<p><strong>ಮಂಗಳೂರು: </strong>ಜಪಾನ್ ಜನರ ಬದುಕನ್ನೇ ಬುಡಮೇಲು ಮಾಡಿದ ಭೂಕಂಪ ಮತ್ತು ಸುನಾಮಿಯಿಂದ ಭಾರತಕ್ಕೆ ಯಾವ ಅಪಾಯವೂ ಇಲ್ಲ ಎಂದು ಹೇಳಲಾಗುತ್ತಿದ್ದರೂ ಕರಾವಳಿಯಲ್ಲಿ ಈ ವಿದ್ಯಮಾನ ಕೊಂಚ ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದೂ ಬದುಕು ಮಾತ್ರ ನಿರಾತಂಕವಾಗಿಯೇ ಸಾಗಿದೆ. ಈ ನಡುವೆ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.<br /> <br /> ಜಪಾನ್ನಲ್ಲಿ ಭೂಕಂಪ, ಸುನಾಮಿ ಎದ್ದಿದೆ ಎಂಬ ಸುದ್ದಿ ಶುಕ್ರವಾರ ಮಧ್ಯಾಹ್ನದೊತ್ತಿಗೆ ಎಲ್ಲೆಡೆ ಪಸರಿಸುತ್ತಿರುವಂತೆಯೆ ಎಲ್ಲರ ಬಾಯಲ್ಲೂ ಇದೇ ಮಾತು. ನಮ್ಮ ಕರಾವಳಿಗೂ ಸುನಾಮಿ ಪರಿಣಾಮ ಕಾಣಿಸಿಕೊಳ್ಳಲಿದೆಯೆ, ಅಲೆಗಳಲ್ಲಿ ಏರಿಳಿತವಾಗಬಹುದು ಎಂಬ ಆತಂಕದ ಚರ್ಚೆ ಸಾಗಿತ್ತು. <br /> <br /> ಸುನಾಮಿ ಸುದ್ದಿ ಹೆಚ್ಚು ಆತಂಕಕ್ಕೆ ಕಾರಣವಾಗಿದ್ದು ಮೀನುಗಾರರಿಗೆ. ಈಗಾಗಲೇ ಆಳಸಮುದ್ರಕ್ಕೆ ಇಳಿದ ಮೀನುಗಾರರು ಹೇಗಿದ್ದಾರೊ ಎನ್ನುವ ಆತಂಕ ಒಂದೆಡೆಯಾದರೆ ಪರಿಸ್ಥಿತಿ ತಿಳಿಯಾಗುವವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಹಳೆ ಬಂದರಿನಲ್ಲಿ ಶುಕ್ರವಾರ ಮಧ್ಯಾಹ್ನ ಸುನಾಮಿಯದೇ ಚರ್ಚೆ. ದೂರದ ಜಪಾನ್ ಸುನಾಮಿ ಇಲ್ಲಿಗೆ ಅಪ್ಪಳಿಸುವ ಸಾಧ್ಯತೆ ತೀರ ಕಡಿಮೆ ಎನ್ನುವ ವಿಶ್ವಾಸ ಹಲವರಲ್ಲಿ ಕಾಣಿಸಿಕೊಂಡರೂ ಎಂದಿನಂತೆ ಕಡಲಿಗೆ ಇಳಿಯುವ ಸಾಹಸಕ್ಕೆ ಅನೇಕರು ಮುಂದಾಗಿಲ್ಲ.<br /> <br /> ಬೋಟುಗಳಿಗೆ ಮಂಜುಗಡ್ಡೆ ತುಂಬಿಸುವ ಕೆಲಸ ಶುಕ್ರವಾರ ಕೆಲವು ಕಡೆ ಮಾತ್ರ ಕಂಡುಬಂದಿದ್ದು ಬಹುತೇಕ ದೋಣಿಗಳು ಲಂಗರು ಹಾಕಿದ್ದರೆ ಇನ್ನೂ ಕೆಲವರು ಇದೇ ಉತ್ತಮ ಸಮಯ ಎಂದು ತಮ್ಮ ಬೋಟುಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. <br /> <br /> ‘ನಮ್ಮ ಬೋಟಿಗೆ ಬೆಳಿಗ್ಗೆಯೇ ಐಸ್ ತುಂಬಿದ್ದು ರಾತ್ರಿ ಹೊರಡಬೇಕು ಅಂದುಕೊಂಡಿದ್ದೆವು. ಆದರೆ ಸುನಾಮಿ ಸುದ್ದಿ ಕೇಳಿ ಭಯವಾಗುತ್ತಿದೆ. ಒಂದೆರಡು ದಿನ ನೋಡೋಣ ಎಂದು ನಮ್ಮ ಧಣಿ ಹೇಳಿದ್ದರಿಂದ ಸುಮ್ಮನಾಗಿದ್ದೇವೆ’ ಹೀಗೆ ಆತಂಕದ ಧ್ವನಿಯಲ್ಲಿ ಮಾತನಾಡಿದ ಮೀನುಗಾರ ಕನಕರಾಜ.<br /> <br /> ‘ಬೇರೆ ಬೇರೆ ಬೋಟುಗಳಿಗೆ ಹೆಚ್ಚುಕಡಿಮೆ ಒಂದು ದಿನದಲ್ಲಿ ಐದು ಟನ್ ಐಸ್ ತುಂಬುತ್ತೇವೆ, ಆದರೆ ಇವತ್ತು ಬೆಳಿಗ್ಗೆಯಿಂದ ಒಂದೇ ಬೋಟಿಗೆ ಐಸ್ ಹಾಕಿದ್ದೇವೆ. ಬಹುಶ: ಸುನಾಮಿ ಸುದ್ದಿ ಕೇಳಿ ಹೆಚ್ಚಿನವರು ನಮ್ಮನ್ನು ಸಂಪರ್ಕಿಸಿಲ್ಲ’ ಎನ್ನುವ ಮಂಜುಗಡ್ಡೆ ವಿತರಣಾ ಘಟಕದ ಹೇಮಂತ್, ಬಂದರು ಪ್ರದೇಶದಲ್ಲಿ ಒಟ್ಟು 20 ಮಂಜುಗಡ್ಡೆ ವಿತರಣಾ ಘಟಕಗಳು ಕೆಲಸ ಮಾಡುತ್ತಿವೆ ಎಂದು ತಿಳಿಸುತ್ತಾರೆ.<br /> <br /> ಸಾಮಾನ್ಯವಾಗಿ ಸುನಾಮಿ ಕಾಣಿಸಿಕೊಂಡಾಗ ಸಮೀಪದ ರಾಷ್ಟ್ರಗಳ ಸಮುದ್ರಗಳಲ್ಲೂ ಅಲೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಈ ಹಿಂದೆ ಚನ್ನೈನಲ್ಲಿ ಕಾಣಿಸಿಕೊಂಡ ಸುನಾಮಿ ಅಲೆಗಳ ಪರಿಣಾಮ ಕರ್ನಾಟಕದ ಕರಾವಳಿಯಲ್ಲೂ ಕೆಲಮಟ್ಟಿಗೆ ಕಾಣಿಸಿಕೊಂಡಿತ್ತು. ಆದರೆ ಶುಕ್ರವಾರ ಇಲ್ಲಿ ಅಂತಹ ಬದಲಾವಣೆ ಏನೂ ಕಂಡಿಲ್ಲ. ಎಂದಿನಂತೆ ಇಂದೂ ಸಹ ಅಲೆಗಳ ಏರಿಳಿತ ಸಾಮಾನ್ಯವಾಗೇ ಇದೆ ಎಂದು ಮೀನು ವ್ಯಾಪಾರಿ ರವಿರಾಜ್ ಬೋಳೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಜಪಾನ್ ಜನರ ಬದುಕನ್ನೇ ಬುಡಮೇಲು ಮಾಡಿದ ಭೂಕಂಪ ಮತ್ತು ಸುನಾಮಿಯಿಂದ ಭಾರತಕ್ಕೆ ಯಾವ ಅಪಾಯವೂ ಇಲ್ಲ ಎಂದು ಹೇಳಲಾಗುತ್ತಿದ್ದರೂ ಕರಾವಳಿಯಲ್ಲಿ ಈ ವಿದ್ಯಮಾನ ಕೊಂಚ ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದೂ ಬದುಕು ಮಾತ್ರ ನಿರಾತಂಕವಾಗಿಯೇ ಸಾಗಿದೆ. ಈ ನಡುವೆ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.<br /> <br /> ಜಪಾನ್ನಲ್ಲಿ ಭೂಕಂಪ, ಸುನಾಮಿ ಎದ್ದಿದೆ ಎಂಬ ಸುದ್ದಿ ಶುಕ್ರವಾರ ಮಧ್ಯಾಹ್ನದೊತ್ತಿಗೆ ಎಲ್ಲೆಡೆ ಪಸರಿಸುತ್ತಿರುವಂತೆಯೆ ಎಲ್ಲರ ಬಾಯಲ್ಲೂ ಇದೇ ಮಾತು. ನಮ್ಮ ಕರಾವಳಿಗೂ ಸುನಾಮಿ ಪರಿಣಾಮ ಕಾಣಿಸಿಕೊಳ್ಳಲಿದೆಯೆ, ಅಲೆಗಳಲ್ಲಿ ಏರಿಳಿತವಾಗಬಹುದು ಎಂಬ ಆತಂಕದ ಚರ್ಚೆ ಸಾಗಿತ್ತು. <br /> <br /> ಸುನಾಮಿ ಸುದ್ದಿ ಹೆಚ್ಚು ಆತಂಕಕ್ಕೆ ಕಾರಣವಾಗಿದ್ದು ಮೀನುಗಾರರಿಗೆ. ಈಗಾಗಲೇ ಆಳಸಮುದ್ರಕ್ಕೆ ಇಳಿದ ಮೀನುಗಾರರು ಹೇಗಿದ್ದಾರೊ ಎನ್ನುವ ಆತಂಕ ಒಂದೆಡೆಯಾದರೆ ಪರಿಸ್ಥಿತಿ ತಿಳಿಯಾಗುವವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಹಳೆ ಬಂದರಿನಲ್ಲಿ ಶುಕ್ರವಾರ ಮಧ್ಯಾಹ್ನ ಸುನಾಮಿಯದೇ ಚರ್ಚೆ. ದೂರದ ಜಪಾನ್ ಸುನಾಮಿ ಇಲ್ಲಿಗೆ ಅಪ್ಪಳಿಸುವ ಸಾಧ್ಯತೆ ತೀರ ಕಡಿಮೆ ಎನ್ನುವ ವಿಶ್ವಾಸ ಹಲವರಲ್ಲಿ ಕಾಣಿಸಿಕೊಂಡರೂ ಎಂದಿನಂತೆ ಕಡಲಿಗೆ ಇಳಿಯುವ ಸಾಹಸಕ್ಕೆ ಅನೇಕರು ಮುಂದಾಗಿಲ್ಲ.<br /> <br /> ಬೋಟುಗಳಿಗೆ ಮಂಜುಗಡ್ಡೆ ತುಂಬಿಸುವ ಕೆಲಸ ಶುಕ್ರವಾರ ಕೆಲವು ಕಡೆ ಮಾತ್ರ ಕಂಡುಬಂದಿದ್ದು ಬಹುತೇಕ ದೋಣಿಗಳು ಲಂಗರು ಹಾಕಿದ್ದರೆ ಇನ್ನೂ ಕೆಲವರು ಇದೇ ಉತ್ತಮ ಸಮಯ ಎಂದು ತಮ್ಮ ಬೋಟುಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. <br /> <br /> ‘ನಮ್ಮ ಬೋಟಿಗೆ ಬೆಳಿಗ್ಗೆಯೇ ಐಸ್ ತುಂಬಿದ್ದು ರಾತ್ರಿ ಹೊರಡಬೇಕು ಅಂದುಕೊಂಡಿದ್ದೆವು. ಆದರೆ ಸುನಾಮಿ ಸುದ್ದಿ ಕೇಳಿ ಭಯವಾಗುತ್ತಿದೆ. ಒಂದೆರಡು ದಿನ ನೋಡೋಣ ಎಂದು ನಮ್ಮ ಧಣಿ ಹೇಳಿದ್ದರಿಂದ ಸುಮ್ಮನಾಗಿದ್ದೇವೆ’ ಹೀಗೆ ಆತಂಕದ ಧ್ವನಿಯಲ್ಲಿ ಮಾತನಾಡಿದ ಮೀನುಗಾರ ಕನಕರಾಜ.<br /> <br /> ‘ಬೇರೆ ಬೇರೆ ಬೋಟುಗಳಿಗೆ ಹೆಚ್ಚುಕಡಿಮೆ ಒಂದು ದಿನದಲ್ಲಿ ಐದು ಟನ್ ಐಸ್ ತುಂಬುತ್ತೇವೆ, ಆದರೆ ಇವತ್ತು ಬೆಳಿಗ್ಗೆಯಿಂದ ಒಂದೇ ಬೋಟಿಗೆ ಐಸ್ ಹಾಕಿದ್ದೇವೆ. ಬಹುಶ: ಸುನಾಮಿ ಸುದ್ದಿ ಕೇಳಿ ಹೆಚ್ಚಿನವರು ನಮ್ಮನ್ನು ಸಂಪರ್ಕಿಸಿಲ್ಲ’ ಎನ್ನುವ ಮಂಜುಗಡ್ಡೆ ವಿತರಣಾ ಘಟಕದ ಹೇಮಂತ್, ಬಂದರು ಪ್ರದೇಶದಲ್ಲಿ ಒಟ್ಟು 20 ಮಂಜುಗಡ್ಡೆ ವಿತರಣಾ ಘಟಕಗಳು ಕೆಲಸ ಮಾಡುತ್ತಿವೆ ಎಂದು ತಿಳಿಸುತ್ತಾರೆ.<br /> <br /> ಸಾಮಾನ್ಯವಾಗಿ ಸುನಾಮಿ ಕಾಣಿಸಿಕೊಂಡಾಗ ಸಮೀಪದ ರಾಷ್ಟ್ರಗಳ ಸಮುದ್ರಗಳಲ್ಲೂ ಅಲೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಈ ಹಿಂದೆ ಚನ್ನೈನಲ್ಲಿ ಕಾಣಿಸಿಕೊಂಡ ಸುನಾಮಿ ಅಲೆಗಳ ಪರಿಣಾಮ ಕರ್ನಾಟಕದ ಕರಾವಳಿಯಲ್ಲೂ ಕೆಲಮಟ್ಟಿಗೆ ಕಾಣಿಸಿಕೊಂಡಿತ್ತು. ಆದರೆ ಶುಕ್ರವಾರ ಇಲ್ಲಿ ಅಂತಹ ಬದಲಾವಣೆ ಏನೂ ಕಂಡಿಲ್ಲ. ಎಂದಿನಂತೆ ಇಂದೂ ಸಹ ಅಲೆಗಳ ಏರಿಳಿತ ಸಾಮಾನ್ಯವಾಗೇ ಇದೆ ಎಂದು ಮೀನು ವ್ಯಾಪಾರಿ ರವಿರಾಜ್ ಬೋಳೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>