<p><strong>ಯಲ್ಲಾಪುರ</strong>: ಪ್ರತಿವರ್ಷ ಕೊಯ್ಲಿಗೆ ಬರುತ್ತಿದ್ದ ಗಜರಾಜ ಸುಮಾರು ಆರು ತಿಂಗಳು ಮೊದಲೇ ಆಗಮಿಸಿ ತೋಟ ಗದ್ದೆಗಳನ್ನು ನಾಶ ಮಾಡುತ್ತಿರುವ ಘಟನೆ ಕಿರವತ್ತಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ.<br /> <br /> ಕಿರವತ್ತಿ ಪಂಚಾಯಿತಿ ವ್ಯಾಪ್ತಿಯ ಸೋಮಾಪುರ, ಯಲವಳ್ಳಿ, ಪಾನಿ ಗುಂಡಿ, ಹುಣಸಗೇರಿ ಹಾಗೂ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿವೆ.<br /> <br /> ರೈತರ ಹೊಲ. ತೋಟಗಳನ್ನು ನಾಶವಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶ ಹಾನಿಯನ್ನುಂಟು ಮಾಡಿದರೆ. ಕಳೆದೆರಡು ದಿನಗಳ ಹಿಂದೆ ಸುಮಾರು ಆರು ಆನೆಗಳು ಹಾಗೂ 2 ಮರಿಗಳಿದ್ದ ಕಾಡಾನೆಗಳ ತಂಡವು ಸೋಮಾಪುರದಲ್ಲಿನ ವಿಜಯಕುಮಾರ ಹಿರೇಮಠ ಎಂಬವರ ತೋಟಕ್ಕೆ ದಾಳಿಯಿಟ್ಟಿದ್ದು ಸುಮಾರು 50 ರಷ್ಟು ಬಾಳೆಮರಗಳು, 30 ಅಡಕೆ ಗಿಡಗಳು ಹಾಗೂ ಕೋಕ್ಕೋ ಪ್ಲಾಂಟೇಶನ್ ಹಾಳುಗೆಡವಿದೆ.<br /> <br /> ರಾತ್ರಿ ಒಂದೂವರೆಯ ಸುಮಾರಿಗೆ ದಾಳಿಯಿಟ್ಟ ಆನೆಗಳನ್ನು ಊರವರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆದರಿಸಿ ಓಡಿಸಿದರು. ಒಟ್ಟು 16 ಆನೆಗಳು ಇದ್ದು, ಬೇರೆ ಬೇರೆ ತಂಡಗಳಲ್ಲಿ ಆಹಾರಕ್ಕಾಗಿ ಹೋಗುತ್ತವೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.<br /> <br /> ಸದ್ಯ ಹುಣಸಗೇರಿ, ಪಾನಿಗುಂಡಿ ಅರಣ್ಯ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿರುವ ಆನೆಗಳು ರಾತ್ರಿಯಾದೊಡನೆ ರೈತರ ಹೊಲಗಳಿಗೆ ದಾಳಿಯಿಡುತ್ತಿವೆ.<br /> <br /> ಈ ದಿನಗಳಲ್ಲಿ ಜೊಯಿಡಾ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬಿದಿರು ಹಾಗೂ ಇನ್ನಿತರ ಆಹಾರಗಳನ್ನು ತಿನ್ನುತ್ತಿದ್ದ ಆನೆಗಳು ಪ್ರತಿವರ್ಷ ಬತ್ತದ ಕೊಯ್ಲಿನ ಸಮಯಕ್ಕೆ ಹಾಜರಾಗುತ್ತಿದ್ದವು. <br /> <br /> ಆ ಪ್ರದೇಶಗಳಲ್ಲಿಯೂ ಬಿದಿರು ಕಳೆದ ವರ್ಷ ಹೂ ಬಿಟ್ಟು ನಾಶವಾದ ನಂತರದಲ್ಲಿ ಅವುಗಳಿಗೆ ಆಹಾರ ಕೊರತೆಯುಂಟಾಗಿ ಅವಧಿಗಿಂತ ಮೊದಲೇ ಬಂದಿವೆ ಎನ್ನಲಾಗಿದೆ.<br /> <br /> ಬಿತ್ತನೆ ಕಾಲದಲ್ಲಿ ಅತಿ ವೃಷ್ಟಿಯಿಂದ ಹೊಲಗಳಲ್ಲಿ ಬಿತ್ತನೆ ಮಾಡಲಾಗದೆ ರೈತರು ಕಂಗಾಲಾಗಿದ್ದರೆ, ಈಗ ಕಾಡಾನೆಗಳು ದಾಳಿ ನಡೆಸುತ್ತಿರುವುದು ಚಿಂತೆಗೀಡು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ಪ್ರತಿವರ್ಷ ಕೊಯ್ಲಿಗೆ ಬರುತ್ತಿದ್ದ ಗಜರಾಜ ಸುಮಾರು ಆರು ತಿಂಗಳು ಮೊದಲೇ ಆಗಮಿಸಿ ತೋಟ ಗದ್ದೆಗಳನ್ನು ನಾಶ ಮಾಡುತ್ತಿರುವ ಘಟನೆ ಕಿರವತ್ತಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ.<br /> <br /> ಕಿರವತ್ತಿ ಪಂಚಾಯಿತಿ ವ್ಯಾಪ್ತಿಯ ಸೋಮಾಪುರ, ಯಲವಳ್ಳಿ, ಪಾನಿ ಗುಂಡಿ, ಹುಣಸಗೇರಿ ಹಾಗೂ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿವೆ.<br /> <br /> ರೈತರ ಹೊಲ. ತೋಟಗಳನ್ನು ನಾಶವಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶ ಹಾನಿಯನ್ನುಂಟು ಮಾಡಿದರೆ. ಕಳೆದೆರಡು ದಿನಗಳ ಹಿಂದೆ ಸುಮಾರು ಆರು ಆನೆಗಳು ಹಾಗೂ 2 ಮರಿಗಳಿದ್ದ ಕಾಡಾನೆಗಳ ತಂಡವು ಸೋಮಾಪುರದಲ್ಲಿನ ವಿಜಯಕುಮಾರ ಹಿರೇಮಠ ಎಂಬವರ ತೋಟಕ್ಕೆ ದಾಳಿಯಿಟ್ಟಿದ್ದು ಸುಮಾರು 50 ರಷ್ಟು ಬಾಳೆಮರಗಳು, 30 ಅಡಕೆ ಗಿಡಗಳು ಹಾಗೂ ಕೋಕ್ಕೋ ಪ್ಲಾಂಟೇಶನ್ ಹಾಳುಗೆಡವಿದೆ.<br /> <br /> ರಾತ್ರಿ ಒಂದೂವರೆಯ ಸುಮಾರಿಗೆ ದಾಳಿಯಿಟ್ಟ ಆನೆಗಳನ್ನು ಊರವರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆದರಿಸಿ ಓಡಿಸಿದರು. ಒಟ್ಟು 16 ಆನೆಗಳು ಇದ್ದು, ಬೇರೆ ಬೇರೆ ತಂಡಗಳಲ್ಲಿ ಆಹಾರಕ್ಕಾಗಿ ಹೋಗುತ್ತವೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.<br /> <br /> ಸದ್ಯ ಹುಣಸಗೇರಿ, ಪಾನಿಗುಂಡಿ ಅರಣ್ಯ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿರುವ ಆನೆಗಳು ರಾತ್ರಿಯಾದೊಡನೆ ರೈತರ ಹೊಲಗಳಿಗೆ ದಾಳಿಯಿಡುತ್ತಿವೆ.<br /> <br /> ಈ ದಿನಗಳಲ್ಲಿ ಜೊಯಿಡಾ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬಿದಿರು ಹಾಗೂ ಇನ್ನಿತರ ಆಹಾರಗಳನ್ನು ತಿನ್ನುತ್ತಿದ್ದ ಆನೆಗಳು ಪ್ರತಿವರ್ಷ ಬತ್ತದ ಕೊಯ್ಲಿನ ಸಮಯಕ್ಕೆ ಹಾಜರಾಗುತ್ತಿದ್ದವು. <br /> <br /> ಆ ಪ್ರದೇಶಗಳಲ್ಲಿಯೂ ಬಿದಿರು ಕಳೆದ ವರ್ಷ ಹೂ ಬಿಟ್ಟು ನಾಶವಾದ ನಂತರದಲ್ಲಿ ಅವುಗಳಿಗೆ ಆಹಾರ ಕೊರತೆಯುಂಟಾಗಿ ಅವಧಿಗಿಂತ ಮೊದಲೇ ಬಂದಿವೆ ಎನ್ನಲಾಗಿದೆ.<br /> <br /> ಬಿತ್ತನೆ ಕಾಲದಲ್ಲಿ ಅತಿ ವೃಷ್ಟಿಯಿಂದ ಹೊಲಗಳಲ್ಲಿ ಬಿತ್ತನೆ ಮಾಡಲಾಗದೆ ರೈತರು ಕಂಗಾಲಾಗಿದ್ದರೆ, ಈಗ ಕಾಡಾನೆಗಳು ದಾಳಿ ನಡೆಸುತ್ತಿರುವುದು ಚಿಂತೆಗೀಡು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>