ಎರಡು ಹಂತದ ಆಡಳಿತಕ್ಕೆ ಒತ್ತಾಯ
ಬೆಂಗಳೂರು: `ಕೆಎಸ್ಆರ್ಟಿಸಿಯಲ್ಲಿರುವ ಮೂರು ಹಂತದ ಆಡಳಿತವನ್ನು ರದ್ದುಪಡಿಸಿ ಎರಡು ಹಂತದ ಆಡಳಿತವನ್ನು ಜಾರಿಗೆ ತರಬೇಕು~ ಎಂದು ರಾಜ್ಯ ರಸ್ತೆ ಸಾರಿಗೆ ಮಜ್ದೂರು ಸಂಘ ಒಕ್ಕೂಟ ಸಾರಿಗೆ ಸಚಿವರನ್ನು ಆಗ್ರಹಿಸಿದೆ.
ಸಾರಿಗೆ ಸಚಿವರನ್ನು ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿ, `ಈ ಹಿಂದೆ ಬಿಎಂಟಿಸಿ ಎರಡು ಹಂತದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿ ವರ್ಷ ರೂ 200 ಕೋಟಿ ಲಾಭ ಗಳಿಸುತ್ತಿತ್ತು. ಸಂಸ್ಥೆ ಇತ್ತೀಚಿನ ದಿನಗಳಲ್ಲಿ ನಷ್ಟ ಹೊಂದಲು ಮೂರು ಹಂತದ ಆಡಳಿತವನ್ನು ಜಾರಿಗೊಳಿಸಿರುವುದು ಕಾರಣ~ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.