<p><strong>ಬೆಳಗಾವಿ:</strong> ಕಾರ್ಖಾನೆಗಳ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದ್ಯಮಬಾಗ ಠಾಣೆ ಪೊಲೀಸರು, ಅವರಿಂದ 12.70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಉದ್ಯಮಬಾಗದ ನಿವಾಸಿಗಳಾದ ಬಸಪ್ಪ ಕರ್ಕಾಳಿ ಹಾಗೂ ಬಸವರಾಜ ಗುಜನಾಳ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಒಂದು ಟಿಪ್ಪರ್, ಒಂದು ಟಾಟಾ ಸುಮೋ, ಕಬ್ಬಿಣದ ಕಲ್ಲುಗಳು ಸೇರಿದಂತೆ ಒಟ್ಟು 12.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.<br /> <br /> ದಾಮೋದರ್ ಎಂಜಿನಿಯರಿಂಗ್ ವರ್ಕ್ಸ್ ಹಾಗೂ ಬೆಳಗಾವಿ ಕೋಲ್ ಆ್ಯಂಡ್ ಕೋಕ್ ಗ್ರಾಹಕರ ಸಂಘದ ಕಾರ್ಖಾನೆಗಳಲ್ಲಿನ ಬಿಡಿ ಭಾಗಗಳ ಕಳ್ಳತನ ನಡೆದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ಉದ್ಯಮಬಾಗ ಠಾಣೆಯಲ್ಲಿ ದಾಖಲಾಗಿತ್ತು.<br /> <br /> ಈ ಕುರಿತು ತನಿಖೆ ಕೈಗೊಂಡ ಉದ್ಯಮಬಾಗ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅರುಣಕುಮಾರ ಕೋಳೂರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಪ್ಪ ನಾಯಕ, ಎಎಸ್ಐ ಡಿ.ಡಿ. ಭಾವಿಹಾಳ, ಸಿ.ಎಂ. ಲಕ್ಷ್ಮೇಶ್ವರ, ವಿಜಯ ಬಡವನ್ನವರ, ಕೆ.ಕೆ. ಸವದತ್ತಿ, ವಿ.ಎಂ. ದಾನವಾಡ ಹಾಗೂ ಎಸ್.ಕೆ. ಗುಂಡ್ಲೂರ ನೇತೃತ್ವದ ತಂಡವು ಆರೋಪಿಗಳಾದ ಬಸಪ್ಪ ಹಾಗೂ ಬಸವರಾಜ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.<br /> <br /> ಎರಡು ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.<br /> <br /> <strong>ಅಪಘಾತ: ಬೈಕ್ ಸವಾರ ಸಾವು</strong><br /> <strong>ಬೆಳಗಾವಿ:</strong> ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕಾಕತಿಯ ನಿವಾಸಿ ರಮೇಶ ತುಮರಿ (24) ಮೃತಪಟ್ಟಿದ್ದು ಹಿಂಬದಿ ಸವಾರ ಅಮರ ತುಮರಿ (24) ತೀವ್ರವಾಗಿ ಗಾಯಗೊಂಡಿದ್ದಾನೆ.<br /> <br /> ಲಾರಿ ಚಾಲಕ ಖಾನಾಪುರದ ನಿವಾಸಿ ಉಮೇಶ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.<br /> ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಕಾರ್ಖಾನೆಗಳ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದ್ಯಮಬಾಗ ಠಾಣೆ ಪೊಲೀಸರು, ಅವರಿಂದ 12.70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಉದ್ಯಮಬಾಗದ ನಿವಾಸಿಗಳಾದ ಬಸಪ್ಪ ಕರ್ಕಾಳಿ ಹಾಗೂ ಬಸವರಾಜ ಗುಜನಾಳ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಒಂದು ಟಿಪ್ಪರ್, ಒಂದು ಟಾಟಾ ಸುಮೋ, ಕಬ್ಬಿಣದ ಕಲ್ಲುಗಳು ಸೇರಿದಂತೆ ಒಟ್ಟು 12.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.<br /> <br /> ದಾಮೋದರ್ ಎಂಜಿನಿಯರಿಂಗ್ ವರ್ಕ್ಸ್ ಹಾಗೂ ಬೆಳಗಾವಿ ಕೋಲ್ ಆ್ಯಂಡ್ ಕೋಕ್ ಗ್ರಾಹಕರ ಸಂಘದ ಕಾರ್ಖಾನೆಗಳಲ್ಲಿನ ಬಿಡಿ ಭಾಗಗಳ ಕಳ್ಳತನ ನಡೆದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ಉದ್ಯಮಬಾಗ ಠಾಣೆಯಲ್ಲಿ ದಾಖಲಾಗಿತ್ತು.<br /> <br /> ಈ ಕುರಿತು ತನಿಖೆ ಕೈಗೊಂಡ ಉದ್ಯಮಬಾಗ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅರುಣಕುಮಾರ ಕೋಳೂರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಪ್ಪ ನಾಯಕ, ಎಎಸ್ಐ ಡಿ.ಡಿ. ಭಾವಿಹಾಳ, ಸಿ.ಎಂ. ಲಕ್ಷ್ಮೇಶ್ವರ, ವಿಜಯ ಬಡವನ್ನವರ, ಕೆ.ಕೆ. ಸವದತ್ತಿ, ವಿ.ಎಂ. ದಾನವಾಡ ಹಾಗೂ ಎಸ್.ಕೆ. ಗುಂಡ್ಲೂರ ನೇತೃತ್ವದ ತಂಡವು ಆರೋಪಿಗಳಾದ ಬಸಪ್ಪ ಹಾಗೂ ಬಸವರಾಜ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.<br /> <br /> ಎರಡು ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.<br /> <br /> <strong>ಅಪಘಾತ: ಬೈಕ್ ಸವಾರ ಸಾವು</strong><br /> <strong>ಬೆಳಗಾವಿ:</strong> ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕಾಕತಿಯ ನಿವಾಸಿ ರಮೇಶ ತುಮರಿ (24) ಮೃತಪಟ್ಟಿದ್ದು ಹಿಂಬದಿ ಸವಾರ ಅಮರ ತುಮರಿ (24) ತೀವ್ರವಾಗಿ ಗಾಯಗೊಂಡಿದ್ದಾನೆ.<br /> <br /> ಲಾರಿ ಚಾಲಕ ಖಾನಾಪುರದ ನಿವಾಸಿ ಉಮೇಶ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.<br /> ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>