<p><strong>ಹೂವಿನಹಡಗಲಿ:</strong> ಗದಗ- ಮುಂಡರಗಿ -ಹಡಗಲಿ-ಹರಿಹರ ರೈಲು ಮಾರ್ಗ ಕನಸಾಗಿ ಉಳಿದಿದೆ ಎಂದು ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಮುಖಂಡ ರಾದ ಬಸವರಾಜ ನವಲಗುಂದ ಆತಂಕ ವ್ಯಕ್ತಪಡಿಸಿದರು.<br /> ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಈ ಬಜೆಟ್ನಲ್ಲಿಯೂ ನಮ್ಮ ರೈಲ್ವೆ ಮಾರ್ಗವನ್ನು ಕೈಬಿಡಲಾಗಿದೆ ಸರ್ಕಾರ ಗಳು ಮೂಲಸೌಕರ್ಯ ಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.<br /> <br /> ಇದೇ ತಿಂಗಳು 20ರಂದು ನೂತನ ರೈಲ್ವೆ ಮಾರ್ಗಕ್ಕೆ ಮಂಜೂರಾತಿಗಾಗಿ ಗದಗ ನಗರದ ಗಾಂಧಿ ಚೌಕಿನಲ್ಲಿ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಹೂವಿನಹಡಗಲಿ ಸಂಘಟಕರು ನಮ್ಮ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಅವರು ಕೇಳಿದರು.<br /> <br /> ರೈಲ್ವೆ ಹೋರಾಟವನ್ನು ನಾವು ಹಂತ-ಹಂತವಾಗಿ ಮಾಡುತ್ತಿದ್ದೇವೆ. ಜಂತರ್-ಮಂತರ್ನಲ್ಲಿ ಹೋಗಿ ಒಂದು ದಿನ ಸತ್ಯಾಗ್ರಹ ಮಾಡಿ ಬಂದಿದ್ದೇವೆ, ಮುಂಡರಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಿದ್ದೇವೆ, ಅಂಚೆ ಪತ್ರ, ಪಾದಯಾತ್ರೆ ಯಂತಹ ಹೋರಾಟಗಳು ನಿರಂತರ ವಾಗಿ ನಡೆದಿವೆ ಆದರೂ ಸರ್ಕಾರ ನಮ್ಮ ಕೂಗನ್ನು ಕಿವಿಯಲ್ಲಿ ಹಾಕಿಕೊಂಡಿಲ್ಲ ಎಂದರು.<br /> <br /> ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ ರೈಲ್ವೆ ಮಾರ್ಗ ವನ್ನು ಪಡೆಯುವುದು ನಮ್ಮ ಹಕ್ಕಾಗಿದೆ ಪಕ್ಷಾತೀತವಾಗಿ ಹೋರಾಟವನ್ನು ಮುಂದುವರಿಸೋಣ ಎಂದರು.<br /> ಜನರು ಕಟ್ಟಿದ ತೆರಿಗೆ ಅಭಿವೃದ್ಧಿಯ ರೂಪದಲ್ಲಿ ಜನರಿಗೆ ಸೇರಬೇಕು ಆದರೆ ಸರ್ಕಾರ ಈ ಸೌಲಭ್ಯವನ್ನು ಕೊಡುವಲ್ಲಿ ವಿಫಲವಾಗಿದೆ ಎಂದರು.<br /> <br /> ಹೂವಿನಹಡಗಲಿಯ ಹೋರಾಟ ಗಾರರು ಈಗಾಗಲೇ ಬೈಕ್ರ್ಯಾಲಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಬರುವ ದಿನಗಳಲ್ಲಿ ಹೋರಾಟವನ್ನು ಚುರುಕುಗೊಳಿಸುವ ಮೂಲಕ ಸೌಲಭ್ಯ ಪಡೆಯಲು ಮುಂದಾಗೋಣ ಎಂದರು.<br /> ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೋರಾಟಗಾರ ಹಣ್ಣಿ ವೀರಣ್ಣ, ಶೇಷನಗೌಡ, ಪ್ರೊ.ಎಸ್.ಎಸ್. ಪಾಟೀಲ್, ಬಿ. ಪೀರ್ ಬಾಷಾ ಮಾತ ನಾಡಿ ನೂತನ ರೈಲು ಮಾರ್ಗವನ್ನು ಪಡೆಯ ಬೇಕಾದರೆ ವ್ಯವಸ್ಥಿತವಾದ ಹೋರಾಟದ ರೂಪುರೇಷೆಗಳನ್ನು ಮಾಡಿಕೊಳ್ಳಬೇಕಿದೆ.<br /> <br /> ಮುಂಡರಗಿ ಮತ್ತು ಹೂವಿನಹಡಗಲಿಯ ಎಲ್ಲ ಪ್ರಗತಿಪರ ಹೋರಾಟಗಾರರು ಮತ್ತು ಚಿಂತಕರು ಸೇರಿ ಒಂದು ಉತ್ತಮವಾದ ಜಂಟಿ ರೈಲ್ವೆ ಹೋರಾಟ ಸಮಿತಿಯನ್ನು ರಚಿಸಿಕೊಂಡು ಮುಂದಿನ ಹೆಜ್ಜೆಗಳನ್ನು ಹಾಕಬೇಕಾಗಿದೆ ಎಂದರು.<br /> <br /> ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಜಿ.ಬುಳ್ಳಪ್ಪ, ಬಿ.ಎಲ್. ಶ್ರೀಧರ್, ಮತ್ತಿಹಳ್ಳಿ ಬಸವರಾಜ, ಪುತ್ರೇಶ್, ಕೆ.ಅಯ್ಯನಗೌಡ, ಅಶ್ವಥ ನಾರಾಯಣ, ಸೋಮಶೇಖರ, ಎಸ್.ಎಂ. ಬಸವರಾಜ, ವಿಶ್ವನಾಥ ಹಳ್ಳಿಗುಡಿ, ಜಗದೀಶ, ಶಿವಕುಮಾರ ಪತ್ರಿಮಠ, ಅಶೋಕ, ಮಲ್ಲನಗೌಡ, ಚಂದ್ರಪ್ಪ, ಎಸ್.ಎಂ.ಜಾನ್, ಇರ್ಫಾನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ಗದಗ- ಮುಂಡರಗಿ -ಹಡಗಲಿ-ಹರಿಹರ ರೈಲು ಮಾರ್ಗ ಕನಸಾಗಿ ಉಳಿದಿದೆ ಎಂದು ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಮುಖಂಡ ರಾದ ಬಸವರಾಜ ನವಲಗುಂದ ಆತಂಕ ವ್ಯಕ್ತಪಡಿಸಿದರು.<br /> ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಈ ಬಜೆಟ್ನಲ್ಲಿಯೂ ನಮ್ಮ ರೈಲ್ವೆ ಮಾರ್ಗವನ್ನು ಕೈಬಿಡಲಾಗಿದೆ ಸರ್ಕಾರ ಗಳು ಮೂಲಸೌಕರ್ಯ ಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.<br /> <br /> ಇದೇ ತಿಂಗಳು 20ರಂದು ನೂತನ ರೈಲ್ವೆ ಮಾರ್ಗಕ್ಕೆ ಮಂಜೂರಾತಿಗಾಗಿ ಗದಗ ನಗರದ ಗಾಂಧಿ ಚೌಕಿನಲ್ಲಿ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಹೂವಿನಹಡಗಲಿ ಸಂಘಟಕರು ನಮ್ಮ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಅವರು ಕೇಳಿದರು.<br /> <br /> ರೈಲ್ವೆ ಹೋರಾಟವನ್ನು ನಾವು ಹಂತ-ಹಂತವಾಗಿ ಮಾಡುತ್ತಿದ್ದೇವೆ. ಜಂತರ್-ಮಂತರ್ನಲ್ಲಿ ಹೋಗಿ ಒಂದು ದಿನ ಸತ್ಯಾಗ್ರಹ ಮಾಡಿ ಬಂದಿದ್ದೇವೆ, ಮುಂಡರಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಿದ್ದೇವೆ, ಅಂಚೆ ಪತ್ರ, ಪಾದಯಾತ್ರೆ ಯಂತಹ ಹೋರಾಟಗಳು ನಿರಂತರ ವಾಗಿ ನಡೆದಿವೆ ಆದರೂ ಸರ್ಕಾರ ನಮ್ಮ ಕೂಗನ್ನು ಕಿವಿಯಲ್ಲಿ ಹಾಕಿಕೊಂಡಿಲ್ಲ ಎಂದರು.<br /> <br /> ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ ರೈಲ್ವೆ ಮಾರ್ಗ ವನ್ನು ಪಡೆಯುವುದು ನಮ್ಮ ಹಕ್ಕಾಗಿದೆ ಪಕ್ಷಾತೀತವಾಗಿ ಹೋರಾಟವನ್ನು ಮುಂದುವರಿಸೋಣ ಎಂದರು.<br /> ಜನರು ಕಟ್ಟಿದ ತೆರಿಗೆ ಅಭಿವೃದ್ಧಿಯ ರೂಪದಲ್ಲಿ ಜನರಿಗೆ ಸೇರಬೇಕು ಆದರೆ ಸರ್ಕಾರ ಈ ಸೌಲಭ್ಯವನ್ನು ಕೊಡುವಲ್ಲಿ ವಿಫಲವಾಗಿದೆ ಎಂದರು.<br /> <br /> ಹೂವಿನಹಡಗಲಿಯ ಹೋರಾಟ ಗಾರರು ಈಗಾಗಲೇ ಬೈಕ್ರ್ಯಾಲಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಬರುವ ದಿನಗಳಲ್ಲಿ ಹೋರಾಟವನ್ನು ಚುರುಕುಗೊಳಿಸುವ ಮೂಲಕ ಸೌಲಭ್ಯ ಪಡೆಯಲು ಮುಂದಾಗೋಣ ಎಂದರು.<br /> ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೋರಾಟಗಾರ ಹಣ್ಣಿ ವೀರಣ್ಣ, ಶೇಷನಗೌಡ, ಪ್ರೊ.ಎಸ್.ಎಸ್. ಪಾಟೀಲ್, ಬಿ. ಪೀರ್ ಬಾಷಾ ಮಾತ ನಾಡಿ ನೂತನ ರೈಲು ಮಾರ್ಗವನ್ನು ಪಡೆಯ ಬೇಕಾದರೆ ವ್ಯವಸ್ಥಿತವಾದ ಹೋರಾಟದ ರೂಪುರೇಷೆಗಳನ್ನು ಮಾಡಿಕೊಳ್ಳಬೇಕಿದೆ.<br /> <br /> ಮುಂಡರಗಿ ಮತ್ತು ಹೂವಿನಹಡಗಲಿಯ ಎಲ್ಲ ಪ್ರಗತಿಪರ ಹೋರಾಟಗಾರರು ಮತ್ತು ಚಿಂತಕರು ಸೇರಿ ಒಂದು ಉತ್ತಮವಾದ ಜಂಟಿ ರೈಲ್ವೆ ಹೋರಾಟ ಸಮಿತಿಯನ್ನು ರಚಿಸಿಕೊಂಡು ಮುಂದಿನ ಹೆಜ್ಜೆಗಳನ್ನು ಹಾಕಬೇಕಾಗಿದೆ ಎಂದರು.<br /> <br /> ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಜಿ.ಬುಳ್ಳಪ್ಪ, ಬಿ.ಎಲ್. ಶ್ರೀಧರ್, ಮತ್ತಿಹಳ್ಳಿ ಬಸವರಾಜ, ಪುತ್ರೇಶ್, ಕೆ.ಅಯ್ಯನಗೌಡ, ಅಶ್ವಥ ನಾರಾಯಣ, ಸೋಮಶೇಖರ, ಎಸ್.ಎಂ. ಬಸವರಾಜ, ವಿಶ್ವನಾಥ ಹಳ್ಳಿಗುಡಿ, ಜಗದೀಶ, ಶಿವಕುಮಾರ ಪತ್ರಿಮಠ, ಅಶೋಕ, ಮಲ್ಲನಗೌಡ, ಚಂದ್ರಪ್ಪ, ಎಸ್.ಎಂ.ಜಾನ್, ಇರ್ಫಾನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>