<p><strong>ಬೆಂಗಳೂರು:</strong> ಕ್ಯಾನ್ಸರ್ ರೋಗಿಗಳಿಗೆ ನೆರವಾಗುವುದಕ್ಕಾಗಿ ಯುವಕರನ್ನು ಹುರಿದುಂಬಿಸಲು ನಗರದ `ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ~ಯು ಯೋಜನೆಯೊಂದನ್ನು ರೂಪಿಸಿದೆ. </p>.<p><br /> ಅಂತಿಮ ದಿನಗಳನ್ನು ಎಣಿಸುತ್ತಿರುವ ಕ್ಯಾನ್ಸರ್ ರೋಗಿಗಳ ದಿನಾಚರಣೆ (ಹಾಸ್ಟೈಸ್ ಅಂಡ್ ಪಾಲಿಯೇಟಿವ್ ಡೇ) ಅಂಗವಾಗಿ ಅ.8ರಂದು (ಶನಿವಾರ) ನಗರದ ನಾಲ್ಕು ಪ್ರಮುಖ ಕಾಲೇಜುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕೆ ಮಾಡುವ ಕುರಿತು ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ. <br /> <br /> `ಹಲವು ಕಾಯಿಲೆಗಳು, ಹಲವು ಜೀವಗಳು, ಹಲವು ಧ್ವನಿಗಳು, ಸಂವಹನ ನಡೆಸಲಾಗದ ರೋಗಿಗಳಿಗೆ ಅಗತ್ಯ ಆರೈಕೆ~ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. <br /> <br /> ಸಂಸ್ಥೆಯ ಪ್ರಾಧ್ಯಾಪಕ ಡಾ.ಲಿಂಗೇಗೌಡ ಈ ಕುರಿತು ಮಾತನಾಡಿ, `ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಕೊಳ್ಳಲು ಸ್ವಯಂಸೇವಕರ ಕೊರತೆ ಇದೆ. ಆದ್ದರಿಂದ `ವಿದ್ಯಾರ್ಥಿ ಸ್ವಯಂಸೇವಕ~ರನ್ನು ಈ ಕೆಲಸಕ್ಕಾಗಿ ನಿಯೋಜಿಸಬೇಕೆಂದು ನಿರ್ಧರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮಿಂದಾದ ನೆರವನ್ನು ಈ ರೋಗಿಗಳಿಗೆ ನೀಡಬಹುದು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವುದು, ಔಷಧಿ ಅಂಗಡಿಯಿಂದ ಔಷಧಿಗಳನ್ನು ಮನೆಗೆ ಪೂರೈಸುವ ಕೆಲಸವನ್ನೂ ಮಾಡಬಹುದು. ಅಂಥವರು ಕಿದ್ವಾಯಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯಬಹುದು~ ಎಂದು ಹೇಳಿದರು.<br /> <br /> `ಕ್ಯಾನ್ಸರ್ ಪೀಡಿತರು ತಮ್ಮ ಉಳಿದ ದಿನಗಳನ್ನು ಸಹನೀಯವಾಗಿ ಕಳೆಯುವುದಕ್ಕಾಗಿ ಅವರನ್ನು ನೋಡಿಕೊಳ್ಳುವವರ ಅಗತ್ಯವಿದೆ. ದೇಶದಾದ್ಯಂತ ಕೇವಲ ಶೇ 2ರಿಂದ 3ರಷ್ಟು ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಎಂದರೆ ಅವರ ಜೀವನಕ್ಕೆ ಇನ್ನಷ್ಟು ದಿನಗಳನ್ನು ಸೇರಿಸಿದಂತೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕ್ಯಾನ್ಸರ್ ರೋಗಿಗಳಿಗೆ ನೆರವಾಗುವುದಕ್ಕಾಗಿ ಯುವಕರನ್ನು ಹುರಿದುಂಬಿಸಲು ನಗರದ `ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ~ಯು ಯೋಜನೆಯೊಂದನ್ನು ರೂಪಿಸಿದೆ. </p>.<p><br /> ಅಂತಿಮ ದಿನಗಳನ್ನು ಎಣಿಸುತ್ತಿರುವ ಕ್ಯಾನ್ಸರ್ ರೋಗಿಗಳ ದಿನಾಚರಣೆ (ಹಾಸ್ಟೈಸ್ ಅಂಡ್ ಪಾಲಿಯೇಟಿವ್ ಡೇ) ಅಂಗವಾಗಿ ಅ.8ರಂದು (ಶನಿವಾರ) ನಗರದ ನಾಲ್ಕು ಪ್ರಮುಖ ಕಾಲೇಜುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕೆ ಮಾಡುವ ಕುರಿತು ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ. <br /> <br /> `ಹಲವು ಕಾಯಿಲೆಗಳು, ಹಲವು ಜೀವಗಳು, ಹಲವು ಧ್ವನಿಗಳು, ಸಂವಹನ ನಡೆಸಲಾಗದ ರೋಗಿಗಳಿಗೆ ಅಗತ್ಯ ಆರೈಕೆ~ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. <br /> <br /> ಸಂಸ್ಥೆಯ ಪ್ರಾಧ್ಯಾಪಕ ಡಾ.ಲಿಂಗೇಗೌಡ ಈ ಕುರಿತು ಮಾತನಾಡಿ, `ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಕೊಳ್ಳಲು ಸ್ವಯಂಸೇವಕರ ಕೊರತೆ ಇದೆ. ಆದ್ದರಿಂದ `ವಿದ್ಯಾರ್ಥಿ ಸ್ವಯಂಸೇವಕ~ರನ್ನು ಈ ಕೆಲಸಕ್ಕಾಗಿ ನಿಯೋಜಿಸಬೇಕೆಂದು ನಿರ್ಧರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮಿಂದಾದ ನೆರವನ್ನು ಈ ರೋಗಿಗಳಿಗೆ ನೀಡಬಹುದು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವುದು, ಔಷಧಿ ಅಂಗಡಿಯಿಂದ ಔಷಧಿಗಳನ್ನು ಮನೆಗೆ ಪೂರೈಸುವ ಕೆಲಸವನ್ನೂ ಮಾಡಬಹುದು. ಅಂಥವರು ಕಿದ್ವಾಯಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯಬಹುದು~ ಎಂದು ಹೇಳಿದರು.<br /> <br /> `ಕ್ಯಾನ್ಸರ್ ಪೀಡಿತರು ತಮ್ಮ ಉಳಿದ ದಿನಗಳನ್ನು ಸಹನೀಯವಾಗಿ ಕಳೆಯುವುದಕ್ಕಾಗಿ ಅವರನ್ನು ನೋಡಿಕೊಳ್ಳುವವರ ಅಗತ್ಯವಿದೆ. ದೇಶದಾದ್ಯಂತ ಕೇವಲ ಶೇ 2ರಿಂದ 3ರಷ್ಟು ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಎಂದರೆ ಅವರ ಜೀವನಕ್ಕೆ ಇನ್ನಷ್ಟು ದಿನಗಳನ್ನು ಸೇರಿಸಿದಂತೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>