<p>ಗೋಕಾಕ: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಸಾಹಿತ್ಯ ಕ್ಷೇತ್ರ ಬಡ ವಾಗುತ್ತಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಷಾದಿ ಸಿದರು.<br /> <br /> ನಗರಸಭೆ ಸಮುದಾಯ ಭವನದಲ್ಲಿ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ರಾಜ್ಯ ಸಮಿತಿ ಹಾಗೂ ಇಲ್ಲಿಯ ಸತೀಶ ಸಾಹಿತ್ಯ ಸೌರಭ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾದಂಬರಿಶ್ರೀ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ನಶಿಸಿಹೋಗುತ್ತಿರುವ ಸಾಹಿತ್ಯಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡ ಬೇಕಾಗಿದೆ. ಪುರಾಣಿಕರ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಆಯೋಜನೆ ಅಗತ್ಯ ವಾಗಿದೆ ಎಂದರು. ಕಾದಂಬರಿಕಾರ ಪುರಾಣಿಕರ ಸಾಹಿತ್ಯ ಮಾದರಿ ಯಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವ ಪೀಳಿಗೆ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.<br /> <br /> ನಗರದಲ್ಲಿ ಬೃಹದಾಕಾರದ ಗ್ರಂಥಾ ಲಯ ಸ್ಥಾಪನೆ ಮಾಡುವ ಉದ್ದೇಶ ವಿದೆ. ಗ್ರಂಥಾಲಯಕ್ಕೆ ಅಗತ್ಯ ಸ್ಥಳಾವ ಕಾಶವನ್ನು ನಗರಸಭೆ ಕಲ್ಪಿಸಿಕೊಡಲಿದೆ ಎಂಬ ಭರವಸೆ ನೀಡಿದರು.<br /> <br /> ರಾಜ್ಯದ ಗ್ರಂಥಾಲಯಗಳಲ್ಲಿ ಪುರಾಣಿಕ ಸೇರಿದಂತೆ ನಾಡಿನ ಖ್ಯಾತ ಸಾಹಿತಿಗಳ ಕೃತಿಗಳನ್ನು ಓದುಗರಿಗೆ ಮೀಸಲಿಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.<br /> <br /> ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಮಾತನಾಡಿ, ಸಾಹಿತ್ಯ ಪ್ರಾಶಸ್ತ್ಯ ಇಲ್ಲದ ಸಂದರ್ಭದಲ್ಲಿ ಗೋಕಾವಿ ನಾಡಿನಲ್ಲಿ ಸಾಹಿತ್ಯವನ್ನು ಪೋಷಿಸಿದ ಕೀರ್ತಿ ಪುರಾಣಿಕರಿಗೆ ಸಲ್ಲುತ್ತದೆ ಎಂದರು.<br /> <br /> ಪುರಾಣಿಕ ಅವರ ವ್ಯಕ್ತಿತ್ವ ಉತ್ತಮ ಸಮಾಜದ ಬೆಳವಣಿಗೆಗೆ ಸಹಕಾರಿ ಯಾಗಿತ್ತು. ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮನೋಭಾವನೆ ಅಡಕ ವಾಗಿದ್ದು, ಅವರ ಅನುಸರಿಸುತ್ತಿದ್ದ ಮೌಲ್ಯಾಧಾರಿತ ಜೀವನ ಇಂದಿಗೂ ಪ್ರಸ್ತುತ ಎಂದು ಹೇಳಿದರು.<br /> <br /> ಇದೇ ಸಂದರ್ಭದಲ್ಲಿ ಪುರಾಣಿಕರ ಕುರಿತು ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಪ್ರದರ್ಶನವನ್ನು ರಾಜ್ಯ ಗ್ರಂಥಾಲಯ ನಿರ್ದೇಶಕ ಕೆ.ಜಿ.ವೆಂಕಟೇಶ ಉದ್ಘಾಟಿ ಸಿದರು. ಆನಂದ ಪುರಾಣಿಕ, ಚಿಂತಕ ಹರ್ಷ ಡಂಬಳ, ಡಾ.ಎಚ್. ಬಿ. ಕೋಲ್ಕಾರ, ಎಸ್.ಬಿ.ಓಂಕಾರ, ಜಿ.ಜಿ. ಹೊಸಮನಿ ಉಪಸ್ಥಿತರಿದ್ದರು.<br /> <br /> ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಸ್ವಾಗತಿಸಿದರು. ಎಲ್.ಎಸ್.ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಜಿ.ವಿ.ಮಳಗಿ ನಿರೂಪಿಸಿದರು. ಮಹಾಲಿಂಗ ಮಂಗಿ ವಂದಿಸಿದರು. <br /> <br /> ಉಪನ್ಯಾಸ: ಚಿಕ್ಕೋಡಿಯ ಆರ್ಯಿಕಾ ಮಾತಾಜಿಯವರ ಚಾತುರ್ಮಾಸದ ಪ್ರಯುಕ್ತ ಇಲ್ಲಿನ 1008 ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ನಡೆದಿರುವ ಉಪನ್ಯಾಸದ ಸಮಾರೋಪ ಇದೇ 13ರಂದು ನಡೆಯಲಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋಕಾಕ: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಸಾಹಿತ್ಯ ಕ್ಷೇತ್ರ ಬಡ ವಾಗುತ್ತಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಷಾದಿ ಸಿದರು.<br /> <br /> ನಗರಸಭೆ ಸಮುದಾಯ ಭವನದಲ್ಲಿ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ರಾಜ್ಯ ಸಮಿತಿ ಹಾಗೂ ಇಲ್ಲಿಯ ಸತೀಶ ಸಾಹಿತ್ಯ ಸೌರಭ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾದಂಬರಿಶ್ರೀ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ನಶಿಸಿಹೋಗುತ್ತಿರುವ ಸಾಹಿತ್ಯಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡ ಬೇಕಾಗಿದೆ. ಪುರಾಣಿಕರ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಆಯೋಜನೆ ಅಗತ್ಯ ವಾಗಿದೆ ಎಂದರು. ಕಾದಂಬರಿಕಾರ ಪುರಾಣಿಕರ ಸಾಹಿತ್ಯ ಮಾದರಿ ಯಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವ ಪೀಳಿಗೆ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.<br /> <br /> ನಗರದಲ್ಲಿ ಬೃಹದಾಕಾರದ ಗ್ರಂಥಾ ಲಯ ಸ್ಥಾಪನೆ ಮಾಡುವ ಉದ್ದೇಶ ವಿದೆ. ಗ್ರಂಥಾಲಯಕ್ಕೆ ಅಗತ್ಯ ಸ್ಥಳಾವ ಕಾಶವನ್ನು ನಗರಸಭೆ ಕಲ್ಪಿಸಿಕೊಡಲಿದೆ ಎಂಬ ಭರವಸೆ ನೀಡಿದರು.<br /> <br /> ರಾಜ್ಯದ ಗ್ರಂಥಾಲಯಗಳಲ್ಲಿ ಪುರಾಣಿಕ ಸೇರಿದಂತೆ ನಾಡಿನ ಖ್ಯಾತ ಸಾಹಿತಿಗಳ ಕೃತಿಗಳನ್ನು ಓದುಗರಿಗೆ ಮೀಸಲಿಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.<br /> <br /> ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಮಾತನಾಡಿ, ಸಾಹಿತ್ಯ ಪ್ರಾಶಸ್ತ್ಯ ಇಲ್ಲದ ಸಂದರ್ಭದಲ್ಲಿ ಗೋಕಾವಿ ನಾಡಿನಲ್ಲಿ ಸಾಹಿತ್ಯವನ್ನು ಪೋಷಿಸಿದ ಕೀರ್ತಿ ಪುರಾಣಿಕರಿಗೆ ಸಲ್ಲುತ್ತದೆ ಎಂದರು.<br /> <br /> ಪುರಾಣಿಕ ಅವರ ವ್ಯಕ್ತಿತ್ವ ಉತ್ತಮ ಸಮಾಜದ ಬೆಳವಣಿಗೆಗೆ ಸಹಕಾರಿ ಯಾಗಿತ್ತು. ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮನೋಭಾವನೆ ಅಡಕ ವಾಗಿದ್ದು, ಅವರ ಅನುಸರಿಸುತ್ತಿದ್ದ ಮೌಲ್ಯಾಧಾರಿತ ಜೀವನ ಇಂದಿಗೂ ಪ್ರಸ್ತುತ ಎಂದು ಹೇಳಿದರು.<br /> <br /> ಇದೇ ಸಂದರ್ಭದಲ್ಲಿ ಪುರಾಣಿಕರ ಕುರಿತು ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಪ್ರದರ್ಶನವನ್ನು ರಾಜ್ಯ ಗ್ರಂಥಾಲಯ ನಿರ್ದೇಶಕ ಕೆ.ಜಿ.ವೆಂಕಟೇಶ ಉದ್ಘಾಟಿ ಸಿದರು. ಆನಂದ ಪುರಾಣಿಕ, ಚಿಂತಕ ಹರ್ಷ ಡಂಬಳ, ಡಾ.ಎಚ್. ಬಿ. ಕೋಲ್ಕಾರ, ಎಸ್.ಬಿ.ಓಂಕಾರ, ಜಿ.ಜಿ. ಹೊಸಮನಿ ಉಪಸ್ಥಿತರಿದ್ದರು.<br /> <br /> ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಸ್ವಾಗತಿಸಿದರು. ಎಲ್.ಎಸ್.ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಜಿ.ವಿ.ಮಳಗಿ ನಿರೂಪಿಸಿದರು. ಮಹಾಲಿಂಗ ಮಂಗಿ ವಂದಿಸಿದರು. <br /> <br /> ಉಪನ್ಯಾಸ: ಚಿಕ್ಕೋಡಿಯ ಆರ್ಯಿಕಾ ಮಾತಾಜಿಯವರ ಚಾತುರ್ಮಾಸದ ಪ್ರಯುಕ್ತ ಇಲ್ಲಿನ 1008 ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ನಡೆದಿರುವ ಉಪನ್ಯಾಸದ ಸಮಾರೋಪ ಇದೇ 13ರಂದು ನಡೆಯಲಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>