<p><strong>ತುಮಕೂರು: </strong>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಎರಡನೇ ಅವಧಿಗೂ ಅಧಿಕಾರ ಬೇಡ. ಸ್ಪರ್ಧೆಯಲ್ಲಿರುವ ಇಬ್ಬರು ಮಾಜಿ ಅಧ್ಯಕ್ಷರು ಕಣದಿಂದ ಹಿಂದೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು~ ಎಂದು ಗುರುವಾರ ಇಲ್ಲಿ ಸಾಹಿತಿಗಳನ್ನು ಒಳಗೊಂಡ ತಂಡ ಮನವಿ ಮಾಡಿತು.<br /> <br /> ಪತ್ರಿಕಾಗೋಷ್ಠಿಯಲ್ಲಿ ಕವಿ ಕೆ.ಬಿ.ಸಿದ್ದಯ್ಯ, ಸಾಹಿತಿಗಳಾದ ಸಿ.ಎಚ್.ಮರಿದೇವರು, ಕೆ.ಪಿ.ನಟರಾಜ, ಕವಿತಾಕೃಷ್ಣ, ಕಸಾಪ ಮಾಜಿ ಅಧ್ಯಕ್ಷ ಏಕೇಶ್,ಡಾ.ಲಕ್ಷ್ಮಣದಾಸ್, ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ರವಿಕುಮಾರ್ ಈ ಮನವಿ ಮಾಡಿದರು.<br /> <br /> ಸಾಹಿತ್ಯ ಪರಿಷತ್ ಒಂದೇ ಜಾತಿಗೆ ಸೇರಬಾರ ದು. ಎಲ್ಲರನ್ನು ಒಳಗೊಂಡಂತೆ ಬೆಳೆಯಬೇಕು. ಪರಿಷತ್ಗೆ ಸಮರ್ಥ ನಾಯಕತ್ವ ಬೇಕಾಗಿದೆ. ಸೋ.ಮು.ಭಾಸ್ಕರಾಚಾರ್ ಅವರು ಸಮರ್ಥರಿದ್ದು ಅವರನ್ನು ಎಲ್ಲರು ಬೆಂಬಲಿಸಬೇಕಾಗಿದೆ ಎಂದು ಕೆ.ಇ.ಸಿದ್ದಯ್ಯ, ಸಿ.ಎಸ್.ಮರಿದೇವರು ಹೇಳಿದರು.<br /> <br /> ಕಣದಿಂದ ಹಿಂದೆ ಸರಿದಿರುವುದಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಸುಳ್ಳು. ಇನ್ನು 9 ತಿಂಗಳಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತನಾಗುವೆ. ಕಸಾಪವನ್ನು ಸಾಂಸ್ಕೃತಿಕವಾಗಿ ಕಟ್ಟಬೇಕೆಂಬ ಕನಸಿದೆ ಎಂದು ಕಣದಲ್ಲಿರುವ ಡಾ.ಸೋ.ಮು.ಭಾಸ್ಕರಾಚಾರ್ ಹೇಳಿದರು.<br /> <br /> ಮೇ 7ಕ್ಕೆ ಪ್ರಬಂಧ ಸ್ಪರ್ಧೆ: ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ 123ನೇ ಜನ್ಮ ದಿನೋತ್ಸವದ ಅಂಗವಾಗಿ ಜಿಲ್ಲಾ ಸೇವಾದಳ ಸಮಿತಿ ವತಿಯಿಂದ ಮೇ7ರಂದು ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ಇರುವ ಡಾ.ಹರ್ಡೀಕರ್ ಭವನದಲ್ಲಿ ಪ್ರಬಂಧ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಚಿ.ನ.ಏಕೇಶ್ವರ್ ತಿಳಿಸಿದ್ದಾರೆ. <br /> <br /> `ನಾ ಮೆಚ್ಚಿದ ನಾಯಕ ಡಾ.ನಾ.ಸು.ಹರ್ಡೀಕರ್~ಅಥವಾ `ಭಾರತೀಯರು ಸೇವಾತತ್ಪರ ರಾಗುವುದರಿಂದಲೇ ರಾಷ್ಟ್ರದ ಸರ್ವಾಂಗೀಣ ಪ್ರಗತಿ~ ಕುರಿತು ಸ್ಪರ್ಧೆ ನಡೆಯಲಿದೆ. ಮಾಹಿತಿಗೆ ಮೊ 9880873122 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಎರಡನೇ ಅವಧಿಗೂ ಅಧಿಕಾರ ಬೇಡ. ಸ್ಪರ್ಧೆಯಲ್ಲಿರುವ ಇಬ್ಬರು ಮಾಜಿ ಅಧ್ಯಕ್ಷರು ಕಣದಿಂದ ಹಿಂದೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು~ ಎಂದು ಗುರುವಾರ ಇಲ್ಲಿ ಸಾಹಿತಿಗಳನ್ನು ಒಳಗೊಂಡ ತಂಡ ಮನವಿ ಮಾಡಿತು.<br /> <br /> ಪತ್ರಿಕಾಗೋಷ್ಠಿಯಲ್ಲಿ ಕವಿ ಕೆ.ಬಿ.ಸಿದ್ದಯ್ಯ, ಸಾಹಿತಿಗಳಾದ ಸಿ.ಎಚ್.ಮರಿದೇವರು, ಕೆ.ಪಿ.ನಟರಾಜ, ಕವಿತಾಕೃಷ್ಣ, ಕಸಾಪ ಮಾಜಿ ಅಧ್ಯಕ್ಷ ಏಕೇಶ್,ಡಾ.ಲಕ್ಷ್ಮಣದಾಸ್, ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ರವಿಕುಮಾರ್ ಈ ಮನವಿ ಮಾಡಿದರು.<br /> <br /> ಸಾಹಿತ್ಯ ಪರಿಷತ್ ಒಂದೇ ಜಾತಿಗೆ ಸೇರಬಾರ ದು. ಎಲ್ಲರನ್ನು ಒಳಗೊಂಡಂತೆ ಬೆಳೆಯಬೇಕು. ಪರಿಷತ್ಗೆ ಸಮರ್ಥ ನಾಯಕತ್ವ ಬೇಕಾಗಿದೆ. ಸೋ.ಮು.ಭಾಸ್ಕರಾಚಾರ್ ಅವರು ಸಮರ್ಥರಿದ್ದು ಅವರನ್ನು ಎಲ್ಲರು ಬೆಂಬಲಿಸಬೇಕಾಗಿದೆ ಎಂದು ಕೆ.ಇ.ಸಿದ್ದಯ್ಯ, ಸಿ.ಎಸ್.ಮರಿದೇವರು ಹೇಳಿದರು.<br /> <br /> ಕಣದಿಂದ ಹಿಂದೆ ಸರಿದಿರುವುದಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಸುಳ್ಳು. ಇನ್ನು 9 ತಿಂಗಳಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತನಾಗುವೆ. ಕಸಾಪವನ್ನು ಸಾಂಸ್ಕೃತಿಕವಾಗಿ ಕಟ್ಟಬೇಕೆಂಬ ಕನಸಿದೆ ಎಂದು ಕಣದಲ್ಲಿರುವ ಡಾ.ಸೋ.ಮು.ಭಾಸ್ಕರಾಚಾರ್ ಹೇಳಿದರು.<br /> <br /> ಮೇ 7ಕ್ಕೆ ಪ್ರಬಂಧ ಸ್ಪರ್ಧೆ: ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ 123ನೇ ಜನ್ಮ ದಿನೋತ್ಸವದ ಅಂಗವಾಗಿ ಜಿಲ್ಲಾ ಸೇವಾದಳ ಸಮಿತಿ ವತಿಯಿಂದ ಮೇ7ರಂದು ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ಇರುವ ಡಾ.ಹರ್ಡೀಕರ್ ಭವನದಲ್ಲಿ ಪ್ರಬಂಧ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಚಿ.ನ.ಏಕೇಶ್ವರ್ ತಿಳಿಸಿದ್ದಾರೆ. <br /> <br /> `ನಾ ಮೆಚ್ಚಿದ ನಾಯಕ ಡಾ.ನಾ.ಸು.ಹರ್ಡೀಕರ್~ಅಥವಾ `ಭಾರತೀಯರು ಸೇವಾತತ್ಪರ ರಾಗುವುದರಿಂದಲೇ ರಾಷ್ಟ್ರದ ಸರ್ವಾಂಗೀಣ ಪ್ರಗತಿ~ ಕುರಿತು ಸ್ಪರ್ಧೆ ನಡೆಯಲಿದೆ. ಮಾಹಿತಿಗೆ ಮೊ 9880873122 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>