<p>ಮೈಸೂರು: ಡೆವಿಸ್ ಕಪ್ ಆಟಗಾರ ಕರಣ್ ರಸ್ತೋಗಿ ಮಂಗಳವಾರ ಮಧ್ಯಾಹ್ನ ಮೈಸೂರು ಟೆನಿಸ್ ಕ್ಲಬ್ನಲ್ಲಿ ಜಯದ ನಗೆ ಬೀರಿದರೆ, ಅನಾರೋಗ್ಯದಿಂದ ಬಳಲಿದ `ಸ್ಥಳೀಯ ಹುಡುಗ~ ಸೂರಜ್ ಪ್ರಬೋಧ್ ಸೋಲಿನ ಕಹಿ ಉಂಡರು. <br /> <br /> ಇಲ್ಲಿ ನಡೆಯುತ್ತಿರುವ ಹತ್ತು ಸಾವಿರ ಡಾಲರ್ ಮೊತ್ತದ ಪ್ರಶಸ್ತಿಯ ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಐದನೇ ಶ್ರೇಯಾಂಕದ ಕರಣ್ ರಸ್ತೋಗಿ 6-4, 6-4ರಿಂದ ಥಾಯ್ಲೆಂಡಿನ ವಾರಿಟ್ ಸಾರ್ಬಟನಾರ್ಕ್ ಅವರ ಸವಾಲನ್ನು ಮೆಟ್ಟಿ ನಿಂತರು. <br /> <br /> ಆರಂಭದಲ್ಲಿ ಚುರುಕಾದ ಆಟ ಪ್ರದರ್ಶಿಸಿದ ಥಾಯ್ ಆಟಗಾರ ಸವಾಲುಗಳಿಗೆ ಫೋರ್ಹ್ಯಾಂಡ್ ಮತ್ತು ಆಕರ್ಷಕ ಬ್ಯಾಕ್ಹ್ಯಾಂಡ್ಗಳ ಉತ್ತರ ಕೊಟ್ಟ ಕರಣ್, ಎರಡು ನೇರ ಸೆಟ್ಗಳ ಜಯ ಸಾಧಿಸಿದರು. <br /> <br /> ಮೈಸೂರಿನ ಸೂರಜ್ ಪ್ರಬೋಧ್ ಜ್ವರ ಮತ್ತು ಸ್ನಾಯುಸೆಳೆತದಿಂದ ತಮ್ಮ ಎಂದಿನ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಉತ್ತಮವಾಗಿ ಆಡಿದ ಎದುರಾಳಿ ಬೆಂಗಳೂರಿನ ವಿನೋದಗೌಡ 6-2, 6-2ರಿಂದ ಸೂರಜ್ ಅವರನ್ನು ಸೋಲಿಸಿದರು. ಜ್ವರದಿಂದ ಬಳಲಿ ಸುಸ್ತಾಗಿದ್ದ ಸೂರಜ್ ಪಂದ್ಯದ ಮಧ್ಯದಲ್ಲಿ ತೊಡೆಯ ಸ್ನಾಯುಸೆಳೆತಕ್ಕೊಳಗಾಗಿ ಫಿಜಿಯೋ ತಂಡದಿಂದ ಚಿಕಿತ್ಸೆ ಪಡೆದು ಆಟ ಮುಂದುವರೆಸಿದರು. <br /> <br /> ಟಿಚೇನ್, ಸಾಕೇತ್ಗೆ ಭರ್ಜರಿ ಗೆಲುವು: ಟೂರ್ನಿಯ ಅಗ್ರಶ್ರೇಯಾಂಕದ ಆಟಗಾರ ತೈಪೆಯಿಯ ಟಿ ಚೇನ್ 6-2, 6-2ರಿಂದ ಭಾರತದ ಶಾಬಾಜ್ ಖಾನ್ ವಿರುದ್ಧ ಸುಲಭವಾಗಿ ಗೆದ್ದರು. <br /> <br /> ಕಳೆದ ವಾರ ಮಂಡ್ಯದಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಶ್ರೇಯಾಂಕರಹಿತ ಆಟಗಾರ ಸಾಕೇತ್ ಮೈನೆನಿ ಮೈಸೂರಿನಲ್ಲಿ ತಮ್ಮ ಗೆಲುವಿನ ಓಟ ಆರಂಭಿಸಿದರು. ಹೈದರಾಬಾದಿನ ಸಾಕೇತ್ 6-3, 6-4ರಿಂದ ಆರನೇ ಶ್ರೇಯಾಂಕದ ಭಾರತದ ಆಟಗಾರ ರಂಜೀತ್ ವಿರಾಲಿ ಮುರುಗೇಶನ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. <br /> <br /> ಮಂಡ್ಯದ ಟೂರ್ನಿಯ ಸೆಮಿಫೈನಲ್ನಲ್ಲಿಯೂ ಸಾಕೇತ್ ಅವರು ರಂಜೀತ್ ಅವರನ್ನು ಸೋಲಿಸಿದ್ದರು.<br /> ಇನ್ನೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತದ ಆಟಗಾರ ವೈಜಯಂತ್ ಮಲೀಕ್ 6-3, 6-2ರಿಂದ ಫ್ರಾನ್ಸ್ನ ಸಬಾಸ್ಟಿಯನ್ ಬೋಲ್ಟ್ಸ್ ಅವರನ್ನು ಪರಾಭವಗೊಳಿಸಿದರು. <br /> <br /> ಇನ್ನುಳಿದ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಜೀವನ್ ನೆಡುಚೆಳಿಯನ್ 6-0, 6-2ರಿಂದ ಭಾರತದ ವೆಂಕಟ್ ಅಯ್ಯರ್ ವಿರುದ್ಧ; ಆಸ್ಟ್ರೇಲಿಯಾದ ಜ್ಯಾಕ್ ಇಜೆಸ್ಟಿಯನ್ 6-3, 6-3ರಿಂದ ಭಾರತದ ಸಾಗರ್ ಮಂಜಣ್ಣ ವಿರುದ್ಧ; ಆಸ್ಟ್ರೇಲಿಯಾದ ಗಾವಿನ್ ವ್ಯಾನ್ ಪೆಪರ್ಜೀಲ್ 6-1, 6-2ರಿಂದ ಭಾರತದ ಖಾಜಾ ವಿನಾಯಕ ಶರ್ಮಾ ವಿರುದ್ಧ; ಥಾಯ್ಲೆಂಡ್ನ ಕಿಟ್ಟಿಪಾಂಗ್ ವಾಚಿರ್ಮನೋವಾಂಗ್ -3, 6-3ರಿಂದ ಭಾರತದ ಅಶ್ವಿನ್ ವಿಜಯರಾಘವನ್ ವಿರುದ್ಧ, ಅಜಯ್ ಸೆಲ್ವರಾಜ್ 6-4, 7-6 (3) ರಿಂದ ಸೌರಭ್ ಸಿಂಗ್ ವಿರುದ್ಧ, ಚೀನಾದ ಬೊವೆನ್ ಓಯುಂಗ್ 6-3, 7-6(3)ರಿಂದ ಆಸ್ಟ್ರೇಲಿಯಾದ ಸ್ಕಾಟ್ ಪುಡ್ಜಿಯನಸ್ ವಿರುದ್ಧ ಜಯಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಡೆವಿಸ್ ಕಪ್ ಆಟಗಾರ ಕರಣ್ ರಸ್ತೋಗಿ ಮಂಗಳವಾರ ಮಧ್ಯಾಹ್ನ ಮೈಸೂರು ಟೆನಿಸ್ ಕ್ಲಬ್ನಲ್ಲಿ ಜಯದ ನಗೆ ಬೀರಿದರೆ, ಅನಾರೋಗ್ಯದಿಂದ ಬಳಲಿದ `ಸ್ಥಳೀಯ ಹುಡುಗ~ ಸೂರಜ್ ಪ್ರಬೋಧ್ ಸೋಲಿನ ಕಹಿ ಉಂಡರು. <br /> <br /> ಇಲ್ಲಿ ನಡೆಯುತ್ತಿರುವ ಹತ್ತು ಸಾವಿರ ಡಾಲರ್ ಮೊತ್ತದ ಪ್ರಶಸ್ತಿಯ ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಐದನೇ ಶ್ರೇಯಾಂಕದ ಕರಣ್ ರಸ್ತೋಗಿ 6-4, 6-4ರಿಂದ ಥಾಯ್ಲೆಂಡಿನ ವಾರಿಟ್ ಸಾರ್ಬಟನಾರ್ಕ್ ಅವರ ಸವಾಲನ್ನು ಮೆಟ್ಟಿ ನಿಂತರು. <br /> <br /> ಆರಂಭದಲ್ಲಿ ಚುರುಕಾದ ಆಟ ಪ್ರದರ್ಶಿಸಿದ ಥಾಯ್ ಆಟಗಾರ ಸವಾಲುಗಳಿಗೆ ಫೋರ್ಹ್ಯಾಂಡ್ ಮತ್ತು ಆಕರ್ಷಕ ಬ್ಯಾಕ್ಹ್ಯಾಂಡ್ಗಳ ಉತ್ತರ ಕೊಟ್ಟ ಕರಣ್, ಎರಡು ನೇರ ಸೆಟ್ಗಳ ಜಯ ಸಾಧಿಸಿದರು. <br /> <br /> ಮೈಸೂರಿನ ಸೂರಜ್ ಪ್ರಬೋಧ್ ಜ್ವರ ಮತ್ತು ಸ್ನಾಯುಸೆಳೆತದಿಂದ ತಮ್ಮ ಎಂದಿನ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಉತ್ತಮವಾಗಿ ಆಡಿದ ಎದುರಾಳಿ ಬೆಂಗಳೂರಿನ ವಿನೋದಗೌಡ 6-2, 6-2ರಿಂದ ಸೂರಜ್ ಅವರನ್ನು ಸೋಲಿಸಿದರು. ಜ್ವರದಿಂದ ಬಳಲಿ ಸುಸ್ತಾಗಿದ್ದ ಸೂರಜ್ ಪಂದ್ಯದ ಮಧ್ಯದಲ್ಲಿ ತೊಡೆಯ ಸ್ನಾಯುಸೆಳೆತಕ್ಕೊಳಗಾಗಿ ಫಿಜಿಯೋ ತಂಡದಿಂದ ಚಿಕಿತ್ಸೆ ಪಡೆದು ಆಟ ಮುಂದುವರೆಸಿದರು. <br /> <br /> ಟಿಚೇನ್, ಸಾಕೇತ್ಗೆ ಭರ್ಜರಿ ಗೆಲುವು: ಟೂರ್ನಿಯ ಅಗ್ರಶ್ರೇಯಾಂಕದ ಆಟಗಾರ ತೈಪೆಯಿಯ ಟಿ ಚೇನ್ 6-2, 6-2ರಿಂದ ಭಾರತದ ಶಾಬಾಜ್ ಖಾನ್ ವಿರುದ್ಧ ಸುಲಭವಾಗಿ ಗೆದ್ದರು. <br /> <br /> ಕಳೆದ ವಾರ ಮಂಡ್ಯದಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಶ್ರೇಯಾಂಕರಹಿತ ಆಟಗಾರ ಸಾಕೇತ್ ಮೈನೆನಿ ಮೈಸೂರಿನಲ್ಲಿ ತಮ್ಮ ಗೆಲುವಿನ ಓಟ ಆರಂಭಿಸಿದರು. ಹೈದರಾಬಾದಿನ ಸಾಕೇತ್ 6-3, 6-4ರಿಂದ ಆರನೇ ಶ್ರೇಯಾಂಕದ ಭಾರತದ ಆಟಗಾರ ರಂಜೀತ್ ವಿರಾಲಿ ಮುರುಗೇಶನ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. <br /> <br /> ಮಂಡ್ಯದ ಟೂರ್ನಿಯ ಸೆಮಿಫೈನಲ್ನಲ್ಲಿಯೂ ಸಾಕೇತ್ ಅವರು ರಂಜೀತ್ ಅವರನ್ನು ಸೋಲಿಸಿದ್ದರು.<br /> ಇನ್ನೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತದ ಆಟಗಾರ ವೈಜಯಂತ್ ಮಲೀಕ್ 6-3, 6-2ರಿಂದ ಫ್ರಾನ್ಸ್ನ ಸಬಾಸ್ಟಿಯನ್ ಬೋಲ್ಟ್ಸ್ ಅವರನ್ನು ಪರಾಭವಗೊಳಿಸಿದರು. <br /> <br /> ಇನ್ನುಳಿದ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಜೀವನ್ ನೆಡುಚೆಳಿಯನ್ 6-0, 6-2ರಿಂದ ಭಾರತದ ವೆಂಕಟ್ ಅಯ್ಯರ್ ವಿರುದ್ಧ; ಆಸ್ಟ್ರೇಲಿಯಾದ ಜ್ಯಾಕ್ ಇಜೆಸ್ಟಿಯನ್ 6-3, 6-3ರಿಂದ ಭಾರತದ ಸಾಗರ್ ಮಂಜಣ್ಣ ವಿರುದ್ಧ; ಆಸ್ಟ್ರೇಲಿಯಾದ ಗಾವಿನ್ ವ್ಯಾನ್ ಪೆಪರ್ಜೀಲ್ 6-1, 6-2ರಿಂದ ಭಾರತದ ಖಾಜಾ ವಿನಾಯಕ ಶರ್ಮಾ ವಿರುದ್ಧ; ಥಾಯ್ಲೆಂಡ್ನ ಕಿಟ್ಟಿಪಾಂಗ್ ವಾಚಿರ್ಮನೋವಾಂಗ್ -3, 6-3ರಿಂದ ಭಾರತದ ಅಶ್ವಿನ್ ವಿಜಯರಾಘವನ್ ವಿರುದ್ಧ, ಅಜಯ್ ಸೆಲ್ವರಾಜ್ 6-4, 7-6 (3) ರಿಂದ ಸೌರಭ್ ಸಿಂಗ್ ವಿರುದ್ಧ, ಚೀನಾದ ಬೊವೆನ್ ಓಯುಂಗ್ 6-3, 7-6(3)ರಿಂದ ಆಸ್ಟ್ರೇಲಿಯಾದ ಸ್ಕಾಟ್ ಪುಡ್ಜಿಯನಸ್ ವಿರುದ್ಧ ಜಯಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>