ವಿ, ಅಜಿತ್ ಖಾರ್ವಿ ಈಜಿ ದಡ ಸೇರಿದವರು.<br /> <br /> ಸತತ ಈಜಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ಇವರೆಲ್ಲರನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.<br /> <br /> ಇವರೆಲ್ಲರೂ ಬುಧವಾರ ಮಧ್ಯಾಹ್ನ ಶ್ರೀ ಗುರು ಅನುಗ್ರಹ ಎಂಬ ಪಟ್ಟಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಂಜೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ದೋಣಿ ಮಗುಚಿತು ಎನ್ನಲಾಗಿದೆ.<br /> <br /> ಎಲ್ಲರೂ ನೀರಿನಲ್ಲಿ ಮುಳುಗಿದಾಗ ಮಂಜುನಾಥ ಖಾರ್ವಿ ಮಾತ್ರ ನಾಪತ್ತೆಯಾದರು. ಉಳಿದ 7 ಮಂದಿ ತಡರಾತ್ರಿವರೆಗೂ ಈಜಿ, ಬಳಿಕ ಮತ್ಸ್ಯರಾಜ ಎಂಬ ದೋಣಿಯ ಸಹಾಯದಿಂದ ದಡಕ್ಕೆ ಬಂದು ತಲುಪಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೀನುಗಾರರನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ಮೀನುಗಾರಿಕೆಗೆ ತೆರಳಿದ್ದ ಪಟ್ಟಿ ದೋಣಿಯೊಂದು ಅಲೆಗಳ ರಭಸಕ್ಕೆ ಸಿಲುಕಿ ಮಗುಚಿದ ಪರಿಣಾಮ ಅದರಲ್ಲಿದ್ದ ಎಂಟು ಮೀನುಗಾರರ ಪೈಕಿ ಒಬ್ಬ ನಾಪತ್ತೆಯಾಗಿರುವ ಘಟನೆ ಇಲ್ಲಿನ ಮಾವಿನಕುರ್ವೆ ಬಂದರು ಸಮೀಪ ಬುಧವಾರ ರಾತ್ರಿ ನಡೆದಿದೆ.<br /> <br /> ಉಳಿದ 7 ಮೀನುಗಾರರು ಸುಮಾರು 8 ತಾಸು ಈಜಿ, ಬೇರೊಂದು ದೋಣಿಯ ಮೂಲಕ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> ಮಾವಿನಕುರ್ವೆ ಬಂದರಿನ ಮಂಜುನಾಥ ಬಾಬು ಖಾರ್ವಿ (35) ಅವರಿಗಾಗಿ ಹುಡುಕಾಟ ನಡೆದಿದೆ. ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ.<br /> <br /> ಮಾವಿನಕುರ್ವೆಯ ಪಾಂಡುರಂಗ ಖಾರ್ವಿ, ಕೃಷ್ಣ ಖಾರ್ವಿ, ನಾಗೇಶ ಖಾರ್ವಿ, ರಾಮದಾಸ ಖಾರ್ವಿ, ಮಾದೇವ ಖಾರ್ವಿ, ಸುಭಾಸ ಖಾರ್ವಿ, ಅಜಿತ್ ಖಾರ್ವಿ ಈಜಿ ದಡ ಸೇರಿದವರು.<br /> <br /> ಸತತ ಈಜಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ಇವರೆಲ್ಲರನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.<br /> <br /> ಇವರೆಲ್ಲರೂ ಬುಧವಾರ ಮಧ್ಯಾಹ್ನ ಶ್ರೀ ಗುರು ಅನುಗ್ರಹ ಎಂಬ ಪಟ್ಟಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಂಜೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ದೋಣಿ ಮಗುಚಿತು ಎನ್ನಲಾಗಿದೆ.<br /> <br /> ಎಲ್ಲರೂ ನೀರಿನಲ್ಲಿ ಮುಳುಗಿದಾಗ ಮಂಜುನಾಥ ಖಾರ್ವಿ ಮಾತ್ರ ನಾಪತ್ತೆಯಾದರು. ಉಳಿದ 7 ಮಂದಿ ತಡರಾತ್ರಿವರೆಗೂ ಈಜಿ, ಬಳಿಕ ಮತ್ಸ್ಯರಾಜ ಎಂಬ ದೋಣಿಯ ಸಹಾಯದಿಂದ ದಡಕ್ಕೆ ಬಂದು ತಲುಪಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೀನುಗಾರರನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>