<p><strong>ಶ್ರೀನಗರ, ಜಮ್ಮು, ಶೀಮ್ಲಾ(ಪಿಟಿಐ, ಐಎಎನ್ಎಸ್): </strong>ಉತ್ತರ ಭಾರದಲ್ಲಿ ಚಳಿ ತನ್ನ ಅಲೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ಭಾನುವಾರ ಪ್ರಸಕ್ತ ಸಾಲಿನ ಪ್ರಥಮ ಹಿಮಪಾತ ಉಂಟಾಗಿದ್ದು, ಅಲ್ಲಿನ ನಿವಾಸಿಗಳು, ಪ್ರವಾಸಿಗರು ಹರ್ಷ ಘೋಷಗಳೊಂದಿಗೆ ಹುರುಪಿನಿಂದಲೇ ಸ್ವಾಗತಿಸಿದ್ದಾರೆ.</p>.<p><br /> ಪ್ರಸ್ತುತ ಚಳಿಗಾಲದ ಪ್ರಥಮ ಹಿಮಪಾತ ಶ್ರೀನಗರ, ಶೀಮ್ಲಾ ಸೇರಿದಂತೆ ಪ್ರಮುಖ ನಗರಗಳ ವ್ಯಾಪ್ತಿ ಉಂಟಾಗಿದೆ. ಲಡಾಖ್ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಹಿಮ ಬಿದ್ದಿದೆ.<br /> <br /> ಹಿಮಪಾತದಿಂದಾಗಿ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ ಆವರಿಸಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.<br /> <br /> ಭಾನುವಾರ ಪೂರ್ಣ ಹಿಮಪಾತ ಉಂಟಾಗಲಿದ್ದು, ಸಂಜೆ ಇದರ ಪ್ರಮಾಣ ಇನ್ನೂ ಹೆಚ್ಚಾಗುವ ಸಾದ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.<br /> <br /> ಕಳೆದ 20 ದಿನಗಳಿಂದ ಉಂಟಾಗಿರುವ ಹೆಚ್ಚಿನ ಶೀತ ವಾತಾವರಣದಿಂದ ಹಲವು ಜನ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಜ್ವರ ಮತ್ತು ನೆಗಡಿ ತೊಂದರೆ ಉಂಟಾಗುತ್ತಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಮೊಬೈಲ್ ಟ್ರಾಫಿಕ್ ಜಾಮ್!: </strong>ಪ್ರಥಮ ಹಿಮಪಾತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಶುಭಾಶಯ ಕೋರಿ ಹರಿದಾಡುತ್ತಿರುವ ಸಂದೇಶಗಳಿಂದ(ಎಸ್ಎಂಎಸ್) ಮೊಬೈಲ್ ಟ್ರಾಫಿಕ್ ಜಾಮ್! ಉಂಟಾಗಿದೆ ಎಂದು ಹೇಳಿದ್ದಾರೆ.<br /> <br /> <strong>9 ಜನ ಸಾವು: </strong>ಜಮ್ಮು ವ್ಯಾಪ್ತಿಯ ಕಿಷ್ತ್ವಾರ್ ಜಿಲ್ಲೆಯಲ್ಲಿ ಹಿಮಪಾತ ಉಂಟಾಗಿದ್ದ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿ ಅಪಘಾದಿಂದ ವಾಹನವೊಂದು ಕಮರಿಗೆ ಉರುಳಿ 9 ಜನ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಮಿಲಿಟರಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ, ಜಮ್ಮು, ಶೀಮ್ಲಾ(ಪಿಟಿಐ, ಐಎಎನ್ಎಸ್): </strong>ಉತ್ತರ ಭಾರದಲ್ಲಿ ಚಳಿ ತನ್ನ ಅಲೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ಭಾನುವಾರ ಪ್ರಸಕ್ತ ಸಾಲಿನ ಪ್ರಥಮ ಹಿಮಪಾತ ಉಂಟಾಗಿದ್ದು, ಅಲ್ಲಿನ ನಿವಾಸಿಗಳು, ಪ್ರವಾಸಿಗರು ಹರ್ಷ ಘೋಷಗಳೊಂದಿಗೆ ಹುರುಪಿನಿಂದಲೇ ಸ್ವಾಗತಿಸಿದ್ದಾರೆ.</p>.<p><br /> ಪ್ರಸ್ತುತ ಚಳಿಗಾಲದ ಪ್ರಥಮ ಹಿಮಪಾತ ಶ್ರೀನಗರ, ಶೀಮ್ಲಾ ಸೇರಿದಂತೆ ಪ್ರಮುಖ ನಗರಗಳ ವ್ಯಾಪ್ತಿ ಉಂಟಾಗಿದೆ. ಲಡಾಖ್ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಹಿಮ ಬಿದ್ದಿದೆ.<br /> <br /> ಹಿಮಪಾತದಿಂದಾಗಿ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ ಆವರಿಸಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.<br /> <br /> ಭಾನುವಾರ ಪೂರ್ಣ ಹಿಮಪಾತ ಉಂಟಾಗಲಿದ್ದು, ಸಂಜೆ ಇದರ ಪ್ರಮಾಣ ಇನ್ನೂ ಹೆಚ್ಚಾಗುವ ಸಾದ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.<br /> <br /> ಕಳೆದ 20 ದಿನಗಳಿಂದ ಉಂಟಾಗಿರುವ ಹೆಚ್ಚಿನ ಶೀತ ವಾತಾವರಣದಿಂದ ಹಲವು ಜನ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಜ್ವರ ಮತ್ತು ನೆಗಡಿ ತೊಂದರೆ ಉಂಟಾಗುತ್ತಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಮೊಬೈಲ್ ಟ್ರಾಫಿಕ್ ಜಾಮ್!: </strong>ಪ್ರಥಮ ಹಿಮಪಾತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಶುಭಾಶಯ ಕೋರಿ ಹರಿದಾಡುತ್ತಿರುವ ಸಂದೇಶಗಳಿಂದ(ಎಸ್ಎಂಎಸ್) ಮೊಬೈಲ್ ಟ್ರಾಫಿಕ್ ಜಾಮ್! ಉಂಟಾಗಿದೆ ಎಂದು ಹೇಳಿದ್ದಾರೆ.<br /> <br /> <strong>9 ಜನ ಸಾವು: </strong>ಜಮ್ಮು ವ್ಯಾಪ್ತಿಯ ಕಿಷ್ತ್ವಾರ್ ಜಿಲ್ಲೆಯಲ್ಲಿ ಹಿಮಪಾತ ಉಂಟಾಗಿದ್ದ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿ ಅಪಘಾದಿಂದ ವಾಹನವೊಂದು ಕಮರಿಗೆ ಉರುಳಿ 9 ಜನ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಮಿಲಿಟರಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>