<p><strong>ಮುಂಬೈ(ಪಿಟಿಐ</strong>): ದೇಶದ ಒಟ್ಟು 3.47 ಕೋಟಿ ರೈತರು ಇತ್ತೀಚಿನ ಕೃಷಿ ಸಾಲ ಮನ್ನಾ ಯೋಜನೆಯ ನೆರವು ಪಡೆದುಕೊಂಡಿದ್ದಾರೆ. ಆದರೆ, ಇವರಲ್ಲಿ ನೂರಾರು `ನಕಲಿ' ಫಲಾನುಭವಿಗಳೂ ಸೇರಿದ್ದಾರೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ರಾಜೀವ್ ಟಕ್ರು ಸೋಮವಾರ ಇಲ್ಲಿ ವರದಿಗಾರರಿಗೆ ತಿಳಿಸಿದರು.<br /> <br /> ಅನೇಕರು ಸಾಲ ಮನ್ನಾ ಯೋಜನೆಯನ್ನು ಅನುಕೂಲವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಬ್ಯಾಂಕುಗಳು ಇಂತಹ ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಆದರೆ, ಈ ನಕಲಿ ಫಲಾನುಭವಿಗಳ ಸಂಖ್ಯೆ ಕೆಲವು ನೂರರಷ್ಟು ಮಾತ್ರವೇ ಇದೆ ಎಂದರು.<br /> <br /> `ನಕಲಿ' ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲು ಬ್ಯಾಂಕುಗಳು ಈಗಾಗಲೇ ಕ್ರಮ ಕೈಗೊಂಡಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> 2008-09ನೇ ಸಾಲಿನಲ್ಲಿ ಪ್ರಕಟಿಸಿದ ರೂ56,000 ಕೋಟಿ ಸಾಲ ಮನ್ನಾ ಪ್ಯಾಕೇಜ್ನಲ್ಲಿ ಅಕ್ರಮ ನಡೆದಿದೆ ಎಂದು `ಸಿಎಜಿ' ವರದಿ ಹೇಳಿದೆ. ಈ ವರದಿ ಆಧರಿಸಿ ಪ್ರತಿ ಫಲಾನುಭವಿ ಕುರಿತೂ ಪ್ರತ್ಯೇಕ ತನಿಖೆ ನಡೆಸುವಂತೆ ಬ್ಯಾಂಕುಗಳಿಗೆ `ಆರ್ಬಿಐ' ಸೂಚಿಸಿದೆ.<br /> <br /> ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು ಜೂನ್ 30ರ ಒಳಗಾಗಿ ಹಣಕಾಸು ಸಚಿವಾಲಯಕ್ಕೆ ಲೆಕ್ಕಪತ್ರ ವರದಿ ಸಲ್ಲಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ(ಪಿಟಿಐ</strong>): ದೇಶದ ಒಟ್ಟು 3.47 ಕೋಟಿ ರೈತರು ಇತ್ತೀಚಿನ ಕೃಷಿ ಸಾಲ ಮನ್ನಾ ಯೋಜನೆಯ ನೆರವು ಪಡೆದುಕೊಂಡಿದ್ದಾರೆ. ಆದರೆ, ಇವರಲ್ಲಿ ನೂರಾರು `ನಕಲಿ' ಫಲಾನುಭವಿಗಳೂ ಸೇರಿದ್ದಾರೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ರಾಜೀವ್ ಟಕ್ರು ಸೋಮವಾರ ಇಲ್ಲಿ ವರದಿಗಾರರಿಗೆ ತಿಳಿಸಿದರು.<br /> <br /> ಅನೇಕರು ಸಾಲ ಮನ್ನಾ ಯೋಜನೆಯನ್ನು ಅನುಕೂಲವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಬ್ಯಾಂಕುಗಳು ಇಂತಹ ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಆದರೆ, ಈ ನಕಲಿ ಫಲಾನುಭವಿಗಳ ಸಂಖ್ಯೆ ಕೆಲವು ನೂರರಷ್ಟು ಮಾತ್ರವೇ ಇದೆ ಎಂದರು.<br /> <br /> `ನಕಲಿ' ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲು ಬ್ಯಾಂಕುಗಳು ಈಗಾಗಲೇ ಕ್ರಮ ಕೈಗೊಂಡಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> 2008-09ನೇ ಸಾಲಿನಲ್ಲಿ ಪ್ರಕಟಿಸಿದ ರೂ56,000 ಕೋಟಿ ಸಾಲ ಮನ್ನಾ ಪ್ಯಾಕೇಜ್ನಲ್ಲಿ ಅಕ್ರಮ ನಡೆದಿದೆ ಎಂದು `ಸಿಎಜಿ' ವರದಿ ಹೇಳಿದೆ. ಈ ವರದಿ ಆಧರಿಸಿ ಪ್ರತಿ ಫಲಾನುಭವಿ ಕುರಿತೂ ಪ್ರತ್ಯೇಕ ತನಿಖೆ ನಡೆಸುವಂತೆ ಬ್ಯಾಂಕುಗಳಿಗೆ `ಆರ್ಬಿಐ' ಸೂಚಿಸಿದೆ.<br /> <br /> ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು ಜೂನ್ 30ರ ಒಳಗಾಗಿ ಹಣಕಾಸು ಸಚಿವಾಲಯಕ್ಕೆ ಲೆಕ್ಕಪತ್ರ ವರದಿ ಸಲ್ಲಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>