<p><strong>ಬೆಂಗಳೂರು:</strong> ವಕ್ಫ್ ಇಲಾಖೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಗೋ. ಮಧುಸೂಧನ್ ಕೇಳಿದ ಪ್ರಶ್ನೆಗೆ ಸರ್ಕಾರ ಬರೋಬ್ಬರಿ 5 ಸಾವಿರ ಪುಟಗಳ ಉತ್ತರ ನೀಡಿದೆ!<br /> <br /> ಅಷ್ಟೊಂದು ಪುಟಗಳನ್ನು ಮುದ್ರಿಸಿ ಕೊಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಇಡೀ ಉತ್ತರವನ್ನು ಸಿ.ಡಿಯಲ್ಲಿ ಒದಗಿಸಿತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಧುಸೂಧನ್, `ಪ್ರಶ್ನೆ ಕೇಳಿದ ನನಗಾದರೂ ಒಂದು ಮುದ್ರಿತ ಪ್ರತಿಯನ್ನು ನೀಡಬೇಕು' ಎಂದು ಮನವಿ ಮಾಡಿದರು.<br /> <br /> `ರಾಜ್ಯದಲ್ಲಿ ಇರುವ ಮಸೀದಿ, ಖಬರಸ್ತಾನ, ದರ್ಗಾ ಮೊದಲಾದ ವಕ್ಫ್ ಆಸ್ತಿಗಳ ವಿವರ ನೀಡಬೇಕು ಮತ್ತು ಆದಾಯದ ಮಾಹಿತಿಯನ್ನು ಒದಗಿಸಬೇಕು' ಎಂದು ಮಧುಸೂಧನ್ ಪ್ರಶ್ನಿಸಿದ್ದರು.<br /> <br /> `ಸಾಧ್ಯವಾದರೆ ಅವರ ಬೇಡಿಕೆ ಈಡೇರಿಸಬೇಕು' ಎಂದು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸೂಚನೆ ನೀಡಿದರು. `5 ಸಾವಿರ ಪುಟಗಳ ಅಧ್ಯಯನದ ಬಳಿಕ ಉಪಪ್ರಶ್ನೆಗಳನ್ನು ಕೇಳುತ್ತೇನೆ' ಎಂದು ಮಧುಸೂಧನ್ ಹೇಳಿದಾಗ, ಸದನ ನಗೆಗಡಲಲ್ಲಿ ತೇಲಿತು.<br /> <br /> <strong>ತಯಾರಿ ಇಲ್ಲದೆ ಬಂದ ಖಮರುಲ್</strong><br /> ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ತಯಾರಿ ಮಾಡಿಕೊಳ್ಳದೆ ಬಂದ ಸಾರ್ವಜನಿಕ ಉದ್ಯಮ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರು ವಿರೋಧ ಪಕ್ಷದ ಸದಸ್ಯರಿಂದ ತೀವ್ರ ಟೀಕೆಗೆ ಒಳಗಾದ ಪ್ರಸಂಗ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆಯಿತು.<br /> <br /> ರಾಜ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಸಚಿವರು ಅಸ್ಪಷ್ಟ ಉತ್ತರ ನೀಡಿದಾಗ ಈ ಪ್ರಸಂಗ ನಡೆಯಿತು. `ರಾಜ್ಯದ 60 ಸಾರ್ವಜನಿಕ ಉದ್ಯಮಗಳ ಪೈಕಿ 26 ಲಾಭದಲ್ಲಿದ್ದರೆ, 18 ನಷ್ಟದಲ್ಲಿವೆ. ಮಿಕ್ಕ ಸಂಸ್ಥೆಗಳ ಮಾಹಿತಿ ಇಲ್ಲ' ಎಂದು ಸಚಿವರು ಉತ್ತರಿಸಿದರು.<br /> <br /> `ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಉದ್ಯಮಗಳ ಬಗ್ಗೆ ಸರ್ಕಾರದ ಬಳಿಯೇ ಉತ್ತರ ಇಲ್ಲದಿದ್ದರೆ ಯಾರನ್ನು ಕೇಳಬೇಕು' ಎಂದು ಶ್ರೀನಿವಾಸ್ ಪ್ರಶ್ನಿಸಿದರು. `ನೀವು ಕೇಳಿದ ಪ್ರಶ್ನೆಯಲ್ಲಿ ಈ ಮಾಹಿತಿ ಬಯಸಿಲ್ಲ. ಅದಕ್ಕೆ ನನ್ನ ಬಳಿ ಉತ್ತರ ಇಲ್ಲ' ಎಂದು ಸಚಿವರು ಹೇಳಿದರು.<br /> <br /> ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಎಂ.ಸಿ. ನಾಣಯ್ಯ ಮತ್ತಿತರರು, `ಉಪಪ್ರಶ್ನೆಗಳಿಗೆ ತಯಾರಿ ಮಾಡಿಕೊಳ್ಳದೆ ಸದನಕ್ಕೆ ಬಂದರೆ ಹೇಗೆ' ಎಂದು ಪ್ರಶ್ನಿಸಿದರು. `ಪ್ರಶ್ನೆಗೆ ಸರಿಯಾದ ಉತ್ತರವನ್ನು ಸರ್ಕಾರ ಒದಗಿಸಬೇಕು. ಪುನಃ ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು' ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕಟಿಸಿದರು.<br /> ಕೊರಟೆಗೆರೆಗೆ ಏನೂ ಕೊಟ್ಟಿಲ್ಲ<br /> <br /> `ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ನಯಾಪೈಸೆಯನ್ನೂ ಕೊಟ್ಟಿಲ್ಲ. ಇದರಿಂದ ನಮಗೆ ಬೇಸರವಾಗಿದೆ. ಏನೊ ಬಿರುಕು ಬಿಟ್ಟಂತಿದೆ' ಎನ್ನುವ ಡಿ.ವಿ. ಸದಾನಂದಗೌಡ ಅವರ ಹೇಳಿಕೆ ಪರಿಷತ್ನಲ್ಲಿ ಕೆಲಕಾಲ ಸ್ವಾರಸ್ಯದ ಚರ್ಚೆಗೆ ಗ್ರಾಸವಾಯಿತು.<br /> <br /> `ನೀವು ಏನೇ ಬಿರುಕು ಉಂಟುಮಾಡಲು ಯತ್ನಿಸಿದರೂ ನಮ್ಮದು ಕಾಂಕ್ರೀಟ್ ಕಟ್ಟಡ. ನಿಮ್ಮ ಮನೆಯಂತೆ ಅದು ಅಲ್ಲಾಡುವುದಿಲ್ಲ' ಎಂದು ಆಡಳಿತ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಸದಾನಂದಗೌಡ, `ಕಾಂಕ್ರೀಟ್ ಕಟ್ಟಡ ಬಿರುಕು ಬಿಟ್ಟರೆ ಒಡೆದು ಕಟ್ಟಬೇಕು. ಮಣ್ಣಿನ ಕಟ್ಟಡವಾದರೆ ಬಿರುಕು ಮುಚ್ಚಬಹುದು' ಎಂದು ಚುಚ್ಚಿದರು.<br /> <br /> `ನಮ್ಮ ಆಡಳಿತವಿದ್ದಾಗ ಒಂದೂವರೆ ವರ್ಷದ ಬಳಿಕ ಭಿನ್ನಾಭಿಪ್ರಾಯ ತಲೆದೂರಿತ್ತು. ನಿಮ್ಮ ಆಡಳಿತದಲ್ಲಿ ಮೂರೇ ತಿಂಗಳಿಗೆ ಭಿನ್ನಮತ ಶುರುವಾಗಿದೆ' ಎಂದೂ ಅವರು ಹೇಳಿದರು. `ಸರ್ಕಾರ ಬೀಳುವ ಕನಸು ಕಾಣುವುದು ಬೇಡ. ನಿಮಗೆ ನಿರಾಸೆಯಾಗಲಿದೆ' ಎಂದು ಪಾಟೀಲರು ಮರು ಉತ್ತರ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಕ್ಫ್ ಇಲಾಖೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಗೋ. ಮಧುಸೂಧನ್ ಕೇಳಿದ ಪ್ರಶ್ನೆಗೆ ಸರ್ಕಾರ ಬರೋಬ್ಬರಿ 5 ಸಾವಿರ ಪುಟಗಳ ಉತ್ತರ ನೀಡಿದೆ!<br /> <br /> ಅಷ್ಟೊಂದು ಪುಟಗಳನ್ನು ಮುದ್ರಿಸಿ ಕೊಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಇಡೀ ಉತ್ತರವನ್ನು ಸಿ.ಡಿಯಲ್ಲಿ ಒದಗಿಸಿತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಧುಸೂಧನ್, `ಪ್ರಶ್ನೆ ಕೇಳಿದ ನನಗಾದರೂ ಒಂದು ಮುದ್ರಿತ ಪ್ರತಿಯನ್ನು ನೀಡಬೇಕು' ಎಂದು ಮನವಿ ಮಾಡಿದರು.<br /> <br /> `ರಾಜ್ಯದಲ್ಲಿ ಇರುವ ಮಸೀದಿ, ಖಬರಸ್ತಾನ, ದರ್ಗಾ ಮೊದಲಾದ ವಕ್ಫ್ ಆಸ್ತಿಗಳ ವಿವರ ನೀಡಬೇಕು ಮತ್ತು ಆದಾಯದ ಮಾಹಿತಿಯನ್ನು ಒದಗಿಸಬೇಕು' ಎಂದು ಮಧುಸೂಧನ್ ಪ್ರಶ್ನಿಸಿದ್ದರು.<br /> <br /> `ಸಾಧ್ಯವಾದರೆ ಅವರ ಬೇಡಿಕೆ ಈಡೇರಿಸಬೇಕು' ಎಂದು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸೂಚನೆ ನೀಡಿದರು. `5 ಸಾವಿರ ಪುಟಗಳ ಅಧ್ಯಯನದ ಬಳಿಕ ಉಪಪ್ರಶ್ನೆಗಳನ್ನು ಕೇಳುತ್ತೇನೆ' ಎಂದು ಮಧುಸೂಧನ್ ಹೇಳಿದಾಗ, ಸದನ ನಗೆಗಡಲಲ್ಲಿ ತೇಲಿತು.<br /> <br /> <strong>ತಯಾರಿ ಇಲ್ಲದೆ ಬಂದ ಖಮರುಲ್</strong><br /> ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ತಯಾರಿ ಮಾಡಿಕೊಳ್ಳದೆ ಬಂದ ಸಾರ್ವಜನಿಕ ಉದ್ಯಮ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರು ವಿರೋಧ ಪಕ್ಷದ ಸದಸ್ಯರಿಂದ ತೀವ್ರ ಟೀಕೆಗೆ ಒಳಗಾದ ಪ್ರಸಂಗ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆಯಿತು.<br /> <br /> ರಾಜ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಸಚಿವರು ಅಸ್ಪಷ್ಟ ಉತ್ತರ ನೀಡಿದಾಗ ಈ ಪ್ರಸಂಗ ನಡೆಯಿತು. `ರಾಜ್ಯದ 60 ಸಾರ್ವಜನಿಕ ಉದ್ಯಮಗಳ ಪೈಕಿ 26 ಲಾಭದಲ್ಲಿದ್ದರೆ, 18 ನಷ್ಟದಲ್ಲಿವೆ. ಮಿಕ್ಕ ಸಂಸ್ಥೆಗಳ ಮಾಹಿತಿ ಇಲ್ಲ' ಎಂದು ಸಚಿವರು ಉತ್ತರಿಸಿದರು.<br /> <br /> `ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಉದ್ಯಮಗಳ ಬಗ್ಗೆ ಸರ್ಕಾರದ ಬಳಿಯೇ ಉತ್ತರ ಇಲ್ಲದಿದ್ದರೆ ಯಾರನ್ನು ಕೇಳಬೇಕು' ಎಂದು ಶ್ರೀನಿವಾಸ್ ಪ್ರಶ್ನಿಸಿದರು. `ನೀವು ಕೇಳಿದ ಪ್ರಶ್ನೆಯಲ್ಲಿ ಈ ಮಾಹಿತಿ ಬಯಸಿಲ್ಲ. ಅದಕ್ಕೆ ನನ್ನ ಬಳಿ ಉತ್ತರ ಇಲ್ಲ' ಎಂದು ಸಚಿವರು ಹೇಳಿದರು.<br /> <br /> ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಎಂ.ಸಿ. ನಾಣಯ್ಯ ಮತ್ತಿತರರು, `ಉಪಪ್ರಶ್ನೆಗಳಿಗೆ ತಯಾರಿ ಮಾಡಿಕೊಳ್ಳದೆ ಸದನಕ್ಕೆ ಬಂದರೆ ಹೇಗೆ' ಎಂದು ಪ್ರಶ್ನಿಸಿದರು. `ಪ್ರಶ್ನೆಗೆ ಸರಿಯಾದ ಉತ್ತರವನ್ನು ಸರ್ಕಾರ ಒದಗಿಸಬೇಕು. ಪುನಃ ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು' ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕಟಿಸಿದರು.<br /> ಕೊರಟೆಗೆರೆಗೆ ಏನೂ ಕೊಟ್ಟಿಲ್ಲ<br /> <br /> `ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ನಯಾಪೈಸೆಯನ್ನೂ ಕೊಟ್ಟಿಲ್ಲ. ಇದರಿಂದ ನಮಗೆ ಬೇಸರವಾಗಿದೆ. ಏನೊ ಬಿರುಕು ಬಿಟ್ಟಂತಿದೆ' ಎನ್ನುವ ಡಿ.ವಿ. ಸದಾನಂದಗೌಡ ಅವರ ಹೇಳಿಕೆ ಪರಿಷತ್ನಲ್ಲಿ ಕೆಲಕಾಲ ಸ್ವಾರಸ್ಯದ ಚರ್ಚೆಗೆ ಗ್ರಾಸವಾಯಿತು.<br /> <br /> `ನೀವು ಏನೇ ಬಿರುಕು ಉಂಟುಮಾಡಲು ಯತ್ನಿಸಿದರೂ ನಮ್ಮದು ಕಾಂಕ್ರೀಟ್ ಕಟ್ಟಡ. ನಿಮ್ಮ ಮನೆಯಂತೆ ಅದು ಅಲ್ಲಾಡುವುದಿಲ್ಲ' ಎಂದು ಆಡಳಿತ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಸದಾನಂದಗೌಡ, `ಕಾಂಕ್ರೀಟ್ ಕಟ್ಟಡ ಬಿರುಕು ಬಿಟ್ಟರೆ ಒಡೆದು ಕಟ್ಟಬೇಕು. ಮಣ್ಣಿನ ಕಟ್ಟಡವಾದರೆ ಬಿರುಕು ಮುಚ್ಚಬಹುದು' ಎಂದು ಚುಚ್ಚಿದರು.<br /> <br /> `ನಮ್ಮ ಆಡಳಿತವಿದ್ದಾಗ ಒಂದೂವರೆ ವರ್ಷದ ಬಳಿಕ ಭಿನ್ನಾಭಿಪ್ರಾಯ ತಲೆದೂರಿತ್ತು. ನಿಮ್ಮ ಆಡಳಿತದಲ್ಲಿ ಮೂರೇ ತಿಂಗಳಿಗೆ ಭಿನ್ನಮತ ಶುರುವಾಗಿದೆ' ಎಂದೂ ಅವರು ಹೇಳಿದರು. `ಸರ್ಕಾರ ಬೀಳುವ ಕನಸು ಕಾಣುವುದು ಬೇಡ. ನಿಮಗೆ ನಿರಾಸೆಯಾಗಲಿದೆ' ಎಂದು ಪಾಟೀಲರು ಮರು ಉತ್ತರ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>