<p><strong>ಬೆಂಗಳೂರು: </strong>ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎಐಇಇಇ) ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.<br /> <br /> ರಾಜಾಜಿನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿ ಸಾಗರ್ ಹೊನ್ನುಂಗಾರ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರದು ರಾಷ್ಟ್ರಮಟ್ಟದಲ್ಲಿ 21ನೇ ರ್ಯಾಂಕ್. ಇಂದಿರಾನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಅದಿತಿ ರಘುನಾಥನ್ ರಾಜ್ಯಕ್ಕೆ ದ್ವಿತೀಯ ಹಾಗೂ ರಾಷ್ಟ್ರಮಟ್ಟದಲ್ಲಿ 61ನೇ ಸ್ಥಾನ ಗಳಿಸಿದ್ದಾರೆ. <br /> <br /> ನಗರದ `ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ರಾಷ್ಟ್ರಕ್ಕೆ 130ನೇ ರ್ಯಾಂಕ್ ಗಳಿಸಿದ್ದಾರೆ.<br /> <br /> ಈ ಬಗ್ಗೆ `ಪ್ರಜಾವಾಣಿ~ ಜತೆ ಸಂತಸ ಹಂಚಿಕೊಂಡ ಸಾಗರ್ `ರ್ಯಾಂಕ್ ಗಳಿಸುವ ಭರವಸೆ ನನಗೆ ಇತ್ತು. ಮೊದಲಿನಿಂದಲೂ ದಿನನಿತ್ಯ 4-5 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ~ ಎಂದರು.<br /> <br /> ರ್ಯಾಂಕ್ ನಿರೀಕ್ಷೆಯಲ್ಲಿದ್ದ ಅದಿತಿ, `ಪರೀಕ್ಷೆಯ ಭಯ ವಿದ್ಯಾರ್ಥಿಗಳಲ್ಲಿ ಸಾಮಾನ್ಯ. ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ~ ಎಂದರು.<br /> <br /> ಇವರಿಬ್ಬರಿಗೂ ಚೆನ್ನೈನಲ್ಲಿರುವ `ಐಐಟಿ- ಮದ್ರಾಸ್~ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಹಂಬಲವಿದೆ. ದೆಹಲಿಯಲ್ಲಿನ `ವಾಸ್ತುಶಿಲ್ಪ ಶಾಲೆ~ಯಲ್ಲಿ ಉನ್ನತ ಅಧ್ಯಯನ ನಡೆಸುವ ಹಂಬಲ ಪೃಥ್ವಿ ಅವರದ್ದು.<br /> ದೇಶದಾದ್ಯಂತ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎಐಇಇಇ) ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.<br /> <br /> ರಾಜಾಜಿನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿ ಸಾಗರ್ ಹೊನ್ನುಂಗಾರ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರದು ರಾಷ್ಟ್ರಮಟ್ಟದಲ್ಲಿ 21ನೇ ರ್ಯಾಂಕ್. ಇಂದಿರಾನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಅದಿತಿ ರಘುನಾಥನ್ ರಾಜ್ಯಕ್ಕೆ ದ್ವಿತೀಯ ಹಾಗೂ ರಾಷ್ಟ್ರಮಟ್ಟದಲ್ಲಿ 61ನೇ ಸ್ಥಾನ ಗಳಿಸಿದ್ದಾರೆ. <br /> <br /> ನಗರದ `ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ರಾಷ್ಟ್ರಕ್ಕೆ 130ನೇ ರ್ಯಾಂಕ್ ಗಳಿಸಿದ್ದಾರೆ.<br /> <br /> ಈ ಬಗ್ಗೆ `ಪ್ರಜಾವಾಣಿ~ ಜತೆ ಸಂತಸ ಹಂಚಿಕೊಂಡ ಸಾಗರ್ `ರ್ಯಾಂಕ್ ಗಳಿಸುವ ಭರವಸೆ ನನಗೆ ಇತ್ತು. ಮೊದಲಿನಿಂದಲೂ ದಿನನಿತ್ಯ 4-5 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ~ ಎಂದರು.<br /> <br /> ರ್ಯಾಂಕ್ ನಿರೀಕ್ಷೆಯಲ್ಲಿದ್ದ ಅದಿತಿ, `ಪರೀಕ್ಷೆಯ ಭಯ ವಿದ್ಯಾರ್ಥಿಗಳಲ್ಲಿ ಸಾಮಾನ್ಯ. ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ~ ಎಂದರು.<br /> <br /> ಇವರಿಬ್ಬರಿಗೂ ಚೆನ್ನೈನಲ್ಲಿರುವ `ಐಐಟಿ- ಮದ್ರಾಸ್~ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಹಂಬಲವಿದೆ. ದೆಹಲಿಯಲ್ಲಿನ `ವಾಸ್ತುಶಿಲ್ಪ ಶಾಲೆ~ಯಲ್ಲಿ ಉನ್ನತ ಅಧ್ಯಯನ ನಡೆಸುವ ಹಂಬಲ ಪೃಥ್ವಿ ಅವರದ್ದು.<br /> ದೇಶದಾದ್ಯಂತ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>