<p>ನನ್ನಮ್ಮ ಸಿಂಹಿಣಿಯಂತೆ. ಅಮ್ಮನಿರದಿದ್ದರೆ ನಾನಿವೊತ್ತು ಜೀವಸಹಿತ ಇರುತ್ತಿದ್ದೆನೋ ಇಲ್ಲವೋ? ನನಗೆ ಈ ವ್ಯಕ್ತಿತ್ವ ನೀಡಲು ಕಾರಣರಾಗಿರುವ ಅಮ್ಮ ಹಾಗೂ ಅಪ್ಪನಿಗೆ ಸಮರ್ಪಿಸಿಯೇ ಅರೇಬಿಕ್ ಹಾಗೂ ಉರ್ದು ಭಾಷೆ ಮತ್ತು ಸಂಸ್ಕೃತಿಯ ಅಕಾಡೆಮಿಯನ್ನು ಆರಂಭಿಸುತ್ತಿದ್ದೇನೆ. ಹೀಗೆ ಹೇಳಿದ್ದು ಕಾದರ್ ಖಾನ್. <br /> <br /> ಹುಟ್ಟಿದ್ದು ಅಫ್ಘಾನಿಸ್ತಾನದ ಕಾಬುಲ್ನಲ್ಲಿ. ಆದರೆ ಅವರಮ್ಮನಿಗೆ ಅಲ್ಲಿಯ ಜೀವನ ಅಸುರಕ್ಷಿತವೆನಿಸಿ, ಮುಂಬೈಗೆ ಬಂದರು. ಆ ಕಾಲದಲ್ಲಿ ಕೆಂಪುದೀಪದಡಿಯ ಸ್ಲಂನಲ್ಲಿ ದುಡಿಯುತ್ತ ಅಮ್ಮ ಓದುವುದನ್ನು ಬರೆಯುವುದನ್ನು ಕಲಿಸಿದರು. <br /> <br /> ಒಮ್ಮೆ ಬಡತನದಿಂದ ಬೇಸತ್ತು ಟಿನ್ಶೆಡ್ಗಳ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲೂ ಖಾನ್ ಯತ್ನಿದ್ದರು. ಆದರೆ ನಂತರ ಅವರಮ್ಮ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಕಷ್ಟ ಪಡುತ್ತಲೇ ಎಂಜಿನಿಯರಿಂಗ್ ಮುಗಿಸಿದೆ. ಕೆಲ ಸಮಯ ಮುಂಬೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರು ಆಗಿದ್ದೆ.<br /> <br /> 1974ರಲ್ಲಿ ಮನ್ಮೋಹನ್ ದೇಸಾಯಿ `ರೋಟಿ~ ಚಿತ್ರಕ್ಕೆ ಸಂಭಾಷಣೆ ಬರೆಯಲು ಹೇಳಿ 1 ಲಕ್ಷ 21 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಅದು ಆ ಕಾಲಕ್ಕೆ ಬಲು ದೊಡ್ಡ ಮೊತ್ತವಾಗಿತ್ತು.<br /> <br /> ನಂತರ ಅಮಿತಾಬ್ ಬಚ್ಚನ್ನ ಬಹುತೇಕ ಚಿತ್ರಗಳಿಗೆ ಕಾದರ್ಖಾನ್ ಸಂಭಾಷಣೆ ಬರೆದರು. ನಸೀಬ್, ಅಗ್ನಿಪಥ್ ಸೇರಿದಂತೆ, ಸತ್ತೆಪೆ ಸತ್ತಾ, ಹಮ್, ಇನ್ಕಿಲಾಬ್, ಖೂನ್ ಪಸೀನಾ, ದೋ ಔರ್ ದೋ ಪಾಂಚ್ ಮುಂತಾದ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು. `<br /> <br /> ಹಿಮ್ಮತ್ವಾಲಾ, ಕೂಲಿ ನಂ1, ಕರ್ಮಾ, ಸಲ್ತನತ್, ಸರ್ಫರೋಷ್ ಚಿತ್ರದ ಸಂಭಾಷಣೆಗಳನ್ನೂ ಕಾದರ್ಖಾನ್ ಅವರೇ ಬರೆದದ್ದು.ಉರ್ದು ಹಾಗೂ ದಕ್ಖನಿ ಹಿಂದಿ ಭಾಷೆಯ ಬಳಕೆ ಇವರ ಬರವಣಿಗೆಯಲ್ಲಿ ಹಾಸುಹೊಕ್ಕಿತ್ತು.<br /> <br /> ಅರೇಬಿಕ್ ಭಾಷೆ ಅಥವಾ ಉರ್ದು ಭಾಷಾ ಕಲಿಕೆಯಿಂದಲೇ ಇಸ್ಲಾಂ ಬಗೆಗಿರುವ ತಪ್ಪು ಅಭಿಪ್ರಾಯಗಳನ್ನು ತೊಲಗಿಸಬಹುದು ಎಂಬುದು ಕಾದರ್ಖಾನ್ ಅಭಿಪ್ರಾಯವಾಗಿದೆ. <br /> <br /> ಈ ನಿಟ್ಟಿನಲ್ಲಿ ಅರೇಬಿಕ್, ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಕೆಕೆ ಇನ್ಸ್ಟಿಟ್ಯೂಟ್ ಆಫ್ಅರೇಬಿಕ್ ಭಾಷೆ ಮತ್ತು ಇಸ್ಲಾಮಿಕ್ ಕಲ್ಚರ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.<br /> <br /> ದುಬೈನಲ್ಲಿ ಅಲ್ಪಾವಧಿಯ ಹಾಗೂ ಸುದೀರ್ಘ ಅವಧಿಯ ಕೋರ್ಸುಗಳನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಅರೇಬಿಕ್ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಬೆಸೆಯಲು ಇಷ್ಟ ಪಡುವ ಎಲ್ಲ ವಿದೇಶಿಗರಿಗಾಗಿ ಈ ಸಂಸ್ಥೆ ಶ್ರಮಿಸಲಿದೆ. ಇದಕ್ಕಾಗಿ ಉರ್ದು ಹಾಗೂ ಅರೇಬಿಕ್ ಸಾಹಿತ್ಯವನ್ನು ಸರಳಗೊಳಿಸಿ ಪಠ್ಯವನ್ನು ಸಿದ್ಧ ಪಡಿಸಿದ್ದೇನೆ ಎಂದು ಹೇಳಿದ್ದಾರೆ.<br /> <br /> ಸದ್ಯ ದುಬೈನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಟೊರಾಂಟೊದಲ್ಲಿಯೂ ಆರಂಭಿಸುವುದಾಗಿ ಖಾನ್ ತಿಳಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಹಿಂದಿರುಗಲಿದ್ದು, ಇಲ್ಲಿಯೂ ಆಸಕ್ತರಿಗಾಗಿ ತರಬೇತಿ ಶಿಬಿರಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.<br /> <br /> ಅಂದಾಜ್ ಅಪ್ನಾ ಅಪ್ನಾದ ಎರಡನೆಯ ಭಾಗವನ್ನು ಸಿದ್ಧಪಡಿಸುತ್ತಿರುವುದಾಗಿ ಬಾಲಿವುಡ್ನಲ್ಲಿ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಚಾರಿಸಿದಾಗ, ಸದ್ಯಕ್ಕೆ ಲೇಖಕನಾಗಿ ನಾನು ಯಾವ ಕೆಲಸವನ್ನೂ ಮಾಡುತ್ತಿಲ್ಲ.<br /> <br /> ಅದೆಲ್ಲವೂ ಗಾಳಿ ಸುದ್ದಿ ಮಾತ್ರ. ಈಗ ಅಪ್ಪ ಅಮ್ಮನಿಗೆ ಸಮರ್ಪಿಸಿರುವ ಈ ಸ್ಥೆಗಾಗಿಯೇ ನನ್ನ ಬದುಕನ್ನು ಮೀಸಲಿಡುತ್ತೇನೆ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನನ್ನಮ್ಮ ಸಿಂಹಿಣಿಯಂತೆ. ಅಮ್ಮನಿರದಿದ್ದರೆ ನಾನಿವೊತ್ತು ಜೀವಸಹಿತ ಇರುತ್ತಿದ್ದೆನೋ ಇಲ್ಲವೋ? ನನಗೆ ಈ ವ್ಯಕ್ತಿತ್ವ ನೀಡಲು ಕಾರಣರಾಗಿರುವ ಅಮ್ಮ ಹಾಗೂ ಅಪ್ಪನಿಗೆ ಸಮರ್ಪಿಸಿಯೇ ಅರೇಬಿಕ್ ಹಾಗೂ ಉರ್ದು ಭಾಷೆ ಮತ್ತು ಸಂಸ್ಕೃತಿಯ ಅಕಾಡೆಮಿಯನ್ನು ಆರಂಭಿಸುತ್ತಿದ್ದೇನೆ. ಹೀಗೆ ಹೇಳಿದ್ದು ಕಾದರ್ ಖಾನ್. <br /> <br /> ಹುಟ್ಟಿದ್ದು ಅಫ್ಘಾನಿಸ್ತಾನದ ಕಾಬುಲ್ನಲ್ಲಿ. ಆದರೆ ಅವರಮ್ಮನಿಗೆ ಅಲ್ಲಿಯ ಜೀವನ ಅಸುರಕ್ಷಿತವೆನಿಸಿ, ಮುಂಬೈಗೆ ಬಂದರು. ಆ ಕಾಲದಲ್ಲಿ ಕೆಂಪುದೀಪದಡಿಯ ಸ್ಲಂನಲ್ಲಿ ದುಡಿಯುತ್ತ ಅಮ್ಮ ಓದುವುದನ್ನು ಬರೆಯುವುದನ್ನು ಕಲಿಸಿದರು. <br /> <br /> ಒಮ್ಮೆ ಬಡತನದಿಂದ ಬೇಸತ್ತು ಟಿನ್ಶೆಡ್ಗಳ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲೂ ಖಾನ್ ಯತ್ನಿದ್ದರು. ಆದರೆ ನಂತರ ಅವರಮ್ಮ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಕಷ್ಟ ಪಡುತ್ತಲೇ ಎಂಜಿನಿಯರಿಂಗ್ ಮುಗಿಸಿದೆ. ಕೆಲ ಸಮಯ ಮುಂಬೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರು ಆಗಿದ್ದೆ.<br /> <br /> 1974ರಲ್ಲಿ ಮನ್ಮೋಹನ್ ದೇಸಾಯಿ `ರೋಟಿ~ ಚಿತ್ರಕ್ಕೆ ಸಂಭಾಷಣೆ ಬರೆಯಲು ಹೇಳಿ 1 ಲಕ್ಷ 21 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಅದು ಆ ಕಾಲಕ್ಕೆ ಬಲು ದೊಡ್ಡ ಮೊತ್ತವಾಗಿತ್ತು.<br /> <br /> ನಂತರ ಅಮಿತಾಬ್ ಬಚ್ಚನ್ನ ಬಹುತೇಕ ಚಿತ್ರಗಳಿಗೆ ಕಾದರ್ಖಾನ್ ಸಂಭಾಷಣೆ ಬರೆದರು. ನಸೀಬ್, ಅಗ್ನಿಪಥ್ ಸೇರಿದಂತೆ, ಸತ್ತೆಪೆ ಸತ್ತಾ, ಹಮ್, ಇನ್ಕಿಲಾಬ್, ಖೂನ್ ಪಸೀನಾ, ದೋ ಔರ್ ದೋ ಪಾಂಚ್ ಮುಂತಾದ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು. `<br /> <br /> ಹಿಮ್ಮತ್ವಾಲಾ, ಕೂಲಿ ನಂ1, ಕರ್ಮಾ, ಸಲ್ತನತ್, ಸರ್ಫರೋಷ್ ಚಿತ್ರದ ಸಂಭಾಷಣೆಗಳನ್ನೂ ಕಾದರ್ಖಾನ್ ಅವರೇ ಬರೆದದ್ದು.ಉರ್ದು ಹಾಗೂ ದಕ್ಖನಿ ಹಿಂದಿ ಭಾಷೆಯ ಬಳಕೆ ಇವರ ಬರವಣಿಗೆಯಲ್ಲಿ ಹಾಸುಹೊಕ್ಕಿತ್ತು.<br /> <br /> ಅರೇಬಿಕ್ ಭಾಷೆ ಅಥವಾ ಉರ್ದು ಭಾಷಾ ಕಲಿಕೆಯಿಂದಲೇ ಇಸ್ಲಾಂ ಬಗೆಗಿರುವ ತಪ್ಪು ಅಭಿಪ್ರಾಯಗಳನ್ನು ತೊಲಗಿಸಬಹುದು ಎಂಬುದು ಕಾದರ್ಖಾನ್ ಅಭಿಪ್ರಾಯವಾಗಿದೆ. <br /> <br /> ಈ ನಿಟ್ಟಿನಲ್ಲಿ ಅರೇಬಿಕ್, ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಕೆಕೆ ಇನ್ಸ್ಟಿಟ್ಯೂಟ್ ಆಫ್ಅರೇಬಿಕ್ ಭಾಷೆ ಮತ್ತು ಇಸ್ಲಾಮಿಕ್ ಕಲ್ಚರ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.<br /> <br /> ದುಬೈನಲ್ಲಿ ಅಲ್ಪಾವಧಿಯ ಹಾಗೂ ಸುದೀರ್ಘ ಅವಧಿಯ ಕೋರ್ಸುಗಳನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಅರೇಬಿಕ್ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಬೆಸೆಯಲು ಇಷ್ಟ ಪಡುವ ಎಲ್ಲ ವಿದೇಶಿಗರಿಗಾಗಿ ಈ ಸಂಸ್ಥೆ ಶ್ರಮಿಸಲಿದೆ. ಇದಕ್ಕಾಗಿ ಉರ್ದು ಹಾಗೂ ಅರೇಬಿಕ್ ಸಾಹಿತ್ಯವನ್ನು ಸರಳಗೊಳಿಸಿ ಪಠ್ಯವನ್ನು ಸಿದ್ಧ ಪಡಿಸಿದ್ದೇನೆ ಎಂದು ಹೇಳಿದ್ದಾರೆ.<br /> <br /> ಸದ್ಯ ದುಬೈನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಟೊರಾಂಟೊದಲ್ಲಿಯೂ ಆರಂಭಿಸುವುದಾಗಿ ಖಾನ್ ತಿಳಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಹಿಂದಿರುಗಲಿದ್ದು, ಇಲ್ಲಿಯೂ ಆಸಕ್ತರಿಗಾಗಿ ತರಬೇತಿ ಶಿಬಿರಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.<br /> <br /> ಅಂದಾಜ್ ಅಪ್ನಾ ಅಪ್ನಾದ ಎರಡನೆಯ ಭಾಗವನ್ನು ಸಿದ್ಧಪಡಿಸುತ್ತಿರುವುದಾಗಿ ಬಾಲಿವುಡ್ನಲ್ಲಿ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಚಾರಿಸಿದಾಗ, ಸದ್ಯಕ್ಕೆ ಲೇಖಕನಾಗಿ ನಾನು ಯಾವ ಕೆಲಸವನ್ನೂ ಮಾಡುತ್ತಿಲ್ಲ.<br /> <br /> ಅದೆಲ್ಲವೂ ಗಾಳಿ ಸುದ್ದಿ ಮಾತ್ರ. ಈಗ ಅಪ್ಪ ಅಮ್ಮನಿಗೆ ಸಮರ್ಪಿಸಿರುವ ಈ ಸ್ಥೆಗಾಗಿಯೇ ನನ್ನ ಬದುಕನ್ನು ಮೀಸಲಿಡುತ್ತೇನೆ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>