<p><strong>ರಾಮನಗರ:</strong> ‘ಈ ಕ್ಷೇತ್ರದ ಮತದಾರರು ಆರು ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊಲೆಗಡುಕನನ್ನು ಗೆಲ್ಲಿಸಿ, ನನ್ನ ಪತ್ನಿ ಅನಿತಾರ ಕತ್ತು ಕೊಯ್ದರು. ಹೀಗೆ ಸೋಲಿಸುವಂತಹ ಅನ್ಯಾಯ ನಾನೇನು ಮಾಡಿದ್ದೆ? ಆಗ ನನ್ನ ಕೈ ಯಾಕೆ ಬಿಟ್ಟಿರಿ’ ಎಂದು ಕೇಳುತ್ತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ಗಳಗಳನೆ ಕಣ್ಣೀರು ಸುರಿಸಿದರು.<br /> <br /> ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ವಿಚಾರವಾಗಿ ರಾಮನಗರದ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಶನಿವಾರ ಜೆಡಿಎಸ್ ಜಿಲ್ಲಾ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಘಟನೆ ನಡೆಯಿತು. <br /> <br /> ಕಾರ್ಯಕರ್ತರ ಆಕ್ರೋಶ ಅರಿತು ಶುಕ್ರವಾರದ ಸಭೆಗೆ ಗೈರು ಹಾಜರಾಗಿದ್ದ ಕುಮಾರಸ್ವಾಮಿ ಶನಿವಾರ ಸಭೆಗೆ ಹಾಜರಾಗಿ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರು ಸುರಿಸಿದರು.<br /> <br /> ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ಕ್ರಿಮಿನಾಶಕದ ಬಾಟಲು ತೋರಿಸಿ, ‘ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ನಿಲುವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ವಿಷ ಕುಡಿಯಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದರು.<br /> <br /> ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ ಅವರು, ಕಳೆದ ಲೋಕಸಭಾ ಉಪಚುನಾವಣೆ ಮತ್ತು ಚನ್ನಪಟ್ಟಣ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಿ ಗದ್ಗದಿತರಾದರು.<br /> <br /> ‘ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಕುತಂತ್ರದಿಂದ ಸೋಲನ್ನಪ್ಪಿತು. ಆದರೆ ನಾನು ಬಹು ನಂಬಿದ್ದ ರಾಮನಗರದ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಕೈ ಹಿಡಿಯಲಿಲ್ಲ. ಅನಿತಾ ಅವರಿಗೆ ರಾಮನಗರದಲ್ಲಿ ಕೇವಲ 3000 ಮತಗಳ ಮುನ್ನಡೆ ದೊರೆಯಿತು. ಇದನ್ನು ನೆನೆದು ಆರು ತಿಂಗಳಿಂದ ಸಾಕಷ್ಟು ಕೊರಗಿದ್ದೇನೆ. ಎಂದು ಅವರು ಅಸಮಾಧಾನ ಹೊರಹಾಕಿದರು.<br /> <br /> ‘ನಾನೇನಾದರೂ ತಪ್ಪು ಮಾಡಿರಬಹುದು ಅಥವಾ ಅನ್ಯಾಯ ಎಸಗಿರಬಹುದು ಎಂಬ ಭಾವನೆ ಅಲ್ಪಸಂಖ್ಯಾತರಲ್ಲಿ ಮೂಡಿರಬಹುದು. ಅದಕ್ಕಾಗಿ ಈ ಶಿಕ್ಷೆ ನೀಡಿದ್ದೀರಿ ಎಂದು ಕೊಂಡಿದ್ದೇನೆ. ಇದೀಗ ಜಾಫರ್ ಷರೀಫ್ ಜೆಡಿಎಸ್ ಸೇರಿದ್ದಾರೆ. ಈಗಲಾದರೂ ಅಲ್ಪಸಂಖ್ಯಾತರಿಗೆ ನಮ್ಮ ಮೇಲೆ ನಂಬಿಕೆ ಬರಲಿ’ ಎಂದು ಅವರು ಕಣ್ಣೀರು ಸುರಿಸಿದರು.<br /> <br /> <strong>ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ</strong><br /> ‘ಪಕ್ಷದ ಹಿತದೃಷ್ಟಿಯಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ರಾಮನಗರದ ಕಾರ್ಯಕರ್ತರು ಹೇಳಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಸೂಕ್ತ ಸಮಯದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇನೆ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ‘ಈ ಕ್ಷೇತ್ರದ ಮತದಾರರು ಆರು ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊಲೆಗಡುಕನನ್ನು ಗೆಲ್ಲಿಸಿ, ನನ್ನ ಪತ್ನಿ ಅನಿತಾರ ಕತ್ತು ಕೊಯ್ದರು. ಹೀಗೆ ಸೋಲಿಸುವಂತಹ ಅನ್ಯಾಯ ನಾನೇನು ಮಾಡಿದ್ದೆ? ಆಗ ನನ್ನ ಕೈ ಯಾಕೆ ಬಿಟ್ಟಿರಿ’ ಎಂದು ಕೇಳುತ್ತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ಗಳಗಳನೆ ಕಣ್ಣೀರು ಸುರಿಸಿದರು.<br /> <br /> ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ವಿಚಾರವಾಗಿ ರಾಮನಗರದ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಶನಿವಾರ ಜೆಡಿಎಸ್ ಜಿಲ್ಲಾ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಘಟನೆ ನಡೆಯಿತು. <br /> <br /> ಕಾರ್ಯಕರ್ತರ ಆಕ್ರೋಶ ಅರಿತು ಶುಕ್ರವಾರದ ಸಭೆಗೆ ಗೈರು ಹಾಜರಾಗಿದ್ದ ಕುಮಾರಸ್ವಾಮಿ ಶನಿವಾರ ಸಭೆಗೆ ಹಾಜರಾಗಿ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರು ಸುರಿಸಿದರು.<br /> <br /> ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ಕ್ರಿಮಿನಾಶಕದ ಬಾಟಲು ತೋರಿಸಿ, ‘ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ನಿಲುವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ವಿಷ ಕುಡಿಯಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದರು.<br /> <br /> ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ ಅವರು, ಕಳೆದ ಲೋಕಸಭಾ ಉಪಚುನಾವಣೆ ಮತ್ತು ಚನ್ನಪಟ್ಟಣ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಿ ಗದ್ಗದಿತರಾದರು.<br /> <br /> ‘ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಕುತಂತ್ರದಿಂದ ಸೋಲನ್ನಪ್ಪಿತು. ಆದರೆ ನಾನು ಬಹು ನಂಬಿದ್ದ ರಾಮನಗರದ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಕೈ ಹಿಡಿಯಲಿಲ್ಲ. ಅನಿತಾ ಅವರಿಗೆ ರಾಮನಗರದಲ್ಲಿ ಕೇವಲ 3000 ಮತಗಳ ಮುನ್ನಡೆ ದೊರೆಯಿತು. ಇದನ್ನು ನೆನೆದು ಆರು ತಿಂಗಳಿಂದ ಸಾಕಷ್ಟು ಕೊರಗಿದ್ದೇನೆ. ಎಂದು ಅವರು ಅಸಮಾಧಾನ ಹೊರಹಾಕಿದರು.<br /> <br /> ‘ನಾನೇನಾದರೂ ತಪ್ಪು ಮಾಡಿರಬಹುದು ಅಥವಾ ಅನ್ಯಾಯ ಎಸಗಿರಬಹುದು ಎಂಬ ಭಾವನೆ ಅಲ್ಪಸಂಖ್ಯಾತರಲ್ಲಿ ಮೂಡಿರಬಹುದು. ಅದಕ್ಕಾಗಿ ಈ ಶಿಕ್ಷೆ ನೀಡಿದ್ದೀರಿ ಎಂದು ಕೊಂಡಿದ್ದೇನೆ. ಇದೀಗ ಜಾಫರ್ ಷರೀಫ್ ಜೆಡಿಎಸ್ ಸೇರಿದ್ದಾರೆ. ಈಗಲಾದರೂ ಅಲ್ಪಸಂಖ್ಯಾತರಿಗೆ ನಮ್ಮ ಮೇಲೆ ನಂಬಿಕೆ ಬರಲಿ’ ಎಂದು ಅವರು ಕಣ್ಣೀರು ಸುರಿಸಿದರು.<br /> <br /> <strong>ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ</strong><br /> ‘ಪಕ್ಷದ ಹಿತದೃಷ್ಟಿಯಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ರಾಮನಗರದ ಕಾರ್ಯಕರ್ತರು ಹೇಳಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಸೂಕ್ತ ಸಮಯದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇನೆ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>