<p>ಅಚ್ಚುಕಟ್ಟು ನಿರೂಪಣೆ.ಅಚ್ಚುಕಟ್ಟು ಅಭಿನಯ. ಪರಿಣಾಮಕಾರಿ ಸಂಗೀತ.<br /> ‘ಕಾಲ್ಗೆಜ್ಜೆ’ ಸಿನಿಮಾದ ಪ್ರಥಮ ಪ್ರದರ್ಶನ ನೋಡಿದ ಉದ್ಯಮದ ಪ್ರತಿನಿಧಿನಗಳ ಮೊದಲ ಪ್ರತಿಕ್ರಿಯೆಯಿದು. ಹಿರಿಯ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್, ನಾಗತಿಹಳ್ಳಿ ಚಂದ್ರಶೇಖರ್, ಎಸ್.ಮಹೇಂದರ್, ಸಂಗೀತ ನಿರ್ದೇಶಕ ಹಂಸಲೇಖಾ ಸೇರಿದಂತೆ ಚಿತ್ರರಂಗದ ಅನೇಕರು ‘ಕಾಲ್ಗೆಜ್ಜೆ’ ನೋಡಿದರು, ಚಿತ್ರತಂಡದ ಬೆನ್ನು ತಟ್ಟಿದರು. <br /> <br /> ಬಂಗಾರು ‘ಕಾಲ್ಗೆಜ್ಜೆ’ ಚಿತ್ರದ ನಿರ್ದೇಶಕ. ಮಹೇಂದರ್ ಗರಡಿಯಲ್ಲಿ ಪಳಗಿರುವ ಅವರು ಮಹತ್ವಾಕಾಂಕ್ಷೆಯಿಂದ ಮಾಡಿರುವ ಚಿತ್ರ ‘ಕಾಲ್ಗೆಜ್ಜೆ’. ಶಿಷ್ಯನ ಮೇಲಿನ ವಾತ್ಸಲ್ಯ ಹಾಗೂ ಕಾಳಜಿ ಮಹೇಂದರ್ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಕಾಲ್ಗೆಜ್ಜೆಯನ್ನು ಮೆಚ್ಚಿಕೊಂಡ ಮಹೇಂದರ್ ಹೇಳಿದ್ದು- ‘ಎಲ್ಲ ಒಳ್ಳೆಯ ಸಿನಿಮಾಗಳಲ್ಲೂ ಕರೆಕ್ಷನ್ ಎನ್ನುವುದು ಇದ್ದೇ ಇರುತ್ತದೆ. ಬಾಲಿವುಡ್ನ ಟೈಟಾನಿಕ್ ಚಿತ್ರ ಕೂಡ ಪರಿಷ್ಕಾರಕ್ಕೆ ಹೊರತಲ್ಲ’ ಎಂದು ಸೂಚ್ಯವಾಗಿ ಹೇಳಿದರು.</p>.<p>‘ಒಳ್ಳೆಯ ಚಿತ್ರಗಳನ್ನು ಮಾಡಿದರಷ್ಟೇ ಸಾಲದು. ಅವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನವೂ ಅತ್ಯಂತ ಮುಖ್ಯವಾದುದು’ ಎನ್ನುವ ಮಹೇಂದರ್ ಮಾತುಗಳಲ್ಲಿ ಸದಭಿರುಚಿಯ ಚಿತ್ರಗಳ ಬಗ್ಗೆ ಕಾಳಜಿಯಿತ್ತು. <br /> <br /> ಹಂಸಲೇಖಾ ಅವರಿಗೆ ಗಂಧರ್ವ ಅವರ ಸಂಗೀತ ಇಷ್ಟವಾದಂತಿತ್ತು. ‘ಗಂಧರ್ವ ಇನ್ನಷ್ಟು ಒಳ್ಳೆಯ ಅವಕಾಶಗಳಿಗೆ ಅರ್ಹರು’ ಎಂದವರು ಪ್ರಶಂಸೆಯ ಮಾತುಗಳನ್ನಾಡಿದರು.<br /> <br /> ಅನುಭವಿ ನಿರ್ಮಾಪಕ ಎಸ್.ವಿ.ಬಾಬು ‘ಕಾಲ್ಗೆಜ್ಜೆ’ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಬಿಡುಗಡೆ ತುಸು ಸಲೀಸಾಗಿದೆ. ಸಿನಿಮಾ ಬಿಡುಗಡೆಯ ಸಂಕಷ್ಟಗಳ ಬಗ್ಗೆ ಮಾತನಾಡಿದ ಬಾಬು- ‘ಒಂದು ಸಿನಿಮಾದಲ್ಲಿ, ನಿರ್ಮಾಣ ಎನ್ನುವುದು ಶೇ.25ರಷ್ಟು ಭಾಗ. ಉಳಿದ ಮುಕ್ಕಾಲು ಪಾಲು ಮಾರ್ಕೆಟಿಂಗ್ ಹಾಗೂ ತೆರೆಕಾಣಿಸುವ ಪ್ರಕ್ರಿಯೆಗಳಾಗಿರುತ್ತವೆ’ ಎಂದರು.<br /> <br /> ಅಂದಹಾಗೆ, ವಿಶ್ವಾಸ್, ರೂಪಿಕಾ, ಅನಂತನಾಗ್, ಸುಮಿತ್ರಾ, ತಬಲಾ ನಾಣಿ, ನೀನಾಸಂ ಅಶ್ವಥ್ ಮುಂತಾದವರು ತಾರಾಗಣದಲ್ಲಿರುವ ‘ಕಾಲ್ಗೆಜ್ಜೆ’ ಚಿತ್ರ ಇಂದು (ಜ.4) ತೆರೆಕಾಣುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಚ್ಚುಕಟ್ಟು ನಿರೂಪಣೆ.ಅಚ್ಚುಕಟ್ಟು ಅಭಿನಯ. ಪರಿಣಾಮಕಾರಿ ಸಂಗೀತ.<br /> ‘ಕಾಲ್ಗೆಜ್ಜೆ’ ಸಿನಿಮಾದ ಪ್ರಥಮ ಪ್ರದರ್ಶನ ನೋಡಿದ ಉದ್ಯಮದ ಪ್ರತಿನಿಧಿನಗಳ ಮೊದಲ ಪ್ರತಿಕ್ರಿಯೆಯಿದು. ಹಿರಿಯ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್, ನಾಗತಿಹಳ್ಳಿ ಚಂದ್ರಶೇಖರ್, ಎಸ್.ಮಹೇಂದರ್, ಸಂಗೀತ ನಿರ್ದೇಶಕ ಹಂಸಲೇಖಾ ಸೇರಿದಂತೆ ಚಿತ್ರರಂಗದ ಅನೇಕರು ‘ಕಾಲ್ಗೆಜ್ಜೆ’ ನೋಡಿದರು, ಚಿತ್ರತಂಡದ ಬೆನ್ನು ತಟ್ಟಿದರು. <br /> <br /> ಬಂಗಾರು ‘ಕಾಲ್ಗೆಜ್ಜೆ’ ಚಿತ್ರದ ನಿರ್ದೇಶಕ. ಮಹೇಂದರ್ ಗರಡಿಯಲ್ಲಿ ಪಳಗಿರುವ ಅವರು ಮಹತ್ವಾಕಾಂಕ್ಷೆಯಿಂದ ಮಾಡಿರುವ ಚಿತ್ರ ‘ಕಾಲ್ಗೆಜ್ಜೆ’. ಶಿಷ್ಯನ ಮೇಲಿನ ವಾತ್ಸಲ್ಯ ಹಾಗೂ ಕಾಳಜಿ ಮಹೇಂದರ್ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಕಾಲ್ಗೆಜ್ಜೆಯನ್ನು ಮೆಚ್ಚಿಕೊಂಡ ಮಹೇಂದರ್ ಹೇಳಿದ್ದು- ‘ಎಲ್ಲ ಒಳ್ಳೆಯ ಸಿನಿಮಾಗಳಲ್ಲೂ ಕರೆಕ್ಷನ್ ಎನ್ನುವುದು ಇದ್ದೇ ಇರುತ್ತದೆ. ಬಾಲಿವುಡ್ನ ಟೈಟಾನಿಕ್ ಚಿತ್ರ ಕೂಡ ಪರಿಷ್ಕಾರಕ್ಕೆ ಹೊರತಲ್ಲ’ ಎಂದು ಸೂಚ್ಯವಾಗಿ ಹೇಳಿದರು.</p>.<p>‘ಒಳ್ಳೆಯ ಚಿತ್ರಗಳನ್ನು ಮಾಡಿದರಷ್ಟೇ ಸಾಲದು. ಅವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನವೂ ಅತ್ಯಂತ ಮುಖ್ಯವಾದುದು’ ಎನ್ನುವ ಮಹೇಂದರ್ ಮಾತುಗಳಲ್ಲಿ ಸದಭಿರುಚಿಯ ಚಿತ್ರಗಳ ಬಗ್ಗೆ ಕಾಳಜಿಯಿತ್ತು. <br /> <br /> ಹಂಸಲೇಖಾ ಅವರಿಗೆ ಗಂಧರ್ವ ಅವರ ಸಂಗೀತ ಇಷ್ಟವಾದಂತಿತ್ತು. ‘ಗಂಧರ್ವ ಇನ್ನಷ್ಟು ಒಳ್ಳೆಯ ಅವಕಾಶಗಳಿಗೆ ಅರ್ಹರು’ ಎಂದವರು ಪ್ರಶಂಸೆಯ ಮಾತುಗಳನ್ನಾಡಿದರು.<br /> <br /> ಅನುಭವಿ ನಿರ್ಮಾಪಕ ಎಸ್.ವಿ.ಬಾಬು ‘ಕಾಲ್ಗೆಜ್ಜೆ’ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಬಿಡುಗಡೆ ತುಸು ಸಲೀಸಾಗಿದೆ. ಸಿನಿಮಾ ಬಿಡುಗಡೆಯ ಸಂಕಷ್ಟಗಳ ಬಗ್ಗೆ ಮಾತನಾಡಿದ ಬಾಬು- ‘ಒಂದು ಸಿನಿಮಾದಲ್ಲಿ, ನಿರ್ಮಾಣ ಎನ್ನುವುದು ಶೇ.25ರಷ್ಟು ಭಾಗ. ಉಳಿದ ಮುಕ್ಕಾಲು ಪಾಲು ಮಾರ್ಕೆಟಿಂಗ್ ಹಾಗೂ ತೆರೆಕಾಣಿಸುವ ಪ್ರಕ್ರಿಯೆಗಳಾಗಿರುತ್ತವೆ’ ಎಂದರು.<br /> <br /> ಅಂದಹಾಗೆ, ವಿಶ್ವಾಸ್, ರೂಪಿಕಾ, ಅನಂತನಾಗ್, ಸುಮಿತ್ರಾ, ತಬಲಾ ನಾಣಿ, ನೀನಾಸಂ ಅಶ್ವಥ್ ಮುಂತಾದವರು ತಾರಾಗಣದಲ್ಲಿರುವ ‘ಕಾಲ್ಗೆಜ್ಜೆ’ ಚಿತ್ರ ಇಂದು (ಜ.4) ತೆರೆಕಾಣುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>