<p>ಬಸವಕಲ್ಯಾಣ: ಕುಟುಂಬದ ಸೌಖ್ಯಕ್ಕಾಗಿ ವಿಮೆ ಮಾಡಿಸುವುದು ಅತ್ಯವಶ್ಯಕವಾಗಿದೆ ಎಂದು ಭಾರತೀಯ ಜೀವವಿಮಾ ನಿಗಮದ ಶಾಖೆಯ ವ್ಯವಸ್ಥಾಪಕ ಕೆ.ಪಿ.ಪಂಡಿತ ಹೇಳಿದರು.<br /> <br /> ಇಲ್ಲಿನ ತ್ರಿಪುರಾಂತದಲ್ಲಿ ಈಚೆಗೆ ಹಮ್ಮಿಕೊಂಡ ಗ್ರಾಹಕರ ಸಭೆ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.<br /> <br /> ಮಕ್ಕಳ ವಿದ್ಯಾಭ್ಯಾಸಕ್ಕೆ, ವ್ಯಾಪಾರ ವೃದ್ಧಿಗೆ, ಮದುವೆಗೆ ಹೀಗೆ ಪ್ರತಿಯೊಂದು ಕಾರ್ಯಕ್ಕೆ ವಿಮೆಯ ಹಣ ಉಪಯೋಗಕ್ಕೆ ಬರುತ್ತದೆ. ಹಣ ಗಳಿಸುವುದಕ್ಕಿಂತ ಉಳಿಸುವುದು ಮುಖ್ಯವಾಗಿದ್ದು ಜೀವವಿಮಾ ನಿಗಮದ ಪಾಲಿಸಿದಾರರಾಗಿ ಹಣ ಕೂಡಿಡಬಹುದು.<br /> <br /> ಜೀವನದಲ್ಲಿ ಎದುರಾಗುವ ಸಂಕಟದ ಕ್ಷಣಗಳಿಗೆ ಮುಂಚೆಯೇ ವ್ಯವಸ್ಥೆ ಮಾಡಬೇಕು. ಪಾಲಿಸಿಗಳ ಮೇಲೆ ಸರಳ ಬಡ್ಡಿ ದರದಲ್ಲಿ ಸಾಲ ಸಹ ಪಡೆಯಬಹುದು ಎಂದು ತಿಳಿಸಿದರು.<br /> <br /> ಉತ್ತಮ ಸಾಧನೆ ಮಾಡಿದ ಏಜೆಂಟ್ರಾದ ಚಿತ್ರಶೇಖರ ಸೋನಾರ ಇವರಿಗೆ ಚೆರಮೆನ್ ಕ್ಲಬ್ ಸದಸ್ಯರನ್ನಾಗಿ ನೇಮಿಸಿ ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.<br /> <br /> ಉಪ ವ್ಯವಸ್ಥಾಪಕ ರವಿಕುಮಾರ ಮಾತನಾಡಿ 1956 ರಲ್ಲಿ ಜೀವ ವಿಮಾ ಕಂಪೆನಿ ಕೇವಲ 5 ಕೋಟಿ ಬಂಡವಾಳದೊಂದಿಗೆ ಆರಂಭವಾಗಿ ಇಂದು 14 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ. ರಾಷ್ಟ್ರದಲ್ಲಿ ದೊಡ್ಡ ಮತ್ತು ವಿಶ್ವಾಸಪಾತ್ರ ವಿಮಾ ಕಂಪೆನಿಯಾಗಿದೆ ಎಂದರು.<br /> <br /> ಅಭಿವೃದ್ಧಿ ಅಧಿಕಾರಿ ಕೆ.ಎನ್.ಮಡೋಳಿ ಮಾತನಾಡಿದರು. ಪ್ರಮುಖರಾದ ಗೋವಿಂದ ಚಾಮಲ್ಲೆ, ಅಹ್ಮದಸಾಬ್, ಬಾಬುರಾವ ಪಾಟೀಲ, ಹಣಮಂತಪ್ಪ ಇರಲೆ, ಭಾರತ ಬೊಕ್ಕೆ, ಬಸವರಾಜ ಉಪಸ್ಥಿತರಿದ್ದರು. ವಾಲ್ಮೀಕಿ ಖನಕೋರೆ ನಿರೂಪಿಸಿದರು. ರಾಜಕುಮಾರ ಇರಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಕುಟುಂಬದ ಸೌಖ್ಯಕ್ಕಾಗಿ ವಿಮೆ ಮಾಡಿಸುವುದು ಅತ್ಯವಶ್ಯಕವಾಗಿದೆ ಎಂದು ಭಾರತೀಯ ಜೀವವಿಮಾ ನಿಗಮದ ಶಾಖೆಯ ವ್ಯವಸ್ಥಾಪಕ ಕೆ.ಪಿ.ಪಂಡಿತ ಹೇಳಿದರು.<br /> <br /> ಇಲ್ಲಿನ ತ್ರಿಪುರಾಂತದಲ್ಲಿ ಈಚೆಗೆ ಹಮ್ಮಿಕೊಂಡ ಗ್ರಾಹಕರ ಸಭೆ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.<br /> <br /> ಮಕ್ಕಳ ವಿದ್ಯಾಭ್ಯಾಸಕ್ಕೆ, ವ್ಯಾಪಾರ ವೃದ್ಧಿಗೆ, ಮದುವೆಗೆ ಹೀಗೆ ಪ್ರತಿಯೊಂದು ಕಾರ್ಯಕ್ಕೆ ವಿಮೆಯ ಹಣ ಉಪಯೋಗಕ್ಕೆ ಬರುತ್ತದೆ. ಹಣ ಗಳಿಸುವುದಕ್ಕಿಂತ ಉಳಿಸುವುದು ಮುಖ್ಯವಾಗಿದ್ದು ಜೀವವಿಮಾ ನಿಗಮದ ಪಾಲಿಸಿದಾರರಾಗಿ ಹಣ ಕೂಡಿಡಬಹುದು.<br /> <br /> ಜೀವನದಲ್ಲಿ ಎದುರಾಗುವ ಸಂಕಟದ ಕ್ಷಣಗಳಿಗೆ ಮುಂಚೆಯೇ ವ್ಯವಸ್ಥೆ ಮಾಡಬೇಕು. ಪಾಲಿಸಿಗಳ ಮೇಲೆ ಸರಳ ಬಡ್ಡಿ ದರದಲ್ಲಿ ಸಾಲ ಸಹ ಪಡೆಯಬಹುದು ಎಂದು ತಿಳಿಸಿದರು.<br /> <br /> ಉತ್ತಮ ಸಾಧನೆ ಮಾಡಿದ ಏಜೆಂಟ್ರಾದ ಚಿತ್ರಶೇಖರ ಸೋನಾರ ಇವರಿಗೆ ಚೆರಮೆನ್ ಕ್ಲಬ್ ಸದಸ್ಯರನ್ನಾಗಿ ನೇಮಿಸಿ ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.<br /> <br /> ಉಪ ವ್ಯವಸ್ಥಾಪಕ ರವಿಕುಮಾರ ಮಾತನಾಡಿ 1956 ರಲ್ಲಿ ಜೀವ ವಿಮಾ ಕಂಪೆನಿ ಕೇವಲ 5 ಕೋಟಿ ಬಂಡವಾಳದೊಂದಿಗೆ ಆರಂಭವಾಗಿ ಇಂದು 14 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ. ರಾಷ್ಟ್ರದಲ್ಲಿ ದೊಡ್ಡ ಮತ್ತು ವಿಶ್ವಾಸಪಾತ್ರ ವಿಮಾ ಕಂಪೆನಿಯಾಗಿದೆ ಎಂದರು.<br /> <br /> ಅಭಿವೃದ್ಧಿ ಅಧಿಕಾರಿ ಕೆ.ಎನ್.ಮಡೋಳಿ ಮಾತನಾಡಿದರು. ಪ್ರಮುಖರಾದ ಗೋವಿಂದ ಚಾಮಲ್ಲೆ, ಅಹ್ಮದಸಾಬ್, ಬಾಬುರಾವ ಪಾಟೀಲ, ಹಣಮಂತಪ್ಪ ಇರಲೆ, ಭಾರತ ಬೊಕ್ಕೆ, ಬಸವರಾಜ ಉಪಸ್ಥಿತರಿದ್ದರು. ವಾಲ್ಮೀಕಿ ಖನಕೋರೆ ನಿರೂಪಿಸಿದರು. ರಾಜಕುಮಾರ ಇರಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>