<p><strong>ಚಾಮರಾಜನಗರ</strong>: ಕಾಡಾನೆಗಳ ದಾಳಿಗೆ ಹೆದರಿ ಗುಂಡಿಗೆ ಬಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬುಧವಾರ ನಡೆದಿದೆ.<br /> <br /> ವೆಂಕಟಯ್ಯನಛತ್ರ ಗ್ರಾಮದ ಕೃಷ್ಣಶೆಟ್ಟಿ(20) ಮೃತಪಟ್ಟ ದುರ್ದೈವಿ. ಬೆಳಿಗ್ಗೆ ಕಾಡಾನೆಗಳ ಹಿಂಡು ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿದ್ದವು. ಸುತ್ತಮುತ್ತಲಿನ ಜಮೀನಿನ ರೈತರು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದರು. ಮೃತ ಕೃಷ್ಣಶೆಟ್ಟಿ ಕೂಡ ಹಿನ್ನೀರು ಪ್ರದೇಶದಲ್ಲಿಯೇ ಜಮೀನು ಹೊಂದಿದ್ದು, ಕಾಡಾನೆ ಓಡಿಸಲು ಹೋಗಿದ್ದಾರೆ. ಆ ವೇಳೆ ಆನೆಗಳು ನಾಗರಿಕರ ಮೇಲೆ ದಾಳಿಗೆ ಮುಂದಾಗಿವೆ. ಆನೆ ಯೊಂದು ಅಟ್ಟಿಸಿಕೊಂಡ ಬಂದ ವೇಳೆ ಆಘಾತಗೊಂಡ ಕೃಷ್ಣಶೆಟ್ಟಿ ಗುಂಡಿ ಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ. <br /> <br /> <strong>ಹುಲಿ ದಾಳಿ: 5 ಕಾಡಾನೆ ಮರಿ ಬಲಿ</strong><br /> <br /> ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಹುಲಿಯೊಂದು ದಾಳಿ ನಡೆಸಿ ಕಾಡಾನೆ ಮರಿಗಳನ್ನು ಕೊಂದು ಹಾಕಿರುವ ಘಟನೆ ಈಚೆಗೆ ಜರುಗಿದೆ.<br /> <br /> ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಹೆಡಿಯಾಲ, ಬಂಡೀಪುರ ಹಾಗೂ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಸುಮಾರು 1 ರಿಂದ 2 ವರ್ಷಗಳ ಕಾಡಾನೆ ಮರಿಗಳ ಮೇಲೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ 4 ಕಾಡಾನೆ ಮರಿ ಗಳು ಅಸುನೀಗಿದ್ದು, ಒಂದು ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಂದು ಚಿಕಿತ್ಸೆ ನೀಡಿದ್ದರು. ಆದರೆ ಅದು ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.<br /> <br /> ಅರಣ್ಯ ಪ್ರದೇಶದ ಒಳಭಾಗದಲ್ಲಿ ದಾಳಿ ನಡೆಸಿರುವ ಕಾರಣ ಹಲವು ದಿನಗಳವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗೂ ಈ ವಿಷಯ ತಿಳಿಯದೇ ನಂತರ ಕ್ರಮ ಕೈಗೊಂಡಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಕಾಡಾನೆಗಳ ದಾಳಿಗೆ ಹೆದರಿ ಗುಂಡಿಗೆ ಬಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬುಧವಾರ ನಡೆದಿದೆ.<br /> <br /> ವೆಂಕಟಯ್ಯನಛತ್ರ ಗ್ರಾಮದ ಕೃಷ್ಣಶೆಟ್ಟಿ(20) ಮೃತಪಟ್ಟ ದುರ್ದೈವಿ. ಬೆಳಿಗ್ಗೆ ಕಾಡಾನೆಗಳ ಹಿಂಡು ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿದ್ದವು. ಸುತ್ತಮುತ್ತಲಿನ ಜಮೀನಿನ ರೈತರು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದರು. ಮೃತ ಕೃಷ್ಣಶೆಟ್ಟಿ ಕೂಡ ಹಿನ್ನೀರು ಪ್ರದೇಶದಲ್ಲಿಯೇ ಜಮೀನು ಹೊಂದಿದ್ದು, ಕಾಡಾನೆ ಓಡಿಸಲು ಹೋಗಿದ್ದಾರೆ. ಆ ವೇಳೆ ಆನೆಗಳು ನಾಗರಿಕರ ಮೇಲೆ ದಾಳಿಗೆ ಮುಂದಾಗಿವೆ. ಆನೆ ಯೊಂದು ಅಟ್ಟಿಸಿಕೊಂಡ ಬಂದ ವೇಳೆ ಆಘಾತಗೊಂಡ ಕೃಷ್ಣಶೆಟ್ಟಿ ಗುಂಡಿ ಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ. <br /> <br /> <strong>ಹುಲಿ ದಾಳಿ: 5 ಕಾಡಾನೆ ಮರಿ ಬಲಿ</strong><br /> <br /> ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಹುಲಿಯೊಂದು ದಾಳಿ ನಡೆಸಿ ಕಾಡಾನೆ ಮರಿಗಳನ್ನು ಕೊಂದು ಹಾಕಿರುವ ಘಟನೆ ಈಚೆಗೆ ಜರುಗಿದೆ.<br /> <br /> ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಹೆಡಿಯಾಲ, ಬಂಡೀಪುರ ಹಾಗೂ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಸುಮಾರು 1 ರಿಂದ 2 ವರ್ಷಗಳ ಕಾಡಾನೆ ಮರಿಗಳ ಮೇಲೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ 4 ಕಾಡಾನೆ ಮರಿ ಗಳು ಅಸುನೀಗಿದ್ದು, ಒಂದು ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಂದು ಚಿಕಿತ್ಸೆ ನೀಡಿದ್ದರು. ಆದರೆ ಅದು ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.<br /> <br /> ಅರಣ್ಯ ಪ್ರದೇಶದ ಒಳಭಾಗದಲ್ಲಿ ದಾಳಿ ನಡೆಸಿರುವ ಕಾರಣ ಹಲವು ದಿನಗಳವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗೂ ಈ ವಿಷಯ ತಿಳಿಯದೇ ನಂತರ ಕ್ರಮ ಕೈಗೊಂಡಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>