<p><span style="font-size: 26px;"><strong>ಬೀದರ್:</strong> ಓದುವ ಹವ್ಯಾಸ, ಅಭಿರುಚಿಯು ಮನುಷ್ಯನನ್ನು ಜಗತ್ತಿನ ಜೊತೆಗೆ ಬೆಸೆಯಲಿದ್ದು, ವಿದ್ಯಾರ್ಥಿ ಸಮುದಾಯ ಇಂಥ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ, ನಟ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟರು.</span><br /> <br /> ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ 2013-14ನೇ ಶೈಕ್ಷಣಿಕ ವರ್ಷದ ಓದುಗರ ಕೂಟ (ರೀಡರ್ಸ್ ಕ್ಲಬ್) ಉದ್ಘಾಟಿಸಿ ಮಾತನಾಡಿದ ಅವರು, `ತಂತ್ರಜ್ಞಾನದ ಪ್ರಗತಿಯೊಂದಿಗೆಇಂದು ಎಲ್ಲದರ ಸ್ವರೂಪ ಬದಲಾಗುತ್ತಿದೆ. ಪುಸ್ತಕಗಳು ಇದಕ್ಕೆ ಹೊರತಾದುದಲ್ಲ' ಎಂದರು.<br /> <br /> `ಪ್ರಗತಿಪರ ರಾಷ್ಟ್ರಗಳಲ್ಲಿ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಲಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನದಿಂದಾಗಿ ಇಡೀ ಗ್ರಂಥಾಲಯದ ಜೊತೆಗೆ ಸಂಪರ್ಕ ಬೆಸೆಯುವುದು ಸಾಧ್ಯವಾಗಲಿದೆ. ಓದುವ ಅವಕಾಶಗಳು ಇದರೊಂದಿಗೆ ಇನ್ನಷ್ಟು ವಿಸ್ತಾರಗೊಂಡಿದ್ದು, ವಿದ್ಯಾರ್ಥಿ ಸಮುದಾಯ ಇದನ್ನು ಬಳಸಿಕೊಳ್ಳಬೇಕಾಗಿದೆ' ಎಂದರು.<br /> <br /> `ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡ ಸಾಹಿತ್ಯ ಓದುವುದು ಮುಖ್ಯ. ಕನ್ನಡ ಸಾಹಿತ್ಯ ತನ್ನದೇ ಆದ ಶ್ರೀಮಂತಿಕೆ, ಪರಂಪರೆಯನ್ನು ಹೊಂದಿದೆ. ಓದುವಿಕೆಯೊಂದಿಗೆ ಅದರ ಸಮಗ್ರ ಪರಿಚಯವೂ ಆಗಲಿದೆ. ಒಟ್ಟಾರೆ, ಓದುವ ಅಭಿರುಚಿಯನ್ನು ರೂಢಿಸಿಕೊಳ್ಳುವುದು ಉತ್ತಮ' ಎಂದರು.<br /> <br /> ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಪೂರ್ಣಿಮಾ ಅವರು ಮಾತನಾಡಿ, ಶಾಲೆಯ ಮಕ್ಕಳು ನಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿರುವ ಕಾರ್ನಾಡ್ ಅವರ ಚಿತ್ರ ನೋಡುತ್ತಿದ್ದರು. ಇಂದು ಅವರನ್ನೇನೋಡುವ ಭಾಗ್ಯ ದೊರೆತಿದೆ ಎಂದರು.<br /> <br /> ಕಾರ್ನಾಡರ ವ್ಯಕ್ತಿತ್ವ ಬಣ್ಣಿಸಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಗೌರವ ಹೆಚ್ಚಿಸಿದ ಅವರು ನಟ, ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಅವರ ಬದುಕು ಆಧರಿಸಿದ `ಆಡಾಡುತಾ ಆಯುಷ್ಯ' ಕೃತಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿದೆ ಎಂದರು. ಸಂಸ್ಥೆ ಆಡಳಿತ ವರ್ಗದ ಮಂಜುಳಾ ಮೂಲಗೆ, ಮೌನೇಶ್, ರವಿ ಮೂಲಗೆ, ಬೋಧಕ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬೀದರ್:</strong> ಓದುವ ಹವ್ಯಾಸ, ಅಭಿರುಚಿಯು ಮನುಷ್ಯನನ್ನು ಜಗತ್ತಿನ ಜೊತೆಗೆ ಬೆಸೆಯಲಿದ್ದು, ವಿದ್ಯಾರ್ಥಿ ಸಮುದಾಯ ಇಂಥ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ, ನಟ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟರು.</span><br /> <br /> ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ 2013-14ನೇ ಶೈಕ್ಷಣಿಕ ವರ್ಷದ ಓದುಗರ ಕೂಟ (ರೀಡರ್ಸ್ ಕ್ಲಬ್) ಉದ್ಘಾಟಿಸಿ ಮಾತನಾಡಿದ ಅವರು, `ತಂತ್ರಜ್ಞಾನದ ಪ್ರಗತಿಯೊಂದಿಗೆಇಂದು ಎಲ್ಲದರ ಸ್ವರೂಪ ಬದಲಾಗುತ್ತಿದೆ. ಪುಸ್ತಕಗಳು ಇದಕ್ಕೆ ಹೊರತಾದುದಲ್ಲ' ಎಂದರು.<br /> <br /> `ಪ್ರಗತಿಪರ ರಾಷ್ಟ್ರಗಳಲ್ಲಿ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಲಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನದಿಂದಾಗಿ ಇಡೀ ಗ್ರಂಥಾಲಯದ ಜೊತೆಗೆ ಸಂಪರ್ಕ ಬೆಸೆಯುವುದು ಸಾಧ್ಯವಾಗಲಿದೆ. ಓದುವ ಅವಕಾಶಗಳು ಇದರೊಂದಿಗೆ ಇನ್ನಷ್ಟು ವಿಸ್ತಾರಗೊಂಡಿದ್ದು, ವಿದ್ಯಾರ್ಥಿ ಸಮುದಾಯ ಇದನ್ನು ಬಳಸಿಕೊಳ್ಳಬೇಕಾಗಿದೆ' ಎಂದರು.<br /> <br /> `ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡ ಸಾಹಿತ್ಯ ಓದುವುದು ಮುಖ್ಯ. ಕನ್ನಡ ಸಾಹಿತ್ಯ ತನ್ನದೇ ಆದ ಶ್ರೀಮಂತಿಕೆ, ಪರಂಪರೆಯನ್ನು ಹೊಂದಿದೆ. ಓದುವಿಕೆಯೊಂದಿಗೆ ಅದರ ಸಮಗ್ರ ಪರಿಚಯವೂ ಆಗಲಿದೆ. ಒಟ್ಟಾರೆ, ಓದುವ ಅಭಿರುಚಿಯನ್ನು ರೂಢಿಸಿಕೊಳ್ಳುವುದು ಉತ್ತಮ' ಎಂದರು.<br /> <br /> ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಪೂರ್ಣಿಮಾ ಅವರು ಮಾತನಾಡಿ, ಶಾಲೆಯ ಮಕ್ಕಳು ನಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿರುವ ಕಾರ್ನಾಡ್ ಅವರ ಚಿತ್ರ ನೋಡುತ್ತಿದ್ದರು. ಇಂದು ಅವರನ್ನೇನೋಡುವ ಭಾಗ್ಯ ದೊರೆತಿದೆ ಎಂದರು.<br /> <br /> ಕಾರ್ನಾಡರ ವ್ಯಕ್ತಿತ್ವ ಬಣ್ಣಿಸಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಗೌರವ ಹೆಚ್ಚಿಸಿದ ಅವರು ನಟ, ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಅವರ ಬದುಕು ಆಧರಿಸಿದ `ಆಡಾಡುತಾ ಆಯುಷ್ಯ' ಕೃತಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿದೆ ಎಂದರು. ಸಂಸ್ಥೆ ಆಡಳಿತ ವರ್ಗದ ಮಂಜುಳಾ ಮೂಲಗೆ, ಮೌನೇಶ್, ರವಿ ಮೂಲಗೆ, ಬೋಧಕ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>